ಬೆಂಗಳೂರು || ಅತ್ತೆ ಸಾಯಿಸಲು ಡಾಕ್ಟರ್ ಬಳಿ ಮಾತ್ರೆ ಕೇಳಿದ ಕೇಸ್ಗೆ ಬಿಗ್ ಟ್ವಿಸ್ಟ್

ಬೆಂಗಳೂರು || ಅತ್ತೆ ಸಾಯಿಸಲು ಡಾಕ್ಟರ್ ಬಳಿ ಮಾತ್ರೆ ಕೇಳಿದ ಕೇಸ್ಗೆ ಬಿಗ್ ಟ್ವಿಸ್ಟ್

ಬೆಂಗಳೂರು: ಬೆಂಗಳೂರಿನ ವೈದ್ಯರ ಬಳಿ ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವೈದ್ಯ ಸುನಿಲ್ ಕುಮಾರ್ ನೀಡಿದ ದೂರಿನ ಮೇರೆ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಸಾಯಿಸಲು ಮಾತ್ರೆ ಕೇಳಿದ ಮಹಿಳೆ ಸಾಯಲು ನಿರ್ಧರಿಸಿದ್ದರು ಎನ್ನುವ ಆಘಾತಕಾರಿ ವಿಚಾರ ತಿಳಿದು ಬಂದಿದೆ.

ಮಹಿಳೆಯನ್ನು ವಿಚಾರಣೆ ಮಾಡಿದಾಗ ಅತ್ತೆಯನ್ನು ಸಾಯಿಸಲು ಅಲ್ಲ, ತಾನೇ ಸಾಯಬೇಕಾಗಿತ್ತು ಹಾಗಾಗಿ ವೈದ್ಯರ ಬಳಿ ಮಾತ್ರೆ ಕೇಳಿದ್ದೆ ಎಂದು ಮಹಿಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ವಿಚಾರಣೆ ವೇಳೆ ಈ ಮಹಿಳೆ ಖಿನ್ನತೆಗೆ ಒಳಗಾಗಿರುವುದು ಕೂಡ ತಿಳಿದು ಬಂದಿದೆ. ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ ಮಹಿಳೆ, ಒಮ್ಮೆ ಮನೆಯನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಸಂಪೂರ್ಣವಾಗಿ ಖಿನ್ನತೆಗೆ ಜಾರಿದ್ದ ಮಹಿಳೆ ಗೂಗಲ್ನಲ್ಲಿ ಡಾಕ್ಟರ್ಗಳ ನಂಬರ್ ಹುಡುಕಿದ್ದು, ಆ ಬಳಿಕ ಡಾ.ಸುನಿಲ್ ನಂಬರ್ ಸಿಕ್ಕಿ ಮೆಸೇಜ್ ಮಾಡಿ ಸಾಯಿಸುವ ಮಾತ್ರೆ ಕೇಳಿದ್ದಾಳೆ. ಆದರೆ ವಿಚಾರಣೆ ವೇಳೆ ಮಹಿಳೆಯೇ ಸಾಯಲು ನಿರ್ಧರಿಸಿರುವ ಮಾಹಿತಿ ತಿಳಿದು ಬಂದಿದ್ದು, ಸದ್ಯ ಮಹಿಳೆಯನ್ನು ಕೌನ್ಸಿಲಿಂಗ್ ರವಾನಿಸಲಾಗಿದೆ. ಅಲ್ಲದೇ ವೈದ್ಯರು ಖಿನ್ನತೆಗೆ ಚಿಕಿತ್ಸೆ ಕೊಡಿಸುವಂತೆ ಮಹಿಳೆಯ ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಡಾ. ಸುನಿಲ್ ಕುಮಾರ್ ಅವರ ದೂರವಾಣಿ ಸಂಖ್ಯೆ ಪಡೆದ ಮಹಿಳೆ, ಫೆಬ್ರವರಿ 17ರಂದು ಸಂದೇಶ ಕಳುಹಿಸಿದ್ದಾಳೆ. ಈ ವೇಳೆ ಡಾ. ಸುನಿಲ್ ಕುಮಾರ್ ನೇರವಾಗಿ ಮೆಸೇಜ್ ಮಾಡಿದ ಉದ್ದೇಶವನ್ನು ಕೇಳಿದ್ದಾರೆ. ಈ ವೇಳೆ ಮಹಿಳೆ ಕೊಟ್ಟ ಕಾರಣ ಕೇಳಿ ವೈದ್ಯರೇ ದಂಗಾಗಿದ್ದಾರೆ.

‘ನಿಮ್ಮ ಬಳಿ ಹೇಳಲು ಭಯವಾಗುತ್ತಿದೆ. ಅತ್ತೆಯನ್ನು ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತಾ. ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅದಕ್ಕೆ ನಿಮ್ಮನ್ನು ಕೇಳೋಣ ಅಂತ. ಏನಾದ್ರೂ ಹೇಳ್ತೀರಾ ಹೇಗೆ ಸಾಯಿಸೋದು ಅಂತ. ಪ್ಲೀಸ್ ಹೇಳಿ. ಮಾತ್ರೆ ಇರುತ್ತಲ್ಲ ಅದು ಹೇಳಿ. ಒಂದು, ಎರಡು ತಗೊಂಡ್ರೆ ಸಾಯ್ತಾರಲ್ಲ ಆತರ ಇಲ್ವಾ?’ ಎಂದು ಮಹಿಳೆ ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಎಂದು ವೈದ್ಯರ ಬಳಿ ವಾಟ್ಸಾಪ್ ಸಂದೇಶದ ಮೂಲಕ ಕೇಳಿದ್ದಾಳೆ.

ಬಳಿಕ ವೈದ್ಯರು ತಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿ ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಮಹಿಳೆಯ ಆಲೋಚನೆಯಿಂದ ಶಾಕ್ ಆಗಿರುವ ವೈದ್ಯ ಸುನಿಲ್ ಕುಮಾರ್ ಮೆಸೇಜ್ಗಳು ಡಿಲೀಟ್ ಆಗುವ ಮೊದಲೇ ಎಲ್ಲವನ್ನೂ ಸ್ಕ್ರೀನ್ಶಾಟ್ ತೆಗೆದುಕೊಂಡು ಸಂಜಯ್ ನಗರದ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದರು.

Leave a Reply

Your email address will not be published. Required fields are marked *