“ಕಮಿಷನರ್ ಕೈ ಜೋಡಿಸಿದ ಸ್ವಚ್ಛತಾ ಅಭಿಯಾನ, ಆದರೆ ಗೌರವ ಕಳೆದುಕೊಂಡ ?”

 “ಕಮಿಷನರ್ ಕೈ ಜೋಡಿಸಿದ ಸ್ವಚ್ಛತಾ ಅಭಿಯಾನ, ಆದರೆ ಗೌರವ ಕಳೆದುಕೊಂಡ ?”

ಬೆಂಗಳೂರು : ಪಾದಚಾರಿ ಮಾರ್ಗದ ಅಸಲಿಯಾದ ಚಿತ್ರ: ಕ್ಯಾಲೆಬ್ ಫ್ರೈಸೆನ್ ಔಟ್‌ಸೈಡರ್ ಅಲ್ಲ, “ಅವರು ನೈತಿಕ ಕನ್ನಡಿಗ!” ಕೆನಡಾ ಮೂಲದ ಕ್ಯಾಲೆಬ್ ಫ್ರೈಸೆನ್ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸ್ಟಾರ್ಬಕ್ಸ್ ಔಟ್ಲೆಟ್‌ವರೆಗೆ 2.4 ಕಿ.ಮೀ ಪಾದಚಾರಿ ಮಾರ್ಗದಲ್ಲಿ ನಡೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ರಸ್ತೆಯ ಅಸ್ಥವ್ಯಸ್ಥತೆ, ಕಸದ ರಾಶಿ, ಪಾದಚಾರಿ ದಾರಿಗಳ ದುಸ್ಥಿತಿ — ಎಲ್ಲವನ್ನೂ ಹತ್ತಿರದಿಂದ ತೋರಿಸಿದ ಈ ವಿಡಿಯೋ, BBMP ಅಧಿಕಾರಿಗಳ ನಿರ್ಲಕ್ಷ್ಯದ ಕನ್ನಡಿ ಎಂಬಂತಾಗಿತ್ತು.

ವಿಡಿಯೋ ವೈರಲ್ ಆದ ಬಳಿಕ ಏನಾಯ್ತು?

  • ಸೆಪ್ಟೆಂಬರ್ 14 ರಂದು ಅಪ್‌ಲೋಡ್ ಮಾಡಿದ ಈ ವಿಡಿಯೋ ಈಗಾಗಲೇ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.
  • ಜನರು ಕೆರಳಿದ ನಂತರ, BBMP ಆಯುಕ್ತ ರಾಜೇಂದ್ರ ಚೋಳನ್ ತಕ್ಷಣದ ಕ್ರಮ ಕೈಗೊಂಡರು.
  • ಖಾಸಗಿ ಸ್ವಯಂಸೇವಕರ ತಂಡದ ಜೊತೆ ಪಾದಚಾರಿ ಮಾರ್ಗ ಶುದ್ಧೀಕರಣ ಕಾರ್ಯಕ್ಕೆ ತಾವೇ ಧುಮುಕಿದರು.
  • ಕ್ಯಾಲೆಬ್ ಫ್ರೈಸೆನ್ ಅವರ ಕೈ ಕುಲುಕಿ ಮಾತುಕತೆ ನಡೆಸಿದ ಕಮಿಷನರ್, ಸರ್ಕಾರಿ ಮತ್ತು ಖಾಸಗಿ ತಂಡಗಳೊಂದಿಗೆ ಕುಳಿತು ಊಟ ಸೇವಿಸಿದ ದೃಶ್ಯಗಳು ವೈರಲ್.

ಸಾಮಾಜಿಕ ಮಾಧ್ಯಮದಲ್ಲಿ ಕಮಿಷನರ್‌ರ ವಿರುದ್ಧ ವ್ಯಂಗ್ಯ

  • “ಈಗ ನೆನಪಾಯಿತಾ ಕರ್ತವ್ಯ?” — ಬಳಕೆದಾರರ ಟೀಕೆ
  • “ಬಿಬಿಎಂಪಿಗೆ ತಮ್ಮ ತಪ್ಪು ತೋರಿಸಲು ಒಂದು ಕೆನಡಾ ವ್ಯಕ್ತಿ ಬೇಕಿತ್ತು”
  • “ಇವರು ಸರಿಯಾಗಿ ಕೆಲಸ ಮಾಡದಿದ್ದರೆ, ಇನ್ನು ಎಲ್ಲೆಂದರೆ!”
  • “ಅಧಿಕಾರಿಗಳು ತಾವು ಮಾಡುವ ಕೆಲಸವನ್ನೇ ‘ಶೋ’ ಆಗಿ ಪರಿವರ್ತಿಸಿದ್ದಾರೆ!”

ಪ್ರಶಂಸೆ ಅಥವಾ ಪ್ರಪಂಚದ ಮುಂದೆ ಮಾನಹಾನಿ?

ವಾಸ್ತವವಾಗಿ ಪಾದಚಾರಿ ಮಾರ್ಗದ ಸಮಸ್ಯೆಗೆ ಸ್ಪಂದನೆ ತಕ್ಷಣ ಕಂಡುಬಂದದ್ದು ಸಕಾರಾತ್ಮಕ. ಆದರೆ, ಸ್ವಚ್ಛತೆಗೆ ವಿಡಿಯೋ ಶೂಟ್, ಕಮಿಷನರ್ ಅವರ ಪ್ರಚಾರದ ನೋಟ ಕೆಲವು ಸಾರ್ವಜನಿಕರಿಗೆ ಅಭಿಮಾನವನ್ನಲ್ಲ, ತಿರಸ್ಕಾರವನ್ನೇ ತಂದಿದೆ.

ಕ್ಯಾಲೆಬ್ ಫ್ರೈಸೆನ್ ಬಗ್ಗೆ

  • ಮೂಲತಃ ಕೆನಡಾದವರಾದರೂ, ಕನ್ನಡ ಪ್ರೇಮಿ, ನಾಗರಿಕ ಜವಾಬ್ದಾರಿಯ ಅಭಿಮಾನಿ
  • ಬೆಂಗಳೂರಿನ ಅನೇಕ ನಾಗರಿಕ ಸಮಸ್ಯೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಎಚ್ಚರಿಕೆ ಮೂಡಿಸುತ್ತಿರುವ ವ್ಯಕ್ತಿ
  • ಈ ಹಿಂದೆಯೂ ಇವರು ಬಸವೇಶ್ವರ ರಸ್ತೆಯ ಕಸ, ಬೀದಿ ಮಾರ್ಗದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದರು

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *