ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭ: ಪ್ರಮುಖ ಮಸೂದೆಗಳ ಪ್ರಸ್ತಾವನೆಗೆ ಸರ್ಕಾರ ಸಜ್ಜು

ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭ: ಪ್ರಮುಖ ಮಸೂದೆಗಳ ಪ್ರಸ್ತಾವನೆಗೆ ಸರ್ಕಾರ ಸಜ್ಜು

ನವದೆಹಲಿ:  ಇಂದು ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗುತ್ತಿದೆ. ಅಧಿವೇಶನದಲ್ಲಿ ವಿವಿಧ ಮಸೂದೆಗಳನ್ನು ಮಂಡಿಸಲು ಆಡಳಿತಾರೂಢ ಎನ್ಡಿಎ ಸಜ್ಜಾಗಿದೆ. ಈ ಪೈಕಿ ವಕ್ಫ್ ಕಾಯಿದೆ (ತಿದ್ದುಪಡಿ) ಮಸೂದೆ ಪ್ರಮುಖವಾಗಿದೆ. ಪ್ರಸ್ತುತ ಅಧಿವೇಶನ ಡಿಸೆಂಬರ್ 20ರವರೆಗೆ ಮುಂದುವರೆಯಲಿದೆ.

ಮುಸಲ್ಮಾನ್ ವಕ್ಫ್ (ರದ್ದು) ಮಸೂದೆ, ಭಾರತೀಯ ವಾಯುಯಾನ್ ಮಸೂದೆ, ವಿಕೋಪ ನಿರ್ವಹಣಾ (ತಿದ್ದುಪಡಿ) ಮಸೂದೆ, ಬ್ಯಾಂಕಿಂಗ್ (ತಿದ್ದುಪಡಿ) ಕಾಯಿದೆಗಳು, ರೈಲ್ವೇ (ತಿದ್ದುಪಡಿ) ಮಸೂದೆ ಸೇರಿದಂತೆ ಹಲವು ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಪಟ್ಟಿ ಮಾಡಿದೆ.

ಎಲ್ಲ ವಿಚಾರಗಳ ಕುರಿತು ಚರ್ಚೆಗೆ ಸಿದ್ಧ- ಕೇಂದ್ರ: ಈ ಕುರಿತು ನಿನ್ನ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು, ಶಾಂತಿಯುತ ಅಧಿವೇಶವನಕ್ಕೆ ಕರೆ ನೀಡುತ್ತಾ, ಕೇಂದ್ರ ಸರ್ಕಾರ ಎಲ್ಲ ವಿಚಾರಗಳ ಕುರಿತು ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸರ್ವಪಕ್ಷ ಸಭೆ ನಡೆಯಿತು. ಈ ಸಭೆಯಲ್ಲಿ ಉಭಯ ಸದನಗಳ ಎಲ್ಲ ಪಕ್ಷಗಳ ಸಭಾ ನಾಯಕರು ಪಾಲ್ಗೊಂಡಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು.

Leave a Reply

Your email address will not be published. Required fields are marked *