ಬರಹ : ಲಿಖಿತ್, ಶೇಷಾದ್ರಿಪುರಂ ಕಾಲೇಜು, ತುಮಕೂರು
ಅಮ್ಮ ನಾನು ಎಂದಿಗೂ ನಿನಗೆ ಚಿರಋಣಿಯಾಗಿರುವುದಿಲ್ಲ ಏಕೆಂದರೆ ನಾನು ಕೇವಲ ನಿನ್ನ ದೇಹದ ಒಂದು ಭಾಗ . ನಿನ್ನ ತ್ಯಾಗಗಳ ಪ್ರತೀಕವೇ ನನ್ನ ಬೆಳವಣಿಗೆ ನನ್ನ ಗೆಲುವಿನ ಗರಿಗಳ ಮೇಲೆ ನಿನ್ನದೆ ಬರವಣಿಗೆ ಬಣ್ಣ ಮಾಸಿದ ಮೇಲೂ ಸಣ್ಣ ನಗುವೊಂದಿದ್ದರೆ ಅದು ನನ್ನಿಂದಲೇ ನಿನ್ನ ಬಗ್ಗೆ ಹೇಳಿ ಬೀಳುವುದರ ಬದಲು ಹೇಳದೆ ಸುಮ್ಮನಿರುವುದು ಮೇಲು. ಕಾಣದ ದೇವರಿಗೆ ಒಂದು ಸಾವಿರ ನಮನ ಕಾಣುವ ತಾಯಿಗೆ ಮೀಸಲು ನನ್ನ ಜೀವನ ಊರಿಗೂರಿಗೊಂದು ಗುಡಿಯು ದೇವರಿಗೆ ಎಲ್ಲರೆದೆಯಲ್ಲೊಂದು ಗುಡಿಯು ತಾಯಿಗೆ ಪುಣ್ಯಭೂಮಿಗೆ ಈ ಭಾರತ ಮಾತೆಗೆ.ಕಳೆದ ಜನ್ಮದಲಿ ಜಪಿಸಿದ್ದೆ ದೇವರಲಿ ಕೇಳುತ್ತ ಒಂದು ವರ ಈ ಜನ್ಮದಲ್ಲಿ ಫಲದೊರೆತು ಧನ್ಯನಾದೆ ಕಲಿತು ಕನ್ನಡದಕ್ಷರ ಅಮ್ಮ ನಿನ್ನ ಜೀವನವನ್ನೆ ಹಸ್ತಾಂತರಿಸಿದೆ ನನಗೆ ಸೂಪರ್ ಸ್ಟಾರ್ ಅಲ್ಲ ನೀನು ಆದರು ಇರಲಿ ಹಾಕು ಹಸ್ತಾಕ್ಷರ.
ಪ್ರತಿ ದಿನ ಒಂದೊತ್ತು ಊಟ ಬಿಡುತ್ತಿದ್ದಳು ನನ್ನಮ್ಮ. ದೇವರಿಗೆ ಹರಿಕೆ ತೀರಿಸಲೆಂದಲ್ಲ ನನ್ನ ಹೊಟ್ಟೆ ತುಂಬಿಸಲು. ಸುಡುಬಿಸಿಲ ದಿನಗಳಲಿ ಬೆವರ ಬಸಿದು ದುಡಿದಳು ನನ್ನಮ್ಮ ಬಡತನವ ನೀಗಿಸಲೆಂದಲ್ಲ ನನ್ನ ನಗಿಸಲು ಅವಳು ಸುತ್ತದ ದೇವಸ್ಥಾನಗಳಿಲ್ಲ,ಅರಳಿಕಟ್ಟೆಗಳಿಲ್ಲ ಕಾರಣ ಜ್ಯೋತಿಷಿ ಹೇಳಿದ್ದ ನನ್ನ ಜಾತಕದಲ್ಲೇನೊ ದೋಷವಿದೆ ಎಂದು. ಯಾವ ದೇವರು ನನಗಾಗಿ ಏನು ಮಾಡಲಿಲ್ಲ ಎಲ್ಲವನು ನನ್ನಮ್ಮಾನೆ ಮಾಡಿ ಆ ಪುಣ್ಯವ ದೇವರ ಪಾಲು ಮಾಡಿದಳು. ಕಾಣವಳು ನನ್ನಮ್ಮ ನನಗೆ ಧರೆಗೆ ಗಂಗೆಯ ಕರೆಸಿದ ಭಗೀರಥನಂತೆ ಛಲಬಿಡದ ಪರುಶುರಾಮನಂತೆ ಕೆಲವೊಮ್ಮೆ ನಗುಬರುವುದು ನನಗೆ ದೇವರೆ ದೇವರ ಮೊರೆ ಹೋದಾಗ ನಾನೇನಾದರು ಮಹಿಷಾಸುರನಾಗಿದ್ದರೆ ಮುಕ್ಕೋಟಿ ದೇವರುಗಳ ಕಟ್ಟಿ ತಂದು ನನ್ನಮ್ಮನ ಪಾದದಡಿಯಲಿ ಮುಂಡಿಯೂರಿ ಕೂರಿಸುತ್ತಿದ್ದೆ. ಭೂಮಿಯೇ ತೂಕವಿಲ್ಲದ ಹಗುರ ವಸ್ತುವಾಗಿದೆ, ನನ್ನಮ್ಮನ ಒಲವಿನ ಎದುರು ನಿದರೆಯಲು ನನ್ನದೆ ಧ್ಯಾನ, ನನಗವಳು ಕೇಳದೆ ಎಲ್ಲವನು ನೀಡಿದ ದೇವರು. ಏನು ಇಲ್ಲದೆ ನನ್ನಮ್ಮ ನನಗಾಗಿ ಸ್ವರ್ಗ ಸೃಷ್ಟಿಸಿದ್ದಳು. ಚೆಂದದ ಬದುಕು ಕಟ್ಟಿಕೊಟ್ಟಿದ್ದಳು. ಅವಳ ಅಪಾರವಾದ ಒಲವು ಹೇಗಿತ್ತೆಂದರೆ ಅವಳನ್ನೊರೆತು ಈ ಜಗತ್ತಿನ ಉಳಿದೆಲ್ಲರ ಪ್ರೀತಿಯು ಕೇವಲ ಎನ್ನುವಷ್ಟು. ಪ್ರತಿಬಾರಿಯೂ ಸೋತಿರುವೆ ನಾ ಅವಳ ಪ್ರೀತಿ ವಾತ್ಸಲ್ಯದೆದುರು ಹರಿಯುತಿರಲು ಈ ದೇಹದಲ್ಲಿ ಅವಳು ನೀಡಿದ ನೆತ್ತರು ಅವಳ ತ್ಯಾಗದ ಮುಂದೆ ನಾನು ಕಾಲಕಸಕ್ಕು ಸಮವಿಲ್ಲ ಅವಳಿಗಾಗಿ ಉಸಿರಕಟ್ಟಿ ಸತ್ತರು. ಜಗತ್ತಿನ ಯಾವುದೇ ಮಕ್ಕಳಾಗಲಿ ಅವರ ತಾಯಿಗೆ ಎಷ್ಟೆಲ್ಲಾ ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳಲಿ, ಆದರೆ ಅವಳು ನೀಡಿದ ಪ್ರೀತಿ ಸಾಕಿ ಸಲುಹಿದ ರೀತಿ ಪ್ರತಿಶತ ಶೂನ್ಯದಷ್ಟು ಹಿಂತಿರುಗಿಸಲು ಸಾಧ್ಯವಿಲ್ಲ. ಕನಸಿನ ನೆಪದಲಿ ನಟಿಸುವ ನೆನಪುಗಳೆಲ್ಲವು ಅಮ್ಮನ ನೆನೆದು, ಬಿಕ್ಕಳಿಸಿ ಬರುವಂತಹ ನೋವೇಕೊ ತುಂಬಾ ನವಿರಾಗಿದೆ ಗುರುಗಳು ಹೇಳಿದ ಗುರಿಯು ಮುಟ್ಟಿದರೆ ಕೊನೆಗದು ಗರಿಯಾಗುವುದಷ್ಟೆ, ಅಮ್ಮನ ಮುಖದ ಮೇಲಿನ ಸಣ್ಣ ನಗುವ ಸಾಧಿಸುವುದೆ ಈಗ ನನ್ನ ಗುರಿಯಾಗಿದೆ. ಈ ಪ್ರಪಂಚದಲ್ಲಿ ಪ್ರೀತಿ ಅನ್ನೋ ಪದವನ್ನು ಪರಿಚಯ ಮಾಡಿಸೋದು ಅಮ್ಮ ಮಾತ್ರ. ಉಳಿದೆಲ್ಲರ ಪ್ರೀತಿ ಕೇವಲ ನೀರಿನ ಮೇಲಿನ ಪ್ರತಿಬಿಂಬದಂತೆ ಕಲ್ಲು ಎಸೆಯೋ ವರೆಗು ಇರುತ್ತೆ ಒಂದಲ ಎಸೆದು ನೋಡಿ ಅಲ್ಲೋಲ ಕಲ್ಲೋಲ.
“ಎಲೆ ಮನವೇ ಕಾಣದ ದೇವರನ ಆರಾಧಿಸುವೆ ಹೆತ್ತತಾಯಿ ಕಣ್ಣ ಮುಂದೆ ಇದ್ದರು ಹಡೆದ ತಾಯಿಯ ನೋಯಿಸಿ ಮತ್ತೆ ದೇವರೇ ಕ್ಷಮಿಸು ಎಂದು ಬೇಡಿಕೊಂಡವರೇ ಎಲ್ಲಾ ಕನಸ ಮನಸ ನಡುವೆ ಕೊಂಡಿಯಾದವಳು, ಜೀವ ಕೊಟ್ಟವಳು ದೂರದಿ ಕಾಣುವ ಹಿಮಾಲಯ ಅವಳು ಎಲ್ಲವು ಅವಳೋಳಗೆ ಅಡಗಿಹವು . ಅಮ್ಮನ ಮಡಿಲು ನನಗೆ ತೊಟ್ಟಿಲು ಅಮ್ಮ ತನ್ನಲ್ಲಿ ಬಚ್ಚಿಟ್ಟುಕೊಂಡಿದ್ದು ವರ್ಣಿಸಲಾಗದ ಕಡಲನ್ನ!!!
ತುತ್ತು ಕೊಡ ಕೈಯಲ್ಲಿ ಅದೆಷ್ಟೋ ಗಾಯಗಳು, ಮಾಯದೆ ನಿತ್ಯವು ಕೊರಗುವಂತೆ ಮಾಡಿವೆ!!! ಬದುಕೇ ಸಾಕಾದ ನನ್ನ ತಂದೆಗೆ ನಿತ್ಯ ಕಣ್ಣೀರೇ ನನ್ನ ತಾಯಿಗೆ ಸಾರಾಯಿ ಸಲುವಾಗಿ ಏನೇನೋ ಮಾಡೋರು ಮಕ್ಕಳು ಹಸಿವು ಎಂದ್ರೆ “ನಿಮ್ಮಿಂದಾಗದೆ “ಎಂದು ಕೇಳಿದ್ದು ನಾನು.ಯಾವ ದೇವರು ಯಾವ ಧರ್ಮ ತಾಯಿಗಿಂತ ಮಿಗಿಲಾದದ್ದೇ? ಅಮ್ಮ ಕಟ್ಟಿಸಿರುವ ಮನೆ ಚಿಕ್ಕದ್ದು ಅಮ್ಮನ ಜ್ಞಾನ ಕೂಡ ಅಲ್ಪವೇ ಇರಬಹುದು ಆದರೆ ಆಕೆಯ ಪ್ರೀತಿಗೆ ಕೊರೆತೆಯೇ??? ಅಮ್ಮ ಹೆಸರಲ್ಲ, ಅಮ್ಮ ಅದೊಂದು ರೂಪವಲ್ಲ ಅಮ್ಮ ಪದದ ಶಕ್ತಿಯೇ ಬೇರೆ ಆಕೆಯೇ ಪ್ರೀತಿಗೆ ಎಲ್ಲಾ ಮೊನ್ನೆ ಮೊನ್ನೆ ಹುಟ್ಟಿದ ಕೆಲವು ಪ್ರೀತಿಯ ಮುಂದೆ ತಾಯಿ ಪ್ರೀತಿಯೇ ಮೇಲೆ ಎಂದೇ..
ನಮಗೆ ಅಮ್ಮನ ಮುತ್ತು
” ಪ್ರತಿನಿತ್ಯ ಕಡಲ ಅಲೆಗಳ ಹೊಡೆತದ ನೋವನ್ನು ಸಹಿಸಿಕೊಂಡು, ಜಲಚರಗಳ ಕಣ್ಣು ತಪ್ಪಿಸಿ, ಸಾಗರದಾಳದಲ್ಲಿ ಶಾಂತವಾಗಿ ಕೂತು, ತನ್ನ ಉದರದಲ್ಲಿ ಪಾಲನೆ-ಪೋಷಣೆ ಮಾಡಿ ಚಿಪ್ಪು, ಬೆಲೆ ಬಾಳುವ, ಬೆಲೆ ಕಟ್ಟುವ ಮುತ್ತು ವಿಗೆ ಜನ್ಮ ನೀಡಬಹುದು ಆದರೆ… ಬೆಲೆಕಟ್ಟಲಾಗದ ಮುತ್ತುವಿಗೆ ಜನ್ಮ ನೀಡುವವಳು ತಾಯಿ”.
ದೇವರಿಗೆ ದೇವರ ಪ್ರರ್ಥನೆ
ಹಲವು ರ್ಷಗಳು ಕಳೆದರೂ ನಾನು ತಾಯಿಯಾಗಿಲ್ಲ ಎಂಬ ಅಕ್ಕ ಪಕ್ಕದವರ ಮನೆಯವರನ್ನು ಮಾತನ್ನು ಕೇಳಿ ನೊಂದಳು. ಆ ದೋಷ ಈ ದೋಷ ಎಂದು ಪೂಜಾರಿ, ಶಾಸ್ತ್ರಿ ಮತ್ತು ಹಿರಿಯರು ಹೇಳಿದ ಹಾಗೆ ಮುತ್ತೈದೆಯರನ್ನು ಮನೆಗೆ ಕರೆದು ಉಣಿಸಿದಳು. ಹರಕೆಯನ್ನು ಹೊತ್ತು ಉರುಳು ಸೇವೆಯನ್ನು ಮಾಡಿ ದೇವರೇ ನನ್ನ ಒಡಲಲ್ಲಿ ಒಂದು ಪುಟ್ಟ ಮುತ್ತನ್ನು ಕರುಣಿಸು ಎಂದು ಬೇಡಿಕೊಂಡಳು, ಹೋಮ ಹವನ ದಾನ ಗಳಿಗಂತೂ ಲೆಕ್ಕವೇ ಇರಲಿಲ್ಲ.
” ಓ ದೇವರೇ… ನನ್ನ ಉದರ ಗೂಡಿಗೆ ಹೃದಯವ ಕರುಣಿಸೆಂದು, ನನ್ನ ಉದರ ಕಡಲಿಗೆ ಮುತ್ತು ರತ್ನವ ಕರುಣಿಸೆಂದು, ನನ್ನ ಒಡಲ ಜಗಲಿಗೆ ದೀಪವೊಂದನ್ನು ಕರುಣಿಸೆಂದು, ನನ್ನ ಉದರ ತೋಟಕೆ ಸಿಹಿ ಫಲವೊಂದನ್ನು ಕರುಣಿಸೆಂದು” ಎಂದು ದೇವರೇ ದೇವರ ಮುಂದೆ ಇಟ್ಟ ಇಚ್ಛ ಬೇಡಿಕೆಗಳ ಪ್ರತ್ಯುತ್ತರವಾಗಿ.
ನೀನೆ ಹೆಣೆದ ಗೂಡು
ಹಕ್ಕಿ ನೂರಾರು ಅಡಿ ಎತ್ತರ ಹಾರಿ, ಬಿರುಗಾಳಿಗೆ, ಬಿಸಿಲಿಗೆ ಬಗ್ಗದೆ ಸಾವಿರಾರು ಕೀ.ಮೀ ನಷ್ಟು ದೂರದ ದಾರಿಯನ್ನು ಕ್ರಮಿಸಿ ನಾರನ್ನು ಹುಡುಕಿ, ಕೊಕ್ಕೆಯಿಂದ ಗಟ್ಟಿಯಾಗಿ ಕೆಳಗೆ ಬೀಳದಂತೆ ಹಿಡಿದುಕೊಂಡು ತಾನು ಗೂಡು ಕಟ್ಟುವ ಸ್ಥಳಕ್ಕೆ ಬಂದು ನಾರನ್ನು ಇರಿಸಿ,ಮತ್ತದೇ ನಾರಿನ ಹುಡುಕಾಟ, ಹಾರಾಟದ ಫಲವಾಗಿ ಸುಂದರ ಹಾಗೂ ಯಾರ ಕೈಗಟದ ಹಾಗೇ ತನ್ನ ಕೌಶಲ್ಯದಿಂದ ಗೂಡನ್ನು ನರ್ಮಾಣ ಮಾಡುತ್ತದೆ.ಆದರೆ.. “ನಾವು ಕಟ್ಟದ, ಕಟ್ಟಲಾಗದ ಗೂಡಿಗೆ ಒಡತಿ ನೀನು, ಬೆಳೆಯುವ ಮೊಳಕೆಯ, ಗಟ್ಟಿ ಬೇರು ನೀನು ನಾವು ಒಡಲೊಳಗೆ ಓದ್ದರು,ಹೊಡೆದರು ಸಹಿಸಿಕೊಂಡೆ ನೀನು.. ಒಡದಲ್ಲೇ ರುಚಿ-ರುಚಿಯಾದ ತಿಂಡಿ-ತಿನಿಸುಗಳನ್ನು ತಿನಿಸುವೆ ನೀನು ನಿನ್ನ ಒಳ ಸುತ್ತಲೂ ಇರುವೆವು ನಾವು, ನಮ್ಮ ಹೊರ ಸುತ್ತಲೂ ಇರುವೆ ನೀನು” ನನ್ನ ಹರಕೆಯ,ಸೇವೆಗಳ ಫಲವೋ ಪರ್ವ ಜನ್ಮದ ಪುಣ್ಯಗಳ ಫಲವೋ ಇಂದು ನನಗೆ ದೇವರು ಮುತ್ತು ಒಂದನ್ನು ಒಡಲೊಳಗೆ ಕರುಣಿಸಿದ.
ತಾನು ತಾಯಿ ಯಾಗುತ್ತೀರುವ ಸಂತೋಷ ಕ್ಕಿಂತ ಹೆಣ್ಣು ಬೇರೆ ಯಾವುದೇ ಕಾರಣಕ್ಕೆ ಸಂತೋಷಕ್ಕೆ ಸಮನಾಗಿ ಇರುವುದಿಲ್ಲ.ಗಂಡನಿಗೆ ಅಪ್ಪ ನಾಗುತ್ತಿ ರುವ ಖುಷಿ,ಅಜ್ಜಿ-ತಾತನಿಗೆ ಆಡಿಸಲು ಪುಟ್ಟ ಮಗು ಬರುವದು ಎಂಬ ಖುಷಿ,ಅಣ್ಣ-ತಮ್ಮರಿಗೆ ಪುಟ್ಟ ಮಗುವಿನಿಂದ ಮಾಮ ಎಂದು ಕರೆಯಿಸಿಕೊಳ್ಳುವ ಖುಷಿ. ”ದೇವರ ಮುಂದೆ ಉರಿಯುವ ದೀಪ.. ಬೆಳಕು ನೀಡಿತು ಕತ್ತಲಿಗೆ, ಮನೆ ಮುಂದೆ ನೆಟ್ಟ ಗಿಡ ಫಲ ನೀಡಿತು ಇಂದು ನಮಗೆ, ಒಂದು ದೇಹದಲ್ಲಿ ಮತ್ತೊಂದು ಹೃದಯದ ಬಡಿತದ ಕ್ಷಣವಿಂದು.
ನನ್ನ ಉಸಿರಿಗೂ ಮುನ್ನ
“ನಿನ್ನ ಉಸಿರೇ ನನ್ನ ಉಸಿರಿಂದು. ನಿನ್ನ ಜೊತೆಯಲ್ಲಿ ಸದಾ ನಾನಿರುವೆ. ನನ್ನ ಜೊತೆಯಲ್ಲಿ ಸದಾ ನೀನಿರುವೆ. ನಿನ್ನ ಮಾತನ್ನು ಗ್ರಹಿಸುತ್ತಿರುವೆ ನಾನು. ನನ್ನ ತೊದಲು ಮಾತಿಗೆ ಕಾದಿರುವೆ ನೀನು“
ಡಾಕ್ಟರ್ ಹಾಗೂ ಅಜ್ಜಿ ಹೇಳಿದ ಮಾತು ನಿನಗೆ ವೇದವಾಕ್ಯ. ತಿಂಗಳಿಗೆ ಎರಡು ಬಾರಿ ನನ್ನ ಜೊತೆ ನಿನ್ನ ಆಸ್ಪತ್ರೆ ಭೇಟಿ. ನಾನು ಯಾರು ಎಂದು ತಿಳಿಯದ ಹಂಬಲವೂ ನಿನಗಿಲ್ಲ, ಅದು ನಿನಗಂತೂ ಬೇಕಾಗಲೇ ಇಲ್ಲ.ಬೆಳಿಗ್ಗೆ ಹಾಗೂ ಸಂಜೆ ನನ್ನ ನಿನ್ನ ವಾಕಿಂಗ್, ಬೆಳಗ್ಗೆ ಏಳುವ ದಿಂದ ಹಿಡಿದ ರಾತ್ರಿ ಮಲಗುವರೆಗೂ ಚಾಚೂತಪ್ಪದೆ ಪಾಲಿಸುವ ನಿಯಮಗಳು. ಈಗಲೇ ನನ್ನ ಆರೋಗ್ಯಕ್ಕಾಗಿ ಗೋಡಂಬಿ,ದ್ರಾಕ್ಷಿ,ಹಣ್ಣು-ಹಂಪಲು, ಹಾಲಿನ ಜೊತೆಗೆ ಕೆಸರಿನಿಂದಲೇ ಒಳಗಡೆಯೇ ನನ್ನ ಶೃಂಗಾರ ಹಾಗೂ ಮೇಕಪ್.
ನಿನಗೆ ನಿನ್ನ ಮೇಲಿನ ಕಾಳಜಿಗಿಂತ ನನ್ನ ಕಾಳಜಿ ಯದ್ದೇ ನಿನಗೆ ಚಿಂತೆ, ನಾನು ಚೆನ್ನಾಗಿ ಬೆಳೆದು ಬರಲಿ ಎಂದು ಅಕ್ಕಪಕ್ಕದವರು ಕರೆದು ಮಾಡಿಸಿದರು ನಿನಗೆ ಬಾಡೂಟ,ಬಾಡೂಟ ಅಷ್ಟೇ ಅಲ್ಲ ನೂರಾರು ಹಾರೈಕೆ ನನಗೆ. ಅಜ್ಜಿ ಆಗಲೇ ನನಗಾಗಿ ಕುಂಚಿಗೆ ಯನ್ನು ಹೊಲಿಯುತ್ತಿದ್ದಾಳೆ, ಅಜ್ಜ ಯಾವುದಕ್ಕೂ ಇರಲಿ ಎಂದು ಒಂಚೂರು ದುಡ್ಡು ಸೇರಿಸಿ ಕೂಡಿಡುತ್ತಿದ್ದಾನೆ. ”ಯಾರು ಇರದ ಈ ಸುಂದರ ಕಾನನದೊಳಗೆ.. ನನ್ನದೇ ಹೆಜ್ಜೆ ಗುರುತು ಇಲ್ಲಿ ನನಗೆ… ಹಸಿವಿನ ಅರಿವೇ ಇಲ್ಲ, ಬಾಯಾರಿಕೆಯಾದ ಕ್ಷಣದ ಅನುಭವ ಇಲ್ಲ, ನಿದ್ದೆಯ ಬಳಲಿಕೆ ಎಂದು ಕಾಣಲಿಲ್ಲ, ಉಸಿರು ಕೊಟ್ಟು ಬೆಳೆಸುತ್ತಿರುವೇ ನೀನು, ನಾನು ಕಣ್ಣು, ಕಣ್ಣೀನ ರೆಪ್ಪೆಯ ಹಾಗೇ ಕಾಯುತ್ತಿರುವೇ ನೀನು, ನನ್ನ ಒದ್ದಾಟದಿಂದ,
ನಿದ್ದೆ ಬಿಟ್ಟು ಎದ್ದು ಕೂತೆ ನೀನು, ನನ್ನ ಇರುವಿಕೆಯ ಸಂತೋಷದ ಅನುಭವ ಪಡೆಯುತ್ತಿರುವೆ ನೀನು,
ನಿನ್ನಲ್ಲಿ ಇರುವೆಕೆಯ ಸಂತೋಷದಲ್ಲಿ ನಾನು…”
ನೀನಗೆಕೆ ಈ ಭಯ?
ಎಂದಿನಂತೆ ಅಂದು ರಾತ್ರಿ ನೀನು ನನ್ನ ಚಿಂತೆಯಲ್ಲಿ ಮುಳುಗಿದ್ದೆ ಯಂತೆ, ಇದ್ದಕ್ಕಿದ್ದಂತೆ ಗೆ ನಿನಗೆ ನೋವು ಶುರು ವಾದಾಗ ಸಮಯ ಮಧ್ಯರಾತ್ರಿ ದಾಟಿ ಹೋಗಿತ್ತು. ಅದ್ಯಾವುದರ ಮುನ್ಸೂಚನೆ ನಿನಗೆ ಇರಲಿಲ್ಲವಂತೆ, ಹೊರಗಡೆ ಕಗ್ಗತ್ತಲು ಯಾರ ಸುಳಿವೂ ಇಲ್ಲವೆ ಇಲ್ಲ, ಅಜ್ಜಿ ತಾತನನ್ನು ಎದ್ದೇಳಿಸಿದೆ ಏನು ಅಂತಾ ವಿಚಾರಿಸಿದಾಗ ನೋವು ಕಾಣಿಸಿಕೊಂಡಿದ್ದು ಗೊತ್ತಾಯಿತು.ಆಗ ಮೊಬೈಲ್ ಇರಲಿ ಫೋನಿನ ಸುಳಿವೂ ಇರಲಿಲ್ಲ. ಇದೆಲ್ಲವನ್ನೂ ಅರಿತ ಅಜ್ಜ ಕೂಡಿಟ್ಟ ಹಣವನ್ನು ಎಷ್ಟು ಎಂದೂ ಎನಿಸದೆ ಜೇಬಿಗೆ ಹಾಕಿ ಹೊರಗೆ ಗಾಡಿಯನ್ನು ಹುಡುಕಿ ತರಲು ಹೋದ.
ಆಗ ನಮ್ಮೂರಿಗೆ ದಿನಕ್ಕೆ ಒಂದೇ ಬಸ್ ಅಂತೆ ಅದು ಮಧ್ಯಾಹ್ನ ಬರುತ್ತಿತ್ತಂತೆ. ಈಗಿನ ಹಾಗೆ ೧೦೮ ಇರಲಿಲ್ಲ ೮೦೧ ಇರಲಿಲ್ಲ. ನಿನಗಾಗುತ್ತೀರುವ ನೋವು ನನ್ನಿಂದಲೇ, ಸಹಿಸಿಕೊಳ್ಳುತ್ತಿರುವ ನೋವು ನನಗಾಗಿಯೆ, ನಾನು ಕಣ್ಣೆರೆಯಲು ಬರುತ್ತಿರುವೆ ನಿನಗಿನ್ನೂ ನೋವು ಕೊಟ್ಟು, ನೀನು ನೋವನ್ನು ಸಹಿಸಿಕೊಳ್ಳುತ್ತಿರುವೆ ಸಂತೋಷ ಪಟ್ಟು. ಅತ್ತ ಹೊರಗೆ ಹೋದ ಅಜ್ಜ ಇನ್ನೂ ಬಂದಿಲ್ಲ, ಇತ್ತ ನಿನ್ನ ನೋವು ಇನ್ನೂ ಜಾಸ್ತಿಯಾಗುತ್ತಿದೆ, ಅಜ್ಜಿಯ ಸಂತೈಕೆಯೆ ಮೇಲೆಯೇ ನಿನ್ನ ಭರವಸೆ, ಹೋದ ಅಜ್ಜ ಇನ್ನೂ ಬರಲಿಲ್ಲವೆಂದು ಅಜ್ಜಿ ಹೊರಗಡೆ ಬಂದು ಹುಡುಕುತ್ತಾ ಗೋಣಗಿದಳು, ಕೈಯಲ್ಲಿ ಒಂದು ಚಿಕ್ಕ ಬ್ಯಾಟರಿ ಹಿಡಿದುಕೊಂಡು ಯಾರಾದರು ಸಿಗಬಹುದೆಂದು ಮುಂದೆ ಸಾಗಿದಳು. ಜೀವನದಲ್ಲಿ ಜೀವದ ಭಯ ಪಡದೆ ಬೆಳೆದಿರುವೆ ನೀನು, ಜೀವ ಕೊಡುವ ಸಂರ್ಭದಲ್ಲಿ ಕಾಡುತ್ತಿದೆ ನಿನಗೆ ಭಯ, ನಿನ್ನ ಜೀವಕ್ಕೆ ಏನೇ ಆಗಲಿ, ನನ್ನ ಜೀವನಕ್ಕೆ ಏನೂ ಆಗದಿರಲಿ ಎಂಬುದು ನಿನ್ನ ಆಶಯ. ಹೊರಗೆ ಹೋದ ಅಜ್ಜ – ಅಜ್ಜಿ ಇನ್ನು ಬರದೇ ಇದ್ದಾಗ ನಿನಗೆ ಇನ್ನೂ ಭಯವೇನಿಸಿತು. ಎಚ್ಚರವಾಗಿ ಕಣ್ಣು ತೆರೆದು ನೋಡಿದರೆ ಏನು ಇಲ್ಲ. ಆಗ ನಿನಗೆ ರ್ಥವಾದದ್ದು ಇದು ಕಂಡ ಕನಸು ಎಂದು. ಗಾಬರಿಯಲ್ಲಿ ಪಕ್ಕದಲ್ಲಿ ಮಲಗಿದ್ದ ಅಜ್ಜಿಯನ್ನು ಎಬ್ಬಿಸಿ ಎಲ್ಲವನ್ನು ವಿವರಿಸಿದೆ, ಅಜ್ಜಿ ಎಲ್ಲವನ್ನು ಕೇಳಿ ಯಾವುದಕ್ಕೂ ಭಯ ಪಡಬೇಡ ನೀನು ಹೊಟ್ಟೆಯಲ್ಲಿ ಇದ್ದಾಗ ನನಗೂ ಹೀಗೆಯೇ ಆಗಿತ್ತು ಅಂದೆ ಎಂದು ಹೇಳಿ ಮಲಗಿಸಿದಳು.
ಅಳು
ರಾತ್ರಿ ಕಂಡ ಕನಸು ಇನ್ನೂ ಕಣ್ಣಿಗೆ ಕಟ್ಟಿದಂತಿದೆ ಅದೇಕೋ ಆ ಭಯ ನಿನಗೆ ಕಾಡುತ್ತಲೇ ಇತ್ತು. ಆ ಭಯದಲ್ಲೇ ಇಡೀ ದಿನ ಕಳೆದು ಹೋಗಿತ್ತಂತೆ.ರಾತ್ರಿ ಮಲಗಿದ್ದೆ ಮತ್ತೆ ನೋವು ಕಾಣಿಸಿಕೊಂಡಿತ್ತು. ಇದು ನಿಜವೇ ಅಥವಾ ಕನಸು ಎಂದು ತಿಳಿಯಲು ಕಣ್ಣು ಬಿಟ್ಟು ಎದ್ದು ಕುಳಿತಿದ್ದೆ ಯಂತೆ, ಇದು ಕನಸಲ್ಲ ನಿಜವೆಂದು ನಿನಗೆ ರ್ಥವಾಯಿತು. ನಿನ್ನ ಧ್ವನಿಯನ್ನು ಕೇಳಿ ಮನೆಯಲ್ಲಿ ಮಂದಿ ಎದ್ದು ಕೂತರು ಯಾವುದೇ ತೊಂದರೆ ಇಲ್ಲದೆ ಹೇಗೂ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಸೇರಿಸಲಾಗಿತ್ತು, ನೀ ಕಂಡ ಕನಸು ಕನಸಾಗದೆ ನನಸೇ ಆಗಿತ್ತು ಆಸ್ಪತ್ರೆ ತಲುಪಿದ ನಂತರ ನೋವು ತೀವ್ರವಾಗಿ ಕಾಣಿಸಿಕೊಂಡಿತ್ತಂತೆ ಹೆರಿಗೆ ನೋವಿನಷ್ಟು ಆಗುವ ನೋವು ಬೇರಾವ ನೋವಿಗೂ ಸಮಾನ ಅಲ್ಲವಂತೆ.
” ನೂರಾರು ಖಡ್ಗದ ಚುಚ್ಚಿ ನಿಂದಾದ ನೋವಿಗೂ ಸಮವೇ ಅಲ್ಲ ನೀನುಂಡ ನೋವು, ನಿನ್ನ ಚೀರಾಟ ಕೂಗಾಟದ ಪರಿಯಂತು ನಾ ಕಾಣೆ, ಒಂಚೂರು ನಾನು ಎದ್ದು ಬಂದು ಒಂದು ಕ್ಷಣ ಸಮಾಧಾನಿಸಲೇ ನಿನ್ನ, ನಾ ಅತ್ತು ನಿನ್ನ ಮಡಿಲು ಸೇರಿದ ಮೇಲೆಯೇ ನಿನಗೆ ನಗುವಿನ ಸಮಾಧಾನ” ಅದುವೇ ನನ್ನ ಜನ್ಮ ಅಳುತ್ತಾ ಹೆಸರಿಲ್ಲದೆ ಕಾಲಿಟ್ಟೆ ಈ ಭೂಮಿಗೆ, ನಗುತ್ತಾ ಸೇರಿದೆ ನಿನ್ನ ಮಡಿಲಿಗೆ, ನನ್ನ ಮೊದಲ ಅಳುವಿನಲ್ಲಿ, ನಿನ್ನ ಮೊದಲ ನಗು, ಮುಂದೇ ನಾ ಅತ್ತರು, ನೀ ನಗಲಾರೆ ನಿನ್ನ ಮನದಲ್ಲಿಗ ಈಗ ಸಂತೋಷದ ಭಾವ… ನಿನ್ನ ಉದರ ಕಡಲಿನಿಂದ ಮುತ್ತು ರತ್ನವು ಜನಿಸಿತು ಇಂದು, ನಿನ್ನ ಒಡಲ ಜಗಲಿಗೆ ದೀಪವೊಂದು ಜನಿಸಿತು ಇಂದು, ನಿನ್ನ ಉದರ ತೋಟಕ್ಕೆ ಸಿಹಿ ಫಲ ಜನಿಸಿತು ಇಂದು, ಮುತ್ತಿಟ್ಟೇ ನೀ ನನಗೆ, ಅಳು ನಿಂತು ಶುರುವಾಯಿತು ಮುಗುಳು ನಗೆ”.
ನನಗೊಂದು ಹೆಸರು
ಮನೆತುಂಬಾ ಸಂತೋಷದ,ಹಬ್ಬದ ವಾತಾವರಣ ತುಂಬಿತ್ತು.ಹಲವಾರು ದಿನಗಳ ನಂತರ ಆಸ್ಪತ್ರೆ ಯಿಂದ ಮನೆಗೆ ಬ೦ದಾಗ ಎಲ್ಲೆಲ್ಲೂ ಆನಂದ. ಮನೆಯಲ್ಲಿ ಮಗುವಿನ ನಗು, ಅಳು,ಚೀರಾಟ ಎಲ್ಲವು ಇಂಪಾದ ಸಂಗೀತದ ಹಾಗೆಯೆ ಸಿಹಿ ಪೇಡಾ ಊರಿನ ತುಂಬಾ ಹ೦ಚಿದ್ದಾಯ್ತು.ಆಗಲೇ ಅಜ್ಜಿ-ತಾತ ನನಗೆಂದೆ ತೊಟ್ಟಿಲ ಮಾಡಿಸಿಯೇ ತಂದಿಟ್ಟಿದ್ದರು. ತೊಟ್ಟಿಲ ತೂಗಲು ಆಗಲೇ ದಶ ಕೈಗಳು ಕಾದಿದ್ದವು. ”ಅಂಬಾರಿ ಹಾಗೇ ಸಿಂಗಾರ ಗೊಂಡ ತೊಟ್ಟಿಲು, ರೇಷ್ಮೆಯ ನೂಲು, ತೊಟ್ಟಿಲ ತೂಗಲು ಮನೆ ತುಂಬಾ ಕಂಪು, ನನ್ನ ನಿದ್ದೆಯೂ ಅಷ್ಟೇ ಸಂಪು” ಎಚ್ಚರ ಗೊಂಡರೆ ನಾ ಅತ್ತು ಹಸಿವುಗಾಗಿ,ಅಮೃತವನ್ನೇ ಉಣಬಡಿಸಿ ಮಲಗಿಸುವೆ ಮತ್ತೇನು ಬೇಕೇ ನನಗಿನ್ನೂ, ನಿನ್ನ ಮಡಿಲು ಬಿಟ್ಟರೆ ತೊಟ್ಟಿಲೇ ಇನ್ನೂ ನನ್ನ ಗೂಡು. ಮನೆಯಲ್ಲಿ ನಾ ಮಲಗಿದ್ದಾಗ ಒಂದು ಪಿಸು ಮಾತಿಗೂ ಆಸ್ಪದವಿಲ್ಲ.ಯಾರಾದರು ಪಿಸು ಮಾತನಾಡಿದರು ಸುಮ್ಮನೇ ಇರಿ ನನ್ನ ಕಂದ ಮಲಗಿದ್ದಾನೆ ಎಂಬ ಕಟ್ಟಪ್ಪಣೇ ಮನೆ ತುಂಬಾ.ಕಿರು ಸೊಳ್ಳೆಗೂ ಚೂರು ಜಾಗವಿಲ್ಲ ತೊಟ್ಟಿಲ ಹತ್ತಿರ. ತೊಟ್ಟಿಲು ತೂಗುವ ಹಗ್ಗ ರಾತ್ರಿಯಿಡಿ ನಿನ್ನ ಕೈಯಲ್ಲೇ, ನನ್ನ ಅಳವನ್ನು ನಿಲ್ಲಿಸಲು ನಿನ್ನ ಒಂದು ತೂಗು ಸಾಕು, ನೀ ನನ್ನ ಜೊತೆಗಿರಲು ತಿಳಿಯಲು ಮತ್ತೊಂದು ತೂಗು ಸಾಕು.ಇನ್ನೂ ಹೆಸರಿಲ್ಲದೆ ನನಗೆ ರಾಜ, ರಾಣಿ,ಬ೦ಗಾರ, ಚಿನ್ನ,ನನ್ನ ಅಪ್ಪ,ನನ್ನ ಅಮ್ಮ ಎಂಬ ಮಾತು ಹೇಳುತ್ತಾ ಕೆನ್ನೆಗೆ ನಿನ್ನ ಮುತ್ತು.
”ಗುಬ್ಬಚ್ಚಿಯ ಗೂಡಿನ ಮರಿಗೆ ತೂಗಿತು ಗಾಳಿ ಕೈ ಚಾಚಿ, ತೊಟ್ಟಿಲನು ತೂಗಿದೆ ನಿನ್ನ ಹಸ್ತದಿಂದ ಅದಕ್ಕೆ ಆ ದೇವರೇ ಮಾತ್ರ ಸಾಕ್ಷಿ ಹೆಸರಿಲ್ಲದೆ ನಿನ್ನ ಮಡಿಲ ಸೇರಿದ ನನಗೆ ರಾಜ, ರಾಣಿ,ಬಂಗಾರ,ನನ್ನ ಅಪ್ಪ,ನನ್ನ ಅಮ್ಮ ಎಂಬ ಹೊಗಳಿಕೆ ಏನೋ ಸಾಕಷ್ಟು. ಹೆಸರಿಡಲು ನೂರೆಂಟು ಬಾರಿ ಯೋಚನೆ ಮನೆ ಮಂದಿಗೆ,ಬಂಧುಗಳಿಗೆ,ಪರಿಚಯಸ್ತರಿಗೆ ಎಲ್ಲಾರಿಗೂ ಹೆಸರು ಸೂಚಿಸುವುದೆ ಕೆಲಸ ಯಾವುದೇ ಹೆಸರು ಹೇಳಿದರು ಅದು ಹಳೆಯದು ಎಂಬ ಮಾತು. ಹೊಸದೇನೂ ಹುಡುಕುವುದು ಸೂಚಿಸುವುದು ಎಲ್ಲರ ಕೆಲಸ.ಹೆಸರಿಡುವ ದಿನ ಮನೆಯನ್ನೆಲ್ಲಾ ಸಿಂಗಾರ ಮಾಡಿ ಆಯಿತು, ಇನ್ನು ನನ್ನ ಸರದಿ ಆಟ ಆಡುತ್ತಾ ಒಂದನ್ನು, ಎರಡನ್ನೂ ಮಾಡಿಕೊಂಡ ನನನ್ನು ಸಹ ಸ್ವಚ್ಛಗೊಳಿಸಿ, ಸ್ನಾನ ಮಾಡಿಸಿ ಸಿಂಗಾರ ಮಾಡಿ, ಕೊನೆಗೆ ಬ೦ದವರ ಕಣ್ಣು ನನ್ನ ಮೇಲೆ ಬೀಳದಿರಲಿ ಎಂದು,ಕೆನ್ನೆಗೆ ಕಾಡಿಗೆಯ ದೃಷ್ಟಿ ಬೊಟ್ಟು ಇಟ್ಟು ನನ್ನನ್ನು ಆಟ ಆಡಲಿಕ್ಕೇ, ಆಟದ ಮೈದಾನಕ್ಕೆ (ತೊಟ್ಟಿಲು) ಕಳುಹಿಸಿದ್ದೇ. ಅಂತು ಇಂತೂ ಒಂದು ಇಷ್ಟವಾದ ಹೆಸರನ್ನು ಕೊನೆಯದಾಗಿ ಅಂತ್ಯ ಮಾಡಿ,ಶಾಸ್ರೋಸ್ತ್ರವಾಗಿ ಎಲ್ಲರ ಸಮ್ಮುಖದಲ್ಲಿ ಮೂರು ಸಾರಿ ಕಿವಿಯಲ್ಲಿ ಕೂಗಿ ಹೇಳಲಾಯಿತು. ”ಇಟ್ಟೆ ನನಗೊಂದು ಹೆಸರು ಎಲ್ಲರನ್ನೂ ಕರೆದು, ಕಿವಿಯಲ್ಲಿ ನನಗೆ ಹೇಳಿದ್ದು ಮೂರು ಸಾರಿ ಆದರೆ ಎಲ್ಲರಿಗೂ ಸಾರಿ ಸಾರಿ”