ಆರೋಗ್ಯ, ಬುದ್ಧಿಶಕ್ತಿ ಮತ್ತು ಚುರುಕಿಗೆ ಸರಳ ಪರಿಹಾರ.
ಗಂಡು ಮಕ್ಕಳಿಗೆ 21 ವರ್ಷದವರೆಗೆ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷದವರೆಗೆ (ಇದು ವಯಸ್ಸಿನ ಮಿತಿಯಲ್ಲ, ಪ್ರಬುದ್ಧತೆಯ ಹಂತದ ಸೂಚಕ) ವಾರಕ್ಕೊಮ್ಮೆಯಾದರೂ ಅರಳೆಣ್ಣೆ ಅಭ್ಯಂಜನ ಸ್ನಾನ ಮಾಡಿಸುವುದು ಅತ್ಯಂತ ಪ್ರಯೋಜನಕಾರಿ. ದೊಡ್ಡವರೂ ಸಹ ಈ ಅಭ್ಯಾಸವನ್ನು ಪಾಲಿಸಬಹುದು. ಹರಳೆಣ್ಣೆಯನ್ನು ತಲೆಗೆ, ಹೊಕ್ಕಳಿಗೆ, ಪಾದಗಳಿಗೆ ಮತ್ತು ಅಂಗೈಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಚ್ಚಿ, ನಂತರ ಮಕ್ಕಳನ್ನು ಬಿಸಿಲಿನಲ್ಲಿ ಸ್ವಲ್ಪ ಸಮಯ ಓಡಾಡಲು ಬಿಡಬೇಕು. ಇದರಿಂದ ಮೂರು ಪ್ರಮುಖ ಫಲಿತಾಂಶಗಳು ದೊರೆಯುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮೊದಲನೆಯದಾಗಿ, ಮಕ್ಕಳ ದೇಹದ ಉಷ್ಣಾಂಶ ಸಮತೋಲನಗೊಳ್ಳುತ್ತದೆ. ಇದು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.
ಎರಡನೆಯದಾಗಿ, ಜ್ಯೋತಿಷ್ಯದ ಪ್ರಕಾರ, ಈ ಅಭ್ಯಾಸವು ಮಕ್ಕಳ ಕರ್ಮಫಲಗಳನ್ನು ಕಡಿಮೆ ಮಾಡುತ್ತದೆ, ಬುದ್ಧಿಶಕ್ತಿಯನ್ನು ಚುರುಕುಗೊಳಿಸುತ್ತದೆ ಮತ್ತು ಗ್ರಹದೋಷಗಳನ್ನು ನಿವಾರಿಸುತ್ತದೆ. ಇದು ಅನುಭವದ ಮೂಲಕ ಸತ್ಯ ಎಂದು ಹೇಳಲಾಗುತ್ತದೆ. ಪೂರ್ವಜರು ಮತ್ತು ಗುರುಗಳ ಅನುಭವವು ಈ ಸತ್ಯಕ್ಕೆ ಸಾಕ್ಷಿಯಾಗಿದೆ.
ವಾರಕ್ಕೊಮ್ಮೆ, ವಿಶೇಷವಾಗಿ ರಜಾ ದಿನವಾದ ಭಾನುವಾರ, ಮಕ್ಕಳನ್ನು ಪ್ರವಾಸಗಳಿಗೆ ಕರೆದುಕೊಂಡು ಹೋಗುವ ಬದಲು ಅವರ ಆರೋಗ್ಯದ ಕಡೆ ಗಮನ ಹರಿಸಿದರೆ ವಾರವಿಡೀ ಮಕ್ಕಳು ಹೆಚ್ಚು ಚುರುಕಾಗಿರುತ್ತಾರೆ. ಅರಳೆಣ್ಣೆ ಸ್ನಾನದಿಂದ ಅವರ ನೆನಪಿನ ಶಕ್ತಿ (ಮೆಮರಿ ಪವರ್) ಹೆಚ್ಚುತ್ತದೆ. ಆಲೋಚನಾ ಶಕ್ತಿ ಉತ್ತಮವಾಗುತ್ತದೆ ಮತ್ತು ದೃಷ್ಟಿ ಉತ್ತಮಗೊಳ್ಳುತ್ತದೆ. ಕರಿಬೇವು ಎಲೆಗಳನ್ನು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ ಎಂದು ಆಯುರ್ವೇದ ಮತ್ತು ಹಿರಿಯರು ಹೇಳುವಂತೆ, ಹರಳೆಣ್ಣೆಯೂ ದೃಷ್ಟಿಗೆ ಸಹಕಾರಿ.
ಹರಳೆಣ್ಣೆಯನ್ನು ಹೆಚ್ಚು ಸುರಿಯದೆ, ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ತಲೆ, ಅಂಗೈ, ಪಾದ ಮತ್ತು ಹೊಕ್ಕಳಿಗೆ ಹಚ್ಚಬೇಕು. ನಂತರ ತುಂಬಾ ಬಿಸಿ ಇಲ್ಲದ, ಮಂದ ಬೆಚ್ಚಗಿನ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಅವರಿಗೆ ಬಹಳ ಒಳ್ಳೆಯದಾಗುತ್ತದೆ. ಈ ಅಭ್ಯಾಸವನ್ನು ಎಲ್ಲರೂ, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ, ಅನುಸರಿಸಬಹುದು. ಇದು ಎಲ್ಲಾ ವಿಧದಲ್ಲೂ ಶುಭಕರ ಎಂದು ಗುರೂಜಿ ವಿವರಿಸಿದ್ದಾರೆ.
For More Updates Join our WhatsApp Group :



