Tumkur | ಕಾರು ಮತ್ತು ಲಾರಿ ಡಿಕ್ಕಿ | ಕಂಬಳಕ್ಕೆ ಬಂದವರು ಮಸಣ ಸೇರಿದರು

ಕುಣಿಗಲ್ : ಬೋರ್‌ವೆಲ್ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂರುಜನ ತೀವ್ರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಚಿಗಣಿಪಾಳ್ಯ ಗ್ರಾಮದ ಬಳಿ ಭಾನುವಾರ ಮುಂಜಾನೆ ಸಂಭವಿಸಿದೆ.

ಕೊತ್ತಗೆರೆ ಹೋಬಳಿ ಸಮೀಪ ರಾಜ್ಯ ಹೆದ್ದಾರಿ 33 ರ ತುಮಕೂರು ರಸ್ತೆಯಲ್ಲಿ ಅಪಘಾತ ನಡೆದಿದೆ. ಮಂಗಳೂರು ಬಜಪೆ ಮೂಲದ ಕಿಸಾನ್ ಶೆಟ್ಟಿ(20), ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ಫಿಲಿಫ್ ಮೇರಿ ಲೋಬೋ(32) ಮೃತ ದುರ್ದೈವಿ ಗಳಾಗಿದ್ದಾರೆ.

ಯುವಕ

ನಿತೀಶ್ ಭಂಡಾರಿ, ಪ್ರೀತಿ ಲೋಬೋ, ಹರೀಶ್ ತೀವ್ರವಾಗಿ ಗಾಯಗೊಂಡಿದ್ದರು. ಈ ಮೂವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ಶನಿವಾರ ಪ್ರಾರಂಭವಾದ ಕಂಬಳವನ್ನು ನೋಡಲು ತೆರಳಿದ್ದ ಇವರು ತಮ್ಮ ಊರಿಗೆ ವಾಪಸ್ ತೆರಳುವ ವೇಳೆ ಕುಣಿಗಲ್ ಬಳಿ ದಾರಿ ತಪ್ಪಿದ್ದಾರೆ. ಮಂಗಳೂರಿಗೆ ತೆರಳಬೇಕಾದವರು ತುಮಕೂರು ರಸ್ತೆಯಲ್ಲಿ ತೆರಳಿದ್ದಾರೆ. ಬಳಿಕ ದಾರಿ ತಪ್ಪಿರುವುದು ತಿಳಿದಿದೆ. ಮಂಗಳೂರಿಗೆ ತೆರಳುವ ಸಲುವಾಗಿ ವಾಪಸ್ ಕುಣಿಗಲ್ ಕಡೆಗೆ ಕಾರು ಚಲಾಯಿಸಿಕೊಂಡು ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ಆಗಮಿಸಿದ 112 ಪೊಲೀಸ್ ತಂಡ ಕಾರಿನಿಂದ ಮೃತದೇಹ ಮತ್ತು ಗಾಯಳುಗಳನ್ನು ಹರಸಾಹಸ ಪಟ್ಟು ಹೊರ ತೆಗೆದರು. ಸ್ಥಳಕ್ಕೆ ಕುಣಿಗಲ್ ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬ0ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Pragati TV Social Connect for more latest u

Leave a Reply

Your email address will not be published. Required fields are marked *