33 ಲಕ್ಷ ವಿಮೆಗಾಗಿ ತಾಯಿಯೇ ಮಗನ ಕೊ*ಲೆ; ಹೆದ್ದಾರಿಯಲ್ಲಿ ಶವ ಎಸೆದ ಶಾಕ್ ಘಟನೆ – ಕಾನ್ಪುರ.

33 ಲಕ್ಷ ವಿಮೆಗಾಗಿ ತಾಯಿಯೇ ಮಗನ ಕೊ*ಲೆ; ಹೆದ್ದಾರಿಯಲ್ಲಿ ಶವ ಎಸೆದ ಶಾಕ್ ಘಟನೆ – ಕಾನ್ಪುರ.

ಕಾನ್ಪುರ: ತಾಯಿಯೇ ಮಗನಕೊಲೆಮಾಡಿ ಹೆದ್ದಾರಿಯಲ್ಲಿ ಶವ ಎಸೆದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆ ಕಾರಣ 33 ಲಕ್ಷದ ವಿಮೆ ಹಾಗೂ ಆಕೆಗಿರುವ ಅಕ್ರಮ ಸಂಬಂಧ. ಆ ಮಹಿಳೆ ತನ್ನ ಪ್ರಿಯಕರನಿಂದ ತನ್ನ ಮಗನನ್ನು ಕೊಲೆ ಮಾಡಿಸಿ, ಘಟನೆಯನ್ನು ಅಪಘಾತದಂತೆ ಬಿಂಬಿಸಿ, ಶವವನ್ನು ಹೆದ್ದಾರಿಯಲ್ಲಿ ಎಸೆದಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದಾಗ, ಸತ್ಯ ಬೆಳಕಿಗೆ ಬಂದಿದೆ. ಈ ಘಟನೆ ಕಾನ್ಪುರ ದೇಹತ್‌ನ ಅಂಗದ್‌ಪುರ್ ಬರೌರ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ 23 ವರ್ಷದ ಪ್ರದೀಪ್ ಶರ್ಮಾ ಅವರ ಶವ ಅಕ್ಟೋಬರ್ 27 ರಂದು ಔರೈಯಾ-ಕಾನ್ಪುರ್ ಹೆದ್ದಾರಿಯ ಬದಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ, ಈ ಪ್ರಕರಣವು ರಸ್ತೆ ಅಪಘಾತದಂತೆ ಕಂಡುಬಂದರೂ, ಮರಣೋತ್ತರ ಪರೀಕ್ಷೆಯ ವರದಿ ಮತ್ತು ತನಿಖೆಯ ನಂತರ, ಪೊಲೀಸರು ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು.

ಪೊಲೀಸರು ತನಿಖೆ ಆರಂಭಿಸಿದಾಗ, ಆಘಾತಕಾರಿ ವಿಷಯಗಳು ಬಹಿರಂಗಗೊಂಡವು. ಪ್ರದೀಪ್ ಅವರ ಅಜ್ಜ ಜಗದೀಶ್ ನಾರಾಯಣ್, ರಿಷಿ ಕಟಿಯಾರ್ ಅಲಿಯಾಸ್ ರೇಶು ಮತ್ತು ಅವರ ಸಹೋದರ ಮಾಯಾಂಕ್ ಅಲಿಯಾಸ್ ಮನೀಶ್ ವಿರುದ್ಧ ಅಪಹರಣ ಮತ್ತು ಕೊಲೆ ಆರೋಪ ಹೊರಿಸಿ ದೂರು ದಾಖಲಿಸಿದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರಿಗಾಗಿ ಹುಡುಕಾಟ ಆರಂಭಿಸಿದರು. ಮಂಗಳವಾರ ರಾತ್ರಿ, ನಿಗೋಹಿಯ ದೂರ್ವಶ ಆಶ್ರಮದ ಬಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದಾರೆ. ಇದರಲ್ಲಿ ರಿಷಿಯ ಕಾಲಿಗೆ ಗುಂಡು ಹಾರಿಸಲಾಯಿತು ಮತ್ತು ಇಬ್ಬರೂ ಸಹೋದರರನ್ನು ಬಂಧಿಸಲಾಯಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *