ದಕ್ಷಿಣ ಕನ್ನಡ : ಈ ಹಿಂದೆ ಸರ್ಕಾರದ ವಿವಿಧ ಯೋಜನೆಗಳಿಗೆ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿತ್ತು ಈಗ ಆಧಾರ್ ಪಾನ್ ಜೋಡಣೆ ಮಾಡಿಸಿಕೊಂಡ ಕೊನೆಯಲ್ಲಿ ದಂಡ ಸಹಿತವಾಗಿ ಜೋಡಣೆ ಮಾಡಿಸಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡು ಬಡವರಿಗೆ ದೊರೆಯುತ್ತಿರುವ ಸವಲತ್ತುಗಳ ಪಟ್ಟಿಯಿಂದ ಹೊರ ಉಳಿಯಲಾಗುತ್ತದೆ ಎಂಬ ಆತಂಕ ಶುರುವಾಗಿದೆ. ದಂಡ ಪಾವತಿಯ ಕಾರಣದಿಂದಾಗಿ ಬಡವರು ಸಹ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ ಇದರಲ್ಲಿ ಹೆಚ್ಚಿನವರು ಬಿಪಿಎಲ್ ಕಾರ್ಡ್ ಹೊಂದಿದ್ದು, ಇವರಿಗೆ ಸರ್ಕಾರದ ವಿವಿಧ ಸವಲತ್ತುಗಳಿಂದ ವಂಚಿತವಾಗುವ ಭೀತಿ ಕಾಣಿಸಿದೆ. ಇನ್ನು ಅದೇ ರೀತಿಯಲ್ಲಿ ಬಿಪಿಎಲ್ ಪಟ್ಟಿಯಲ್ಲಿ ಮತ್ತು ಆದಾಯದಲ್ಲಿ ಹಿಂದುಳಿದವರಲ್ಲಿ ಕಡಿಮೆ ಮೊತ್ತದ ಮೌಲ್ಯವಿರುವ ಅಂದರೆ ಸುಮಾರು 50,000 ಅಥವಾ 1 ಲಕ್ಷ ಒಳಗಡೆ ಮೌಲ್ಯವಿರುವ ನಾಲ್ಕು ಚಕ್ರದ ವಾಹನಗಳಿದ್ದು ಅಂತಹ ಹಲವು ಜನರ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಲಕ್ಷಗಟ್ಟಲೆ ಬೆಲೆ ಬಾಳುವ ದ್ವಿಚಕ್ರವಾಹನ ಹೊಂದಿರುವವರ ಕಾರ್ಡುಗಳಿಗೆ ಈ ಮಾನದಂಡ ಅನ್ವಯವಾಗಿಲ್ಲ ಇದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳಾಗಿವೆ.
ದಂಡ ಸಹಿತ ಪಾನ್ ಆಧಾರ್ ಲಿಂಕ್ ನಿಂದ ಆದಾಯ ತೆರಿಗೆ ಪಟ್ಟಿಯಲ್ಲಿ ಸೇರ್ಪಡೆ!
