BBMP ಅರಣ್ಯಾಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ criminal cases ಹೂಡಲು AAP ಆಗ್ರಹ

BBMP ಅರಣ್ಯಾಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ criminal cases ಹೂಡಲು AAP ಆಗ್ರಹ

ಬೆಂಗಳೂರು: ನಗರದ ಶ್ರೀನಗರದಲ್ಲಿ ಮರದ ಕೊಂಬೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿರುವ ಯುವಕ ಅಕ್ಷಯ್ ನನ್ನು ಜಯನಗರದ ಅಪೋಲೋ  ಆಸ್ಪತ್ರೆಯಲ್ಲಿ ಆಮ್ ಆದ್ಮಿ ಪಕ್ಷದ  ಕಾರ್ಯಕರ್ತರುಗಳೊಂದಿಗೆ  ಭೇಟಿ ನೀಡಿದ  ಪಕ್ಷದ ಕಾರ್ಯಾಧ್ಯಕ್ಷ  ಸೀತಾರಾಮ್ ಗುಂಡಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಕೂಡಲೇ  ಈ ದುರ್ಘಟನೆಗೆ ಕಾರಣವಾಗಿರುವ ಬಿಬಿಎಂಪಿಯ ಅರಣ್ಯ ವಿಭಾಗದ ಉನ್ನತ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಪಕ್ಷದ ಬೆಂಗಳೂರಿನ ಕಾರ್ಯಕರ್ತರುಗಳು ಅನೇಕ ಬಾರಿ ಹಳೆಯ ಮರಗಳು ಹಾಗೂ ಕೊಂಬೆಗಳನ್ನು ತೆಗೆಯಲು ಅನೇಕ ವರ್ಷಗಳಿಂದ  ದೂರನ್ನು  ನೀಡುತ್ತಲೇ ಬಂದಿದ್ದಾರೆ. ಆದರೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಬಿಬಿಎಂಪಿಯ ಅರಣ್ಯ ವಲಯದ ಅಧಿಕಾರಿಗಳು  ಮುಂದಾಗುತ್ತಿಲ್ಲ. ಇವರುಗಳ  ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ  ಅಕ್ಷಯ್ ರಂತಹ ನೂರಾರು ಬೆಂಗಳೂರಿನ ನಾಗರಿಕರುಗಳ ಪ್ರಾಣಕ್ಕೆ ಸಂಚಕಾರ ಬಂದಿದೆ. ಅಧಿಕಾರಿಗಳು ಇಂತಹ ಅನೇಕ ದುರ್ಘಟನೆಗಳು  ಪದೇಪದೇ ಸಂಭವಿಸಿದ್ದರೂ ಸಹ   ಎಚ್ಚೆತ್ತುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ .

ಸರ್ಕಾರವು  ಅಧಿಕಾರಿಗಳ  ಉತ್ತರದಾಯಿತ್ವವನ್ನು ನಿಜಕ್ಕೂ ಪ್ರಶ್ನಿಸುವ ತಾಕತ್ತನ್ನು ಹೊಂದಿದ್ದಲ್ಲಿ ಕೂಡಲೇ ಈ ವಿಭಾಗದ ಉನ್ನತ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆಯನ್ನು  ಹೂಡಿ  ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.

Leave a Reply

Your email address will not be published. Required fields are marked *