ಬೆಂಗಳೂರು : ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಕುಮಾರಸ್ವಾಮಿಯವರಿಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ ಅವರಿಗೆ ಅವರ ಪಕ್ಷದ ಆಸ್ತಿತ್ವಕ್ಕೆ ಧಕ್ಕೆಯಾಗಿದೆ, ಅವರಿಗೆ ಹತಾಶೆ ಶುರುವಾಗಿದೆ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಇದ್ದರೆ ಕೊಡಲಿ ಸಂಕ್ರಾಂತಿ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಶಾಸಕರು ಉಳಿಯುತ್ತಾರೆ ನೋಡೋಣ.
ಆರೋಪದ ಬಗ್ಗೆ ಸಾಕ್ಷಿಗಳಿದ್ದರೆ ಕೊಡಲಿ ಹಿಂದೆ ಕೆಂಪಣ್ಣ ದೂರು ನೀಡಿದ್ದರು. ಅದಕ್ಕೆ ನಾವು ಆರೋಪ ಮಾಡಿದ್ದೇವೆ ಇವರ ಆರೋಪಕ್ಕೆ ಸಾಕ್ಷಿ ಕೊಡಲಿ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಸೋಲಿನ ಹತಾಶೆಯಲ್ಲಿದ್ದಾರೆ ನಿಖಿಲ್ ಬಗ್ಗೆ ನನಗೆ ಸಹಾನುಭೂತಿ ಇದೆ
ಮುಂದಿನ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ವಿಚಾರ ಚರ್ಚೆ ಬಂದಾಗ ನೋಡೋಣ ಕ್ಯಾಬಿನೆಟ್ ನಲ್ಲಿ ವಿಷಯ ಬರಲಿ ವಿಷಯ ನೋಡದೇ ಮಾತಾಡೋದು ಮೂರ್ಖತನ ಆಗುತ್ತದೆ ವರದಿ ನೋಡಿದ ಮೇಲೆ ನಾನು ಮಾತಾಡುತ್ತೇನೆ ಎಂದ ಪಾಟೀಲ್ ಸರ್ಕಾರದ ನಡೆಯ ಬಗ್ಗೆ ಗುತ್ತಿಗೆದಾರರ ಅಸಮಾಧಾನ ವಿಚಾರ ಯಾರು ಗುತ್ತಿಗೆದಾರರು ಅಸಮಾಧಾನರಾಗಿದ್ದಾರೆ ಅಂತವರ ಲೀಸ್ಟ್ ಕೊಡಲಿ ನಾವು ಕ್ರಮ ಜರುಗಿಸ್ತೇವೆ.
ಸುಮ್ಮನೆ ಹಿಟ್ ಆಂಡ್ ರನ್ ಸರಿಯಲ್ಲ ಪ್ರಿಯಾಂಕ್ ಖರ್ಗೆ ವಿಚಾರದಲ್ಲೂ ಏನು ಮಾಡಿದ್ರು? ಅವರು ಕಂಟ್ರಾಕ್ಟರ್ ಅಲ್ವೋ ಗೊತ್ತಿಲ್ಲ ನಮ್ಮ ಸರ್ಕಾರದಲ್ಲಿ ಅಂತಾದ್ದೇನಿಲ್ಲ- ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ ಎಂಬ ಶಾಸಕರ ಆರೋಪ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ ಅಭಿವೃದ್ಧಿಗೂ ಇದೆ,ಗ್ಯಾರೆಂಟಿಗೂ ಇದೆ ನೀರಾವರಿಗೆ ಹಣ ಕೇಳ್ತಾರೆ ಹಿಂದಿನ ಸರ್ಕಾರ ಬೇಕಾಬಿಟ್ಟಿ ಮಾಡಿದೆ ಹಿಂದಿನ ಸರ್ಕಾರ ಆರ್ಥಿಕ ಶಿಸ್ತನ್ನ ಮೀರಿ ಹೋಗಿತ್ತು. 70 ಸಾವಿರ ಕೋಟಿ ಸಾಲ ಮಾಡಿತ್ತುಅವರು ಮಾಡಿರೋದು ಎಕ್ಸಸ್ ಬಿಲ್ ಉಳಿದಿದೆ ಪಿಡಬ್ಲ್ಯೂಡಿ,ರೂರಲ್ ಡೆವಲಪ್ ಮೆಂಟ್ ನಲ್ಲಿ ಪೆಂಡಿಂಗ್ ಇದೆ ಅವರು ಹಣ ಪೆಂಡಿಂಗ್ ಇಟ್ಟು ಹೋದ್ರು ನಮ್ಮ ಸಿಎಂ ಹಣಕಾಸು ವಿಚಾರದಲ್ಲಿ ಪರ್ಫೆಕ್ಟ್. ಹಣ ಹೊಂದಿಸುವುದು ಗೊತ್ತಿದೆಎಲ್ಲ ಸರಿಪಡಿಸಿಕೊಂಡು ಹೋಗ್ತೇನೆ ಅಂದಿದ್ದಾರೆ.
ಈಗ ಅದನ್ನ ಮಾಡ್ತಿದಾರೆ-ಉಕ್ಕು ಕಾರ್ಖಾನೆ ಸಂಬಂಧ ರಾಜ್ಯ ಸರ್ಕಾರದಿಂದ ಬೇಡಿಕೆ ಬಂದಿಲ್ಲ ಎಂಬ ಕುಮಾರಸ್ವಾಮಿ ಆರೋಪ ವಿಚಾರ ಕೇಂದ್ರಕ್ಕೆ ನಾವು ಪತ್ರ ಬರೆದಿದ್ದೇವೆ ಸೆಮಿಕಂಡೆಕ್ಟರ್ ಗೆ ಅವಕಾಶ ಕೊಡಿ ಅಂತ ಎಲ್ಲಾ ಕಂಪನಿಗಳನ್ನ ಅಲ್ಲಿಗೆ ಕರೆದುಕೊಳ್ತಿದ್ದಾರೆ. ಎಲ್ಲವೂ ಗುಜರಾತ್ ಗೆ ಹೋಗ್ತಿವೆ ಅವರು ಇನ್ಸೆಂಟೀವ್ ಜಾಸ್ತಿ ಕೊಡ್ರಾರೆ ಅಂತ ನಮ್ಮಲ್ಲಿ ಜಿಂದಾಲ್ ಸೇರಿ ಹಲವು ಕಂಪನಿಗಳಿವೆ ಕುಮಾರಸ್ವಾಮಿ ಆರೋಪಕ್ಕೆ ಎಂಬಿ ಪಾಟೀಲ್ ತಿರುಗೇಟು.