ಶಾಸಕ ಷಡಕ್ಷರಿ ವಿರುದ್ಧ ಕಾರ್ಯಕರ್ತರ ಸಭೆ

ತಿಪಟೂರು: ಶಾಸಕ ಕೆ.ಷಡಕ್ಷರಿ ಅವರು ಗೆದ್ದ ನಂತರ ಮುಖಂಡ ಲೋಕೇಶ್ವರ್ ಅವರನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ನೊಂದ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಗರದ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೂ ಮುಖಂಡ ಲೋಕೇಶ್ವರ್ ತೆರಳಿ ಹಗಲು ರಾತ್ರಿಯ ಪರಿವಿಲ್ಲದೆ ಷಡಕ್ಷರಿಯವರ ಗೆಲುವಿಗೆ ಶ್ರಮಿಸಿದ್ದಾರೆ ಮತ್ತು ಶಾಸಕರು ೭೧ ಸಾವಿರ ಮತಗಳನ್ನು ಪಡೆಯಲು ಕಾರಣಕರ್ತರೂ ಆಗಿದ್ದಾರೆ. ಆದರೆ ಗೆದ್ದ ನಂತರ ಶಾಸಕರು ಗೆಲುವಿಗಾಗಿ ಶ್ರಮಿಸಿದವರನ್ನು ಕಡೆಗಣಿಸಿರುವುದು ಸರಿಯಲ್ಲ. ಅವರ ವರ್ತನೆಯನ್ನು ಕಂಡು ನಾವೆಲ್ಲ ಸಭೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ನಗರದ ಸರ್ಕಾರಿ ಕಚೇರಿಗಳಲ್ಲಿ ಬಡವರ ಕೆಲಸಗಳು ನಡೆಯುತ್ತಿಲ್ಲ. ಪಕ್ಷಕ್ಕಾಗಿ ದುಡಿದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸ್ಪಂದಿಸುವ ಕೆಲಸವೂ ಆಗುತ್ತಿಲ್ಲ. ಶಾಸಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಲೋಕೇಶ್ವರ್, ನಗರಸಭಾ ಮಾಜಿ ಉಪಾಧ್ಯಕ್ಷ ಸೊಪುö್ಪ ಗಣೇಶ್, ಭಾರತಿ ಮಂಜುನಾಥ್, ಮುನ್ನ, ಲೋಕೇಶ್ವರ್ ಬೆಂಬಲಿಗರಾದ ರಂಗಾಪುರ ದೇವರಾಜು, ರೇಣು ಪಟೇಲ್, ಹೊನ್ನವಳ್ಳಿ ಏಜೆಸ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಲೋಕೇಶ್ವರ್ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Pragati TV Social Connect for more latest u

Leave a Reply

Your email address will not be published. Required fields are marked *