ಬಾಗಲಕೋಟೆ: ಎಲ್ಲೆಡೆ ದೇವರಲ್ಲಿ ಭಕ್ತಿ, ಸಂಪ್ರದಾಯಕ್ಕೆ ಇಂದಿಗೂ ಮಾನ್ಯತೆ ಇದೆ. ಕಾಲ ಎಷ್ಟೇ ಬದಲಾದರೂ ದೇವರ ಮೇಲಿನ ಭಕ್ತಿ, ನಂಬಿಕೆ ಮಾತ್ರ ಬದಲಾಗುವುದಿಲ್ಲ. ದೇವರ ಭಕ್ತಿ ಮುಂದೆ ನಗ ನಾಣ್ಯ ಕೂಡ ನಗಣ್ಯ. ಇದಕ್ಕೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಅದೊಂದು ಘಟನೆ ಸಾಕ್ಷಿ ಆಗಿದೆ. ದೇವರಿಗೆ ಅರ್ಪಿಸಿದ್ದ ತೆಂಗಿನಕಾಯಿಯನ್ನು ಓರ್ವ ಭಕ್ತ ಹರಾಜಿನಲ್ಲಿ ಬರೋಬ್ಬರಿ 5,71,001 ರೂ ಬೆಲೆಗೆ ತಮ್ಮದಾಗಿಸಿಕೊಂಡಿದ್ದಾರೆ.
ತೆಂಗಿನಕಾಯಿಗೆ ಅಷ್ಟೊಂದು ಬೆಲೆ ಕೊಟ್ಟಿದ್ದು ಯಾಕೆ?
ಚಿಕ್ಕಲಕಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾಳಿಂಗರಾಯನ ಜಾತ್ರೆ ಅದ್ದೂರಿಯಾಗಿ ನಡೆಯಿತು. ಶ್ರಾವಣ ಮಾಸದ ಒಂದು ತಿಂಗಳ ವಿವಿಧ ಆಚರಣೆ ನಂತರ ಕೊನೆಯಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ ಅದ್ದೂರಿಯಾಗಿ ನಡೆಯಿತು. ಜಾತ್ರೆ ಮುಗಿಯುವ ಹಂತದಲ್ಲಿ ದೇವರ ಮೇಲಿನ ಹಾಗೂ ಗದ್ದುಗೆ ಮೇಲಿನ ವಸ್ತುಗಳನ್ನು ಹರಾಜು ಮಾಡುವ ಸಂಪ್ರದಾಯವಿದೆ.
For More Updates Join our WhatsApp Group :