ಸಮೀಕ್ಷೆಗೆ ಮೊದಲ ದಿನವೇ ಅಸಂಜತೆ: ಕಚೇರಿ ಕೀ ಸಿಗದೇ ಬೀಗ ಒಡೆದು ಬಾಗಿಲು ತೆರೆದ ಘಟನೆ.

ಸಮೀಕ್ಷೆಗೆ ಮೊದಲ ದಿನವೇ ಅಸಂಜತೆ: ಕಚೇರಿ ಕೀ ಸಿಗದೇ ಬೀಗ ಒಡೆದು ಬಾಗಿಲು ತೆರೆದ ಘಟನೆ.

ಬೆಂಗಳೂರು – ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಬಿಎ ವ್ಯಾಪ್ತಿಯಲ್ಲಿ ಆರಂಭವಾಗಿದ್ದ ಮಹತ್ವದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಮೊದಲ ದಿನವೇ ಸಂಘಟನೆ ಹಾಗೂ ಸಿದ್ಧತೆಯಲ್ಲಿ ಗೊಂದಲ ಕಂಡುಬಂದಿದೆ.

ಕಚೇರಿ ಬೀಗವೇ ಸಮೀಕ್ಷೆಗೆ ಅಡ್ಡಿ!

ಶ್ರೀರಾಮಪುರದ ದೇವಯ್ಯ ಪಾರ್ಕ್ ಬಳಿ ಇರುವ ಬಿಬಿಎಂಪಿ ಕಚೇರಿಗೆ ಬೆಳಿಗ್ಗೆ 9:30ಕ್ಕೆ ಸಮೀಕ್ಷೆ ಆರಂಭವಾಗಬೇಕಿತ್ತು. ಆದರೆ, ಸಂಬಂಧಿಸಿದ ಸಿಬ್ಬಂದಿಗೆ ಕಚೇರಿ ಬಾಗಿಲಿನ ಕೀ ಸಿಗದ ಕಾರಣ ಸಮೀಕ್ಷಕರು ಕಚೇರಿ ಹೊರಗೆ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು.

ಕೊನೆಗೆ ಬೀಗ ಒಡೆದು ಬಾಗಿಲು ತೆರೆದ ಮೂಲಕವೇ ಕಾರ್ಯ ಮುಂದುವರಿಯಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ಸಿದ್ಧತೆಯಲ್ಲಿ ಲೋಪವೇನು?

  • ಮಹತ್ವದ ಸಮೀಕ್ಷೆಯ ಮೊದಲ ದಿನವೇ ಘಟನೆ ಸಂಭವಿಸಿದದ್ದು ನಿರ್ವಹಣಾ ವೈಫಲ್ಯ
  • ಸಮಯಪಾಲನೆಯ ಕೊರತೆ ಹಾಗೂ ಸಂಯೋಜನೆಯ ದೋಷದ ಕುರಿತು ಪ್ರಶ್ನೆಗಳು

ಸಮೀಕ್ಷೆ ಎಲ್ಲಿ ನಡೆಯುತ್ತಿದೆ?

ಈ ಮಹತ್ವದ ಸಮೀಕ್ಷೆ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ನಡೆಯುತ್ತಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಮಾಹಿತಿಗಳನ್ನು ಸಂಗ್ರಹಿಸುವ ಗುರಿಯಿದೆ. ಆದರೆ, ಪ್ರಾರಂಭದ ದಿನವೇ ಉಂಟಾದ ಈ ಅಡಚಣೆ ಆಯೋಗದ ಕಾರ್ಯವೈಖರಿಯ ಮೇಲೂ ಪ್ರಶ್ನೆ ಎತ್ತುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *