ಬೆಂಗಳೂರು: ಗುತ್ತಿಗೆದಾರರಿಗೆ ಪಾವತಿಸಬೇಕಿರುವ ಸುಮಾರು 9,000 ಕೋಟಿ ರೂಪಾಯಿ ಬಾಕಿ ಬಿಲ್ ತಕ್ಷಣವೇ ಪಾವತಿ ಕಷ್ಟ. ಇದು ಬಜೆಟ್ನಲ್ಲಿ ಅನುದಾನ ಮೀಸಲಿಡದೆ ನೀಡಲಾದ ಮೊತ್ತವಾಗಿದ್ದು, ಇದರ ಪಾವತಿಗೆ ಸಮಯ ಬೇಕಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಈ ಮೊದಲು 12,000 ಕೋಟಿ ರೂಪಾಯಿ ಬಿಲ್ ಬಾಕಿ ಇತ್ತು.
ಆ ಪೈಕಿ 3,000 ಕೋಟಿ ರೂಪಾಯಿ ಪಾವತಿಯಾಗಿ ಈಗ 9,000 ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ನೂರು ಕಚೇರಿಗಳನ್ನು ನಿರ್ಮಿಸುವ ಗುರಿ ಹೊಂದಿರುವ ಬಗ್ಗೆಯೂ ಸತೀಶ್ ಮಾತಾಡಿದ್ದಾರೆ. ಈ ಗುರಿ ತಲುಪಲು ಕೆಲವು ಶಾಸಕರು ಮತ್ತು ಉಸ್ತುವಾರಿ ಸಚಿವರು ಸ್ಪಂದಿಸಿಲ್ಲ ಎಂಬ ಶಿವಕುಮಾರ್ ಹೇಳಿಕೆ ಒಪ್ಪಿದ ಅವರು, ಪಕ್ಷಕ್ಕೆ ಶಾಶ್ವತ ಕಚೇರಿಗಳು ಇರುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
For More Updates Join our WhatsApp Group :
