ಯುವತಿಯರನ್ನೇ ಟಾರ್ಗೆಟ್ ಮಾಡಿ ಮದುವೆಯಾಗುವ ನೆಪದಲ್ಲಿ ವಂಚನೆ ಮಾಡುವುದೇ ಇವನ ಕಾಯಕ.?

ಯುವತಿಯರನ್ನೇ ಟಾರ್ಗೆಟ್ ಮಾಡಿ ಮದುವೆಯಾಗುವ ನೆಪದಲ್ಲಿ ವಂಚನೆ ಮಾಡುವುದೇ ಇವನ ಕಾಯಕ.?

ಬೆಂಗಳೂರು: ಮದುವೆ ನೆಪದಲ್ಲಿ ಯುವತಿರಿಗೆ ವಂಚನೆ ಮಾಡುತ್ತಿದ್ದ ಯುವಕ ಸಿಕ್ಕಬಿದ್ದಿದ್ದಾನೆ. ಬುದ್ದಿವಂತ ಸಿನಿಮಾದ ಹೀರೋ ಉಪೇಂದ್ರ ಸ್ಟೈಲ್ ನಲ್ಲಿ ಯುವತಿಯರನ್ನು ಮದುವೆಯಾಗಿ ವಂಚಿಸುವುದೇ ಕಾಯಕ ಮಾಡಿಕೊಂಡಿದ್ದವು ಇದೀಗ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಪಟ್ಟೇಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್, ಯುವತಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಗಿ ಮದುವೆಯಾಗುತ್ತಾನೆ. ಆರು ತಿಂಗಳ ಸಂಸಾರ ಮಾಡಿ, ಆದಾದ ನಂತರ ದುಡ್ಡು, ಒಡವೆ ದೋಚಿ ಪರಾರಿಯಾಗುತ್ತಾನೆ. ಅದರಂತೆ ಪರಿಚಯವಾಗಿದ್ದ ಯುವತಿಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ. ಇದೀಗ ಪೊಲೀಸರು, ಮಿಥುನ್ ಕುಮಾರ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

6 ವರ್ಷಗಳ ಹಿಂದೆ ಯುವತಿಯೊಬ್ಬಳಿಗೆ ಈ ಮಿಥುನ್ ಕುಮಾರ್ ಪರಿಚಯವಾಗಿದ್ದು, ಒಂದು ವರ್ಷದ ಹಿಂದೆ ಆ ಯುವತಿಯನ್ನೇ ವಿವಾಹ ಆಗಿದ್ದಾನೆ. ನಾಲ್ಕು ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದಾನೆ. ನಂತರ ದುಡ್ಡು, ಒಡವೆ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಮೋಸ ಹೋದ ಯುವತಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಂಚಕ ಮಿಥುನ್​ ನನ್ನು ಬಂಧಿಸಿದ್ದಾರೆ.ತಂದೆ ತಾಯಿ ಇಲ್ಲದ ಅಮಾಯಕ ಯುವತಿಯರನ್ನು ಟಾರ್ಗೆಟ್ ಮಾಡಿ ವಂಚಿಸುವ ಮಿಥುನ್ ಕುಮಾರ್ ನ ಕಾಯಕವಾಗಿದೆ.

ಈ ಹಿಂದೆಯೂ ಇಂಥದ್ದೇ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಈ ಹಿಂದೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಿಥುನ್ ಕುಮಾರ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿತ್ತು. ಆಗ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿ, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಆದರೂ ಬುದ್ಧಿ ಕಲಿಯದ ಮಿಥುನ್, ಮತ್ತೆ ಬೇರೊಬ್ಬ ಯುವತಿಯನ್ನು ನಂಬಿಸಿ ಮದುವೆಯಾಗಿ ಕೈ ಕೊಟ್ಟು ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *