ಮಂಗಳೂರು: ಧರ್ಮಸ್ಥಳ ‘ಬುರುಡೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಶವ ಹೂತು ಹಾಕುವ ಸಂಬಂಧ ಗ್ರಾಮ ಪಂಚಾಯತ್ ದಾಖಲೆಗಳತ್ತಲೂ ಎಸ್ಐಟಿ ತನ್ನ ಕಣ್ಣು ಹರಿಸಿದೆ.
ಮುಖ್ಯ ಬೆಳವಣಿಗೆಗಳು:
* ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಆರೋಪದಂತೆ ಶವ ದಫನಕ್ಕೆ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ.
* 1987ರಿಂದ 2025ರವರೆಗಿನ ಎಲ್ಲಾ ದಾಖಲೆಗಳನ್ನು SIT ಸಂಗ್ರಹಿಸಿ ಪರಿಶೀಲನೆ ಪ್ರಾರಂಭಿಸಿದೆ.
* ಮಾಜಿ ಅಧ್ಯಕ್ಷರು, ಪಿಡಿಓ ಹಾಗೂ ಸಿಬ್ಬಂದಿಗಳಿಗೆ ವಿಚಾರಣೆ ಬಿಸಿ ತಟ್ಟುತ್ತಿದೆ.
* ಬಂಗ್ಲೆಗುಡ್ಡದಲ್ಲಿ ರಹಸ್ಯ ಶೋಧ ನಡೆಸಿದ ಎಸ್ಐಟಿ, ವಿಠಲ ಗೌಡ ನೀಡಿದ ಹೇಳಿಕೆಯ ಸತ್ಯಾಸತ್ಯತೆ ಪತ್ತೆಹಚ್ಚಲು ಪಣ ತೊಟ್ಟಿದೆ.
ವಿಠಲ ಗೌಡ ಹೇಳಿಕೆ:
ಅವರು ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಬಂಗ್ಲೆಗುಡ್ಡದಲ್ಲಿ ಮೂರು ಅಸ್ಥಿಪಂಜರಗಳು ಹಾಗೂ ಐದು ಶವಗಳು ಸಿಕ್ಕಿರುವುದಾಗಿ, ಅದರಲ್ಲಿ ಮಗು ಎಲುಬು ಕೂಡ ಗೋಚರಿಸಿತು ಎಂದು ಹೇಳಿಕೊಂಡಿದ್ದರು.
ಬಿಜೆಪಿಯ ಅಸಮಾಧಾನ:
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, SIT ತನಿಖಾ ಕ್ರಮವನ್ನು ಪ್ರಶ್ನಿಸಿ, ತನಿಖೆಯ ವಿಶ್ವಾಸಾರ್ಹತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಿಡಿಕಾರಿದ್ದಾರೆ.
ಹೊಸ ದೂರು:
ಮಹೇಶ್ ಶೆಟ್ಟಿ ತಿಮರೋಡಿ SITಗೆ ಹೊಸ ದೂರು ನೀಡಿ, 2006–2010ರ ನಡುವೆ ಧರ್ಮಸ್ಥಳದ ವಸತಿಗೃಹಗಳಲ್ಲಿ ಸಂಭವಿಸಿದ ಅಸಹಜ ಸಾವುಗಳನ್ನು ಕೊಲೆ ಪ್ರಕರಣಗಳಂತೆ FIR ದಾಖಲಿಸುವಂತೆ ಆಗ್ರಹಿಸಿದ್ದಾರೆ. ಅನೇಕ ಅಪರಿಚಿತ ಶವಗಳನ್ನು ಉದ್ದೇಶಪೂರ್ವಕವಾಗಿ ಅನಾಥ ಶವವೆಂದು ಘೋಷಿಸಿ ದಫನ ಮಾಡಲಾಗಿದೆ ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :
