ನಟ ದರ್ಶನ್ ಜೈಲಿನಿಂದ ಬಿಡುಗಡೆಗೆ ಮುಹೂರ್ತ ಫಿಕ್ಸ್

ನಟ ದರ್ಶನ್ ಜೈಲಿನಿಂದ ಬಿಡುಗಡೆಗೆ ಮುಹೂರ್ತ ಫಿಕ್ಸ್

ತುಮಕೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಜೈಲಿನಿಂದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂಬ ಮಾಹಿತಿಯನ್ನು ತುಮಕೂರಿನ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

 ಆಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ದರ್ಶನ್ ಬಿಡುಗಡೆ ಆಗ್ತಾರೆ ಎಂಬ ಮಾಹಿತಿ ಭವಿಷ್ಯವನ್ನು ನುಡಿದಿದ್ದಾರೆ‌. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದ್ದು, ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ ಎಂದಿರುವ ಸ್ವಾಮೀಜಿ, ಹೂ ಕೊಡುವ ಮೂಲಕ ದರ್ಶನ್ ಬಿಡುಗಡೆಗೆ  ತಾಯಿ ಮೂಕಾಂಬಿಕಾ ದೇವಿ ಮುನ್ಸೂಚನೆ ಕೊಟ್ಟಿದ್ದಾಳಂತೆ.

ತುಮಕೂರು ಹೊರವಲಯದ ಚಿನಗ ಗ್ರಾಮದಲ್ಲಿನ ಶ್ರೀ ಮೂಕಾಂಬಿಕಾ ದೇವಿಯ, ಮೂಕಾಂಬಿಕಾ ದೇವಿ ಆರಾಧಕರು, ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಅವರು ಸ್ಟೋಟಕ ಹೇಳಿಕೆ ನೀಡಿದ್ದಾರೆ.

ದರ್ಶನ್ ಬಿಡುಗಡೆ ಬಗ್ಗೆ ಜ್ಯೋತಿಷ್ಯ ಹೇಳುತ್ತಿರುವಾಗಲೇ  ತಾಯಿ ಮೂಕಾಂಬಿಕಾ ದೇವಿ‌ ಬಲಗಡೆ ಹೂ ಕೊಟ್ಟಿದ್ದಾಳಂತೆ. ಹೀಗಾಗಿ  ಮೂಕಾಂಬಿಕಾ ದೇವಿಯ ಹೂ ಪ್ರಸಾದ ಆಶ್ಚರ್ಯ ಮೂಡಿಸಿದ್ದು,

ದೇವಿಯ ಹೂ ಪ್ರಸಾದದಿಂದ ದರ್ಶನ್ ಬಿಡುಗಡೆಗಯ ದಿನವನ್ನು ಜ್ಯೋತಿಷಿಗಳು ದೃಢೀಕರಿಸಿದ್ದಾರೆ.

ಕಾರ್ತಿಕ್ ಮಾಸದ ಅಂತ್ಯಕ್ಕೆ ದರ್ಶನ್ ಬಿಡುಗಡೆ:- ಕಾರ್ತಿಕ್ ಮಾಸದ ಅಂತ್ಯದೊಳಗೆ ನಟ ದರ್ಶನ್ ಬಿಡುಗಡೆ ಆಗ್ತಾರೆ.

ದರ್ಶನ್ ಅವರ ಜನ್ಮ ಜಾತಕದ ಪ್ರಕಾರ ಶುಭ ಸಮಯ ಪ್ರಾರಂಭವಾಗಿದೆ. ದೇವಿಯ ಮುನ್ಸೂಚನೆಯಂತೆ ದರ್ಶನ್ ಬಿಡುಗಡೆ ಆಗ್ತಾರೆ, ದೇವಿಯ ಆಶೀರ್ವಾದ ಸಂಪೂರ್ಣ ಇದೆ. ದೇವಿಯ ಆಶೀರ್ವಾದದಿಂದ ಎಲ್ಲವೂ ಶುಭ ಆಗ್ತದೆ. ದರ್ಶನ್‌ರ ದಶಾಬುಕ್ತಿಗಳು ಅಂತ್ಯವಾಗಿ, ಶುಭ ದಶಾಬುಕ್ತಿಗಳು ಪ್ರಾರಂಭವಾಗಿವೆ ಎಂದು ಹೇಳಿದ್ದಾರೆ.

ಅಭಿಮಾನಿಗಳೆ ಆತಂಕ ಬೇಡ:-

ಅಭಿಮಾನಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ಪೂಜಾ-ಪುನಸ್ಕಾರ ಎಲ್ಲವನ್ನೂ ನಡೆಸಿಕೊಂಡು ಬಂದಿರೊದ್ರಿಂದ ಆ ದೇವಿಯ ಅನುಗ್ರಹ ಇರುತ್ತದೆ. ಆ ದೇವಿಯ ಅನುಗ್ರಹ ಕೂಡ ಇರುವುದರಿಂದ ದರ್ಶನ್ ಬಿಡುಗಡೆ ಆಗ್ತಾರೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದಿದ್ದಾರೆ ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ.

ಒಳ್ಳೆಯ ಸಮಯ ಪ್ರಾರಂಭವಾಗಿದೆ:- ಕಾರ್ತಿಕ ಮಾಸದ ಅಂತ್ಯ ಭಾಗದಲ್ಲಿ ಶುಭವಾಗುವ ವಿಚಾರ ಸಿಕ್ಕಿದೆ.

ನಾಳೆ, ನಾಡಿದ್ದು ಅಂತಾ ಅಲ್ಲ, ಒಂದು ಮಾಸ ಅಂತಾ ಅಲ್ಲ, ಆಶ್ವೇಜ ಮತ್ತು ಕಾರ್ತಿಕದ ಒಳಭಾಗದಲ್ಲಿ ಒಳ್ಳೆಯ ರೀತಿಯ ಫಲಾನುಫಲಗಳು ಸಿಕ್ತವೆ.

ದೇವಿಯ ಆಶೀರ್ವಾದ ಕೂಡ ಪ್ರಾಪ್ತಿಯಾಗಿದೆ. ಆ ದೇವಿ ಬಲಗಡೆಯಿಂದ ಹೂ ಪ್ರಸಾದವನ್ನ ಕೊಟ್ಟಿದ್ದಾಳೆ. ಈ ದೇವಿ ಹೂ ಪ್ರಸಾದ ಕೊಟ್ರೆ ಇಲ್ಲಿವರೆಗೂ ಯಾವುದೂ ಕೂಡ ಸುಳ್ಳಾಗಿಲ್ಲ. ಸಾಕಷ್ಟು ರೀತಿಯಲ್ಲಿ ಒಳ್ಳೆಯದಾಗಿದೆ ಅಂತಾ ಭಕ್ತಾಧಿಗಳು ತುಂಬಾ ಹೇಳಿಕೊಂಡು ಬಂದಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆ ಕೂಡ ಇದೆ. ಆತಂಕಪಡುವ ಆವಶ್ಯಕತೆ ಇಲ್ಲ, ಅಭಿಮಾನಿಗಳು ತಮ್ಮ ಸೇವೆಯನ್ನು ಮಾಡಿಕೊಂಡು ಹೋಗಿ. ದೇವಸ್ಥಾನಗಳಲ್ಲಿ ಅನ್ನ ದಾಸೋಹ, ಅಭಿಷೇಕ, ಅಲಂಕಾರ ಆಗಿರಬಹುದು. ಅಭಿಮಾ‌ನಿಗಳು ನೀವು ಇರುವ ಊರುಗಳಲ್ಲಿ ದೇವಿ ಆರಾಧನೆ ಮಾಡಿಕೊಂಡು ಹೋಗಿ.

ದೇವಿಯ ಆಶೀರ್ವಾದ ಪ್ರಾಪ್ತಿ ಆಗ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಶುಭ ಆಗುವ ಸಂಕೇತ ದೇವಿ ತೋರಿಸಿದ್ದಾಳೆ.‌ ಖಂಡಿತಾ ಶುಭ ಆಗ್ತದೆ. ಇಷ್ಟು ದಿವಸ ಜನ್ಮ‌ ಜಾತಕದಲ್ಲಿ ಗುರುದಶಾಬುಕ್ತಿ ನಡೆಯುತ್ತಿತ್ತು.  2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದೆ.

ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. 2027ರ ನಂತರ ರಾಜಕೀಯ ಉನ್ನತ ಸ್ಥಾನ ಪಡೆಯುತ್ತಾರೆ. ಹಾಗಾಗಿ ಇದರಲ್ಲಿ ಯಾವುದೇ ಅನುಮಾನ ಬೇಡ.

2027ರ ನಂತರ ದರ್ಶನ್ ಜೀವನ ಶೈಲಿ ಬದಲಾಗಲಿದೆ. ಈಗ 2024ರ ಅಂತ್ಯದಲ್ಲಿ ಇದ್ದೇವೆ. 2025-2026ರ ನಂತರ 2027ರಿಂದ ಒಳ್ಳೆಯ ಸಮಯ ಪ್ರಾರಂಭ ಆಗ್ತದೆ. ಒಳ್ಳೆಯ ರೀತಿಯ ಜೀವ್ನ ಕಲ್ಪಿಸಿಕೊಡುತ್ತಾಳೆ. ಯಾವುದೇ ಅನುಮಾನ ಬೇಡ.

ರಾಜಕೀಯ ಪ್ರವೇಶದ ಯೋಗ ಕೂಡ ದರ್ಶನ್‌ಗೆ ಇದೆ. ದಶಾಬುಕ್ತಿಗಳು ಮನುಷ್ಯನ ಜೀವನ ಶೈಲಿಯನ್ನೇ ಬದಲಾಯಿಸಿಬಿಡುತ್ತದೆ.

ಒಳ್ಳೆಯದು ಪ್ರಾರಂಭ ಆಗಬೇಕು ಅಂದಾಗ ಕೆಟ್ಟದು ನಮ್ಮ‌ ಕಣ್ಣಿಗೆ ಯಾವುದೂ ಕಾಣಿಸಲ್ಲ. ದೇವಿಯು ಆಶೀರ್ವಾದ ಮಾಡಿರೋದ್ರಿಂದ ಅವರ ಜೀವನ ಸುಗಮವಾಗಿ ನಡೆಯುತ್ತದೆ. ಅಮ್ಮನವರು ಒಂದು ಪ್ರಸಾದ ಕೊಟ್ರೆ ನಿರಾಸೆ ಆದ ಉದಾಹರಣೆ ಇಲ್ಲ. ಸಾಕಷ್ಟು ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿದ್ದಾಳೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಚಂಡಿಕಾ ಯಾಗ ಮಾಡಿಸಿದ್ರು. ಆದಾದ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ರು. ಕ್ಷೇತ್ರದಲ್ಲಿ ಎಲ್ಲರೂ ಭೇಟಿ ಕೊಟ್ಟವ್ರೆ.  ಸಿರಾದ ದಿವಂಗತ ಸತ್ಯನಾರಾಯಣ್, ವಾಸು, ಬೆಮೆಲ್ ಕಾಂತರಾಜು, ಗೌರಿಶಂಕರ್, ಸುರೇಶ್‌ಗೌಡ.

ಪರಮೇಶ್ವರ, ಮುದ್ದಹನುಮೇಗೌಡ ಸಾಕಷ್ಟು ರೀತಿಯ ರಾಜಕೀಯ ವ್ಯಕ್ತಿಗಳು ದೇವಿಯ ಆಶೀರ್ವಾದ ಪಡೆದಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಿರುವ ನಿದರ್ಶನಗಳಿವೆ ಎಂದು  ತುಮಕೂರಿನಲ್ಲಿ ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಸ್ಟೋಟಕ ಹೇಳಿಕೆ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *