“ಧೈರ್ಯ ಇದ್ದರೆ CBI ತನಿಖೆ ಘೋಷಿಸಿ”

“ಧೈರ್ಯ ಇದ್ದರೆ CBI ತನಿಖೆ ಘೋಷಿಸಿ”

ಭ್ರಷ್ಟಾಚಾರ 63%? — ಸರ್ಕಾರಕ್ಕೆ ಆರ್. ಅಶೋಕ್ ಸವಾಲು

ಬೆಂಗಳೂರುಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂಬ ಉಪಲೋಕಾಯುಕ್ತ  ನ್ಯಾಯಮೂರ್ತಿ ಬಿ. ವೀರಪ್ಪ ಅವರ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ಪಕ್ಷ ಬಿಜೆಪಿ ಇದನ್ನೇ ಅಸ್ತ್ರವಾಗಿಸಿಕೊಂಡು ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿದೆ. 40% ಕಮಿಷನ್ ಎಂದು ನಗರದ ತುಂಬಾ ಪೇ ಸಿಎಂ ಪೋಸ್ಟರ್​ ಅಂಟಿಸಿ ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್​​ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಮುಡಾ ಹಗರಣ ನಡೆದಾಗ ಪದೇಪದೆ ಸಿಎಂ ಸಾಕ್ಷಿ ಕೇಳುತ್ತಿದ್ದರು. ಕೋರ್ಟ್ ಮತ್ತು ಜಡ್ಜ್​ಗಿಂತ ದೊಡ್ಡ ಸಾಕ್ಷಿ ಬೇರೆ ಯಾವುದೂ ಇಲ್ಲ ಎಂದು ಆರ್​​ ಅಶೋಕ್ ಟಾಂಗ್​ ನೀಡಿದ್ದಾರೆ.

ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿಸಿ: ಆರ್​. ಅಶೋಕ್ ಕಿಡಿ

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್​. ಅಶೋಕ್, ನಾವು 60 ಪರ್ಸೆಂಟ್​ ಕಮಿಷನ್ ಸರ್ಕಾರ ಎಂದು ಹೇಳಿದ್ದೆವು. ಆದರೆ ನ್ಯಾಯಾಧೀಶರು 63% ಭ್ರಷ್ಟಾಚಾರ ಇದೆ ಎಂದು ಹೇಳಿದ್ದಾರೆ. 63% ಕಮಿಷನ್​ ಆರೋಪದ ತನಿಖೆಗೆ ಎಸ್​​​ಐಟಿ ಯಾವಾಗ ಮಾಡುತ್ತೀರಿ? ನ್ಯಾಯಾಧೀಶರು ನಿಮ್ಮ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿಸಿ ಎಂದು ವಾಗ್ದಾಳಿ ಮಾಡಿದ್ದಾರೆ.

ಬಿಹಾರ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಹಾರ ಚುನಾವಣೆಗೆ ಕರ್ನಾಟಕದಿಂದ 300 ಕೋಟಿ ರೂ. ಹೋಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಹಣ ಕೊಡುವವರೆಗೆ ಅಷ್ಟೇ ಇಲ್ಲಿ ಅಧಿಕಾರ. ಕಾಂಗ್ರೆಸ್ ಮನೆ ದೇವರೇ ಭ್ರಷ್ಟಾಚಾರ. ಪೇ ಸಿಎಂ ಅಂತಾ ರೋಡ್ ರೋಡ್​ನಲ್ಲಿ ಪೋಸ್ಟರ್ ಅಂಟಿಸಿದ್ರಲ್ಲಾ, ಈಗ ನಿಮ್ಮ ಮುಖದ ಮೇಲೆ ಪೋಸ್ಟರ್ ಅಂಟಿಸಬೇಕು. ಉಪಲೋಕಾಯುಕ್ತರ ಹೇಳಿಕೆ ಮೇಲೆ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆರ್​. ಅಶೋಕ್ ಕಿಡಿಕಾರಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *