ಹುಲಿ ಸೆರೆಗೆ ನಿರ್ಲಕ್ಷ್ಯ: ಮತ್ತೆ ದುರಂತ? ರೈತರ ಎಚ್ಚರಿಕೆ ಅರಣ್ಯ ಇಲಾಖೆಗೆ!

ಹುಲಿ ಸೆರೆಗೆ ನಿರ್ಲಕ್ಷ್ಯ: ಮತ್ತೆ ದುರಂತ? ರೈತರ ಎಚ್ಚರಿಕೆ ಅರಣ್ಯ ಇಲಾಖೆಗೆ!

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ರಾಜ್ಯದ ಪ್ರಮುಖ ಟೈಗರ್ ರಿಸರ್ವ್ ಆಗಿರುವ ಬಂಡೀಪುರದಲ್ಲಿ ಹುಲಿ ಸೆರೆಗೆ ಕೇವಲ ಒಂದೇ ಒಂದು ಬೋನ ಇರುವುದರ ಜೊತೆ, ಕೂಂಬಿಂಗ್‌ಗಾಗಿ ವಾಹನ ಹಾಗೂ ಡೀಸೆಲ್ ಲಭ್ಯವಿಲ್ಲ ಎಂಬ ಅಚ್ಚರಿಯ ಸಂಗತಿ ಹೊರಬಂದಿದೆ.

ಕಗ್ಗಲಹುಂಡಿ ಗ್ರಾಮದ ಆತಂಕ

ಗುಂಡ್ಲುಪೇಟೆ ತಾಲ್ಲೂಕಿನ ಕಗ್ಗಲಹುಂಡಿ ಕಾಡಂಚಿನ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಹುಲಿ ನಿತ್ಯ ಜಮೀನಿನಲ್ಲಿ ಸಂಚರಿಸುತ್ತಿದ್ದು, ಎರಡು ಕಾಡುಹಂದಿಗಳನ್ನು ಬೇಟೆಯಾಡಿ ತಿಂದಿದೆ. ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ವಿಷ ಹಾಕಲು ನಾವು ಸಿದ್ಧಎಂಬ ಎಚ್ಚರಿಕೆ!

ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. “ನಿತ್ಯ ಜೀವ ಕೈಯಲ್ಲಿ ಹಿಡಿದು ಜಮೀನಿಗೆ ಹೋಗಬೇಕಾದ ಸ್ಥಿತಿ ಬಂದಿದೆ. ಅಗತ್ಯವಾದರೆ ವಿಷ ಹಾಕುವಂತೆಯೂ ಆಗಬಹುದು,” ಎಂದು ಗ್ರಾಮೀಣ ರೈತರು ಕಿಡಿಕಾರಿದ್ದಾರೆ.

2014ರಲ್ಲಿ ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ ಐದು ಹುಲಿಗಳಿಗೆ ವಿಷ ಹಾಕಿ ಕೊಲ್ಲಲಾಗಿದ್ದ ಕಹಿ ಘಟನೆ ಇತ್ತೀಚಿನ ಹಿನ್ನಲೆಯಲ್ಲಿ ಮತ್ತೆ ಚರ್ಚೆಗೆ ಬಂದಿದೆ.

ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಮುಂದಿನ ದುರಂತಕ್ಕೆ ಕಾರಣ?

ಹುಲಿ ಹತ್ಯೆ ಅಥವಾ ಮಾನವ ಪ್ರಾಣಹಾನಿ ಸಂಭವಿಸಿದರೆ, ಬಂಡೀಪುರ ಟೈಗರ್ ರಿಸರ್ವ್‌ನ ನಿರ್ಲಕ್ಷ್ಯವೇ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನು ತಡವಿಲ್ಲದೇ ಕುಂಬಿಂಗ್ ಕಾರ್ಯಾಚರಣೆ ಆರಂಭಿಸಿ, ರೈತರ ಹಾಗೂ ಜಾನುವಾರುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *