ತುಮಕೂರು : ತಿಪಟೂರು ತಾಲೂಕಿನ ಕೆಬಿ ಕ್ರಾಸ್ನಲ್ಲಿ ಲೋಕೇಶ್ವರ್ ನೇತೃತ್ವದಲ್ಲಿ ಹೆದ್ದಾರಿ ಬಂದ್ ನಡೆಸಲಾಯಿತು. ಈ ಬಂದ್ಗೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ ಭಾಗದ ರೈತರು ಬೆಂಬಲ ನೀಡಿದ್ದರು.
ನಪೆಡ್ ತೆರೆಯದೆ ಇರುವ ರಾಜ್ಯ ಸರ್ಕಾರದ ವಿರುದ್ಧ ಮತ್ತು ಸ್ಥಳೀಯ ಶಾಸಕರ ವಿರುದ್ಧ ರೈತರು ಗುಡುಗಿದರು. ಲೊಕೇಶ್ವರ್ ನೇತೃತ್ವದಲ್ಲಿ ನಡೆದ ಹೆದ್ದಾರಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ದೊರೆತಿದ್ದು. ಈ ಕೂಡಲೇ ನಪೆಡ್ ತೆರೆದು ರೈತರ ಕಷ್ಟಕ್ಕೆ ಧಾವಿಸುವಂತೆ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
![](http://pragatitv.in/wp-content/uploads/2022/09/JEENI_ADD_WEB-1024x576.jpg)
ಎಪಿಎಂಸಿ ನಿರ್ದೇಶಕರಾದ ನ್ಯಾಮೇಗೌಡರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ಲೋಕೇಶ್ವರ್ ರವರನ್ನು ತಿಪಟೂರು ದಂಡಾಧಿಕಾರಿ ಚಂದ್ರಶೇಖರ್ ರವರು ಮನವಲಿಸಲು ಯಶಸ್ವಿಯಾದರು. ಫೆಬ್ರವರಿ 2 ನೇ ತಾರೀಖಿನಂದು ನಪೆಡ್ ಓಪನ್ ಆಗದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Pragati TV Social Connect for more latest u