ತುಮಕೂರು || ಸುಳ್ಳು ಭರವಸೆ ನೀಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಲೊಕೇಶ್ವರ್..!

ತುಮಕೂರು : ತಿಪಟೂರು ತಾಲೂಕಿನ ಕೆಬಿ ಕ್ರಾಸ್ನಲ್ಲಿ ಲೋಕೇಶ್ವರ್ ನೇತೃತ್ವದಲ್ಲಿ ಹೆದ್ದಾರಿ ಬಂದ್ ನಡೆಸಲಾಯಿತು. ಈ ಬಂದ್ಗೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ ಭಾಗದ ರೈತರು ಬೆಂಬಲ ನೀಡಿದ್ದರು.

ನಪೆಡ್ ತೆರೆಯದೆ ಇರುವ ರಾಜ್ಯ ಸರ್ಕಾರದ ವಿರುದ್ಧ ಮತ್ತು ಸ್ಥಳೀಯ ಶಾಸಕರ ವಿರುದ್ಧ ರೈತರು ಗುಡುಗಿದರು. ಲೊಕೇಶ್ವರ್ ನೇತೃತ್ವದಲ್ಲಿ ನಡೆದ ಹೆದ್ದಾರಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ದೊರೆತಿದ್ದು. ಈ ಕೂಡಲೇ ನಪೆಡ್ ತೆರೆದು ರೈತರ ಕಷ್ಟಕ್ಕೆ ಧಾವಿಸುವಂತೆ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಎಪಿಎಂಸಿ ನಿರ್ದೇಶಕರಾದ ನ್ಯಾಮೇಗೌಡರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ಲೋಕೇಶ್ವರ್ ರವರನ್ನು ತಿಪಟೂರು ದಂಡಾಧಿಕಾರಿ  ಚಂದ್ರಶೇಖರ್ ರವರು ಮನವಲಿಸಲು ಯಶಸ್ವಿಯಾದರು. ಫೆಬ್ರವರಿ 2 ನೇ ತಾರೀಖಿನಂದು ನಪೆಡ್ ಓಪನ್ ಆಗದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Pragati TV Social Connect for more latest u

Leave a Reply

Your email address will not be published. Required fields are marked *