ಕೊಪ್ಪಳದ ಅಜ್ಜಿಯಿಂದ ಮಮತೆಯ ಸಾಧನೆ: ತಬ್ಬಲಿ ಮೊಮ್ಮಗಳ ಭವಿಷ್ಯಕ್ಕಾಗಿ 23 ಕಂತು ಗೃಹಲಕ್ಷ್ಮಿ ಹಣ ಉಳಿಸಿದ ಶಂಕ್ರಮ್ಮ!

ಕೊಪ್ಪಳದ ಅಜ್ಜಿಯಿಂದ ಮಮತೆಯ ಸಾಧನೆ: ತಬ್ಬಲಿ ಮೊಮ್ಮಗಳ ಭವಿಷ್ಯಕ್ಕಾಗಿ 23 ಕಂತು ಗೃಹಲಕ್ಷ್ಮಿ ಹಣ ಉಳಿಸಿದ ಶಂಕ್ರಮ್ಮ!

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿ ಶಂಕ್ರಮ್ಮ ಎಂಬವರು ತಮ್ಮ ತಬ್ಬಲಿ ಮೊಮ್ಮಗಳು ರೇಖಾಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಖಾತೆಗೆ ಬಂದ ಗೃಹಲಕ್ಷ್ಮೀ ಯೋಜನೆಯ 23 ಕಂತುಗಳ ಹಣವನ್ನು ಖರ್ಚು ಮಾಡದೇ ಉಳಿಸಿಕೊಂಡು ಗಮನ ಸೆಳೆದಿದ್ದಾರೆ. ಅಜ್ಜಿ ಶಂಕ್ರಮ್ಮ ಗೃಹಲಕ್ಷ್ಮೀಯಿಂದ ಬಂದ ಸಂಪೂರ್ಣ ಹಣವನ್ನು ಮೊಮ್ಮಗಳು ರೇಖಾಳ ಹೆಸರಿನ ಖಾತೆಗೆ ಜಮಾ ಮಾಡಿದ್ದಾರೆ. ತಂದೆ ತಾಯಿ ಇಲ್ಲದೆ ಬೆಳೆದ ರೇಖಾಳ ಭವಿಷ್ಯ ಮತ್ತು ವಿದ್ಯಾಭ್ಯಾಸವನ್ನು ಸುರಕ್ಷಿತಗೊಳಿಸಲು ಈ ಹಣವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *