ತುಮಕೂರು : ನ್ಯಾಷನಲ್ ಹ್ಯಾಂಡಲೂಮ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಎನ್.ಹೆಚ್.ಡಿ.ಪಿ) ಯೋಜನೆಯಡಿ ಜನವರಿ 4 ರಂದು ಕಲ್ಲೂರು ಶ್ರೀ ರಾಮ ಮಂದಿರ ಆವರಣದಲ್ಲಿ ರೇಷ್ಮೆ ಕೈಮಗ್ಗ ನೇಕಾರರ ಸಹಕಾರ ಸಂಘ ನಿ, ಕಲ್ಲೂರು ವತಿಯಿಂದ ಕೊಳ್ಳುವವರ ಹಾಗೂ ಮಾರಾಟಗಾರರ ಸಮಾವೇಶವನ್ನು ಏರ್ಪಡಿಸಲಾಗಿದೆ.
![ಯುವಕ](http://pragatitv.in/wp-content/uploads/2022/09/JEENI_ADD_WEB-1024x576.jpg)
ಈ ಸಮಾವೇಶದಲ್ಲಿ ಕ್ಲಸ್ಟರ್ನಲ್ಲಿ ಉತ್ಪಾದಿಸುವ ಅತ್ಯಾಕರ್ಶಕ ಬಣ್ಣಗಳ ವಿವಿಧ ನಮೂನೆಗಳ ವಿನ್ಯಾಸವನ್ನೊಳಗೊಂಡ ಅಪ್ಪಟ ರೇಷ್ಮೆ ಸೀರೆಗಳನ್ನು ಪ್ರದರ್ಶನ ಮಾಡಲಾಗುವುದು.
ಈ ಮೇಳಕ್ಕೆ ಆಸಕ್ತಿಯುಳ್ಳ ರೇಷ್ಮೆ ಸೀರೆಗಳ ಚಿಲ್ಲರೆ/ಸಗಟು ಮಾರಾಟಗಾರರು ಭಾಗವಹಿಸಿ ತಾವು ಇಚ್ಚಿಸುವಂತಹ ಸೀರೆಗಳನ್ನು ಖರೀದಿಸಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2275370 ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Pragati TV Social Connect for more latest u
Hello my loved one I want to say that this post is amazing great written and include almost all significant infos I would like to look extra posts like this