ಟೀಚರ್ಸ್‌ಗೆ ಜ್ಞಾನ ಇಲ್ಲ” – ಷಡಕ್ಷರಿಯ ವಿವಾದಾತ್ಮಕ ಹೇಳಿಕೆ ಕೊಪ್ಪಳದಲ್ಲಿ ಸಂಚಲನ.

ಟೀಚರ್ಸ್‌ಗೆ ಜ್ಞಾನ ಇಲ್ಲ” – ಷಡಕ್ಷರಿಯ ವಿವಾದಾತ್ಮಕ ಹೇಳಿಕೆ ಕೊಪ್ಪಳದಲ್ಲಿ ಸಂಚಲನ.

ಕೊಪ್ಪಳ : ಟೀಚರ್ಸ್​​ಗೆ ಜ್ಞಾನ ಇರಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಿನ್ನೆ‌ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಅಭಿನಂದನಾ ಸಭೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗೆ ಉತ್ತರಿಸುವ ವೇಳೆ ಷಡಕ್ಷರಿ ಅವರು ಆಡಿರುವ ಮಾತುಗಳೀಗ ಭಾರಿ ಚರ್ಚೆಗೆ ಗ್ರಾಸವಾಗಿವೆ. ಶಿಕ್ಷಕ ಬಾಳಪ್ಪ ಕಾಳೆ ಕೇಳಿದ್ದ ಪ್ರಶ್ನೆಗೆ ಉತ್ತರಿಸುವ ವೇಳೆ ಶಿಕ್ಷಕರಿಗೆ ನಾಲೆಡ್ಜ್ ಇರಲ್ಲ ಎಂದು ಷಡಕ್ಷರಿ ಅವರು ಹೇಳಿದ್ದು, ಇದಕ್ಕೆ ಬಾಳಪ್ಪ ಕಾಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಾನು ಹೇಳೋದು ಕೇಳಿಸಿಕೊಳ್ಳಿ. ಅಕಾಡೆಮಿಕ್ ನಾಲೆಡ್ಜ್ ಬೇರೆ, ಅಡ್ಮಿನಿಸ್ಟೇಶನ್​​ ನಾಲೆಡ್ಜ್ ಬೇರೆ. ನಾನು ಅಡ್ಮಿನಿಸ್ಟ್ರೇಶನ್ ಬಗ್ಗೆ ಮಾತನಾಡುತ್ತಿದ್ದು, ಕೆಲವರಿಗೆ ಕಂಪ್ಯೂಟರ್ ನಾಲೆಡ್ಜ್ ಇರಲ್ಲ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *