Pawan Kalyan ಸಿನಿಮಾ ನಿರ್ದೇಶನ ಮಾಡುವ ಆಸೆ : ನಟ Dhanush

Pawan Kalyan ಸಿನಿಮಾ ನಿರ್ದೇಶನ ಮಾಡುವ ಆಸೆ : ನಟ Dhanush

ಧನುಷ್ ಅವರು ‘ರಾಯನ್’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಜೂನ್ 20ರಂದು ‘ಕುಬೇರ’ ಸಿನಿಮಾ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ, ಪವನ್ ಕಲ್ಯಾಣ್ ಅವರ ಚಿತ್ರವನ್ನು ತೆಲುಗಿನಲ್ಲಿ ನಿರ್ದೇಶನ ಮಾಡುವ ಆಸೆಯನ್ನು ಧನುಷ್ ವ್ಯಕ್ತಪಡಿಸಿದ್ದಾರೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿರುವುದರಿಂದ ಈ ಯೋಜನೆ ಯಶಸ್ವಿಯಾಗುವುದೇ ಎಂಬುದು ಕಾದು ನೋಡಬೇಕಿದೆ.

ನಟ ಧನುಷ್ ಅವರು ಈಗ ಕೇವಲ ನಟ ಮಾತ್ರ ಅಲ್ಲ. ಅವರು ಈಗ ಖ್ಯಾತ ನಿರ್ದೇಶಕರು ಕೂಡ ಹೌದು. ಈ ಮೊದಲು ಅವರು ನಿರ್ದೇಶನ ಮಾಡಿದ್ದ ‘ರಾಯನ್’ ಚಿತ್ರವು ಯಶಸ್ಸು ಕಂಡಿತು. ಇದರಿಂದ ಧನುಷ್ ಒಳ್ಳೆಯ ನಿರ್ದೇಶಕ ಎನಿಸಿಕೊಂಡರು. 2024ರಲ್ಲಿ ಈ ಚಿತ್ರವು ರಿಲೀಸ್ ಆಯಿತು. ಈಗ ಅವರ ನಟನೆಯ ‘ಕುಬೇರ’ ಸಿನಿಮಾ ಜೂನ್ 20ರಂದು ರಿಲೀಸ್ ಆಗಲಿದೆ. ಶೇಖರ್ ಕಮ್ಮುಲ್ಲಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ಬ್ಯುಸಿ ಇದ್ದಾರೆ.  ಈ ವೇಳೆ ಪವನ್ ಕಲ್ಯಾಣ್ಗೆ ಸಿನಿಮಾ ಮಾಡುವ ಆಸೆಯನ್ನು ಅವರು ಹೊರಹಾಕಿದ್ದಾರೆ.

ಇತ್ತೀಚೆಗೆ ‘ಕುಬೇರ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಚಿತ್ರದಲ್ಲಿ ನಾಗಾರ್ಜುನ ಕೂಡ ನಟಿಸಿದ್ದಾರೆ. ಹೀಗಾಗಿ, ಅದ್ದೂರಿಯಾಗಿ ಈವೆಂಟ್ ನಡೆದಿದೆ. ಧನುಷ್ ಅವರು ಪವನ್ ಕಲ್ಯಾಣ್ಗೆ ನಟನೆಯ ಸಿನಿಮಾಗೆ ನಿರ್ದೇಶನ ಮಾಡುವ ಆಸೆಯನ್ನು ಹೊರಹಾಕಿದ್ದಾರೆ.‘ನಾನು ಪವನ್ ಕಲ್ಯಾಣ್ ಸಿನಿಮಾಗೆ ತೆಲುಗಿನಲ್ಲೇ ನಿರ್ದೇಶನ ಮಾಡಬೇಕು’ ಎಂದು ಹೇಳಿದರು. ಇದನ್ನು ಕೇಳಿ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಯಿತು. ಇದಕ್ಕೆ ಯಾವಾಗ ಕಾಲ ಕೂಡಿ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *