ಬೆಂಗಳೂರು || ಪ್ರಿಯಾಂಕ್ ಖರ್ಗೆ ಪರ ಗೃಹ ಸಚಿವ ಡಾ. ಜಿ ಪರಮೇಶ್ವರ್ ಫುಲ್ ಬ್ಯಾಟಿಂಗ್

ತುಮಕೂರು || Parameshwar ಗೆ ಇಡಿ ಇಕ್ಕಳ, ಇಡಿ ಅಧಿಕಾರಿಗಳಿಗೆ ಮಹತ್ವದ ದಾಖಲೆ ಲಭ್ಯ

ಬೆಂಗಳೂರು : ರಾಜ್ಯದ ಜನತೆಗೆ ಹೊಸ ವರ್ಷದ ಶುಭ ಕಾಮನೆಗಳು ವೈಯಕ್ತಿಕವಾಗಿ ಹಾಗೂ ಸರ್ಕಾರದ ಪರವಾಗಿ ಶುಭಾಷಯಗಳು. ಎಲ್ಲರಿಗೂ ಹರ್ಷ ತರಲಿ, ಶಾಂತಿ ಸುಖ ನೆಮ್ಮದಿ ಎಲ್ಲರಿಗೂ ಸಿಗಲಿ. ನಾವು ಗೃಹ ಇಲಾಖೆಯಿಂದ ಎಲ್ಲ ರೀತಿಯ ಅಗತ್ಯ ಕ್ರಮ ತಗೊಂಡಿದ್ದೇವೆ ಅಹಿತಕರ ಘಟನೆ ಆಗಬಾರದು ಅಂತ ನಮ್ಮ ಉದ್ದೇಶ ಎಂದು ಹೊಸ ವರ್ಷದ ಭದ್ರತೆಯ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಯಾವುದೇ ರೀತಿಯ ಘಟನೆ ಆಗದಂತೆ ನಗರದಾದ್ಯಂತ ಪೊಲೀಸರ ನಿಯೋಜನೆ ಮಾಡಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ ಎಲ್ಲಲ್ಲಿ ಜನ ಹೆಚ್ಚು ಸೇರ್ತಾರೋ ಅಲ್ಲೆಲ್ಲ ಪೊಲೀಸರ ಕಾವಲು ಇದೆ. ಹಿರಿಯ ಅಧಿಕಾರಿಗಳೂ ಕೂಡ ಪರಿಶೀಲನೆ ಮಾಡುತ್ತಿದ್ದಾರೆ. ಭೇಟಿ ಮೂಲಕ ಕ್ರಮ ವಹಿಸುತ್ತಿದ್ದಾರೆ. ಈಗಾಗಲೇ 7.5 ಸಾವಿರ ಸಿಸಿ ಟಿವಿಗಳ ಅಳವಡಿಕೆ ಮಾಡಲಾಗಿದೆ. ಹಾಟ್ಸ್ಪಾಟ್ಗಳಲ್ಲಿ ತಾತ್ಕಾಲಿಕವಾಗಿ ಕ್ಯಾಮೆರಗಳ ಅಳವಡಿಕೆ ಮಾಡಲಾಗಿದೆ. ಪೊಲೀಸರು ಬಹಳ ಜನ ಮಫ್ತಿಯಲ್ಲಿರ್ತಾರೆ. ಏನಾದರೂ ಘಟನೆ ಆದರೆ ತಕ್ಷಣ ಕ್ರಮ ವಹಿಸಲು ಪೊಲೀಸರು ಸಿದ್ಧವಾಗಿದ್ದಾರೆ ಎಂದು ತಿಳಿಸಿದರು.

ಸಿ. ಟಿ ರವಿ ರಾಜ್ಯಪಾಲರ ಭೇಟಿ

ನಾನೂ ಕೂಡಾ ಅದನ್ನು ಗಮನಿಸಿದೆ. ಈಗಾಗಲೇ ನಾವು ಸಿಓಡಿ ತನಿಖೆಗೆ ಕೊಟ್ಟಿದ್ದೇವೆ. ತನಿಖೆಯಲ್ಲಿ ಏನು ಬರುತ್ತೆ ಅಂತ ನೋಡೋಣ. ಪೊಲೀಸರ ತಪ್ಪು ಇದೆಯಾ..? ಅವರ ತಪ್ಪಿದೆಯಾ..? ಯಾವ ರೀತಿ ವರದಿ ಬರುತ್ತೋ ಅದರ ಅನ್ವಯ ಕ್ರಮ ಆಗುತ್ತೆ. ಸಾಮಾನ್ಯವಾಗಿ ಆಪಾದನೆ ಮಾಡ್ತಾರೆ. ಆದರೆ ಸರಿ ತಪ್ಪು ತನಿಖೆಯಲ್ಲಿ ಗೊತ್ತಾಗುತ್ತೆ. ತನಿಖೆ ಆಧರಿಸಿ ಮುಂದಿನ ಕ್ರಮ ಮಾಡಲಿದ್ದೇವೆ ಎಂದರು.

ಬಿಜೆಪಿ ಕಾರ್ಯಕರ್ತರಿಂದ ಪ್ರಿಯಾಂಕ್ ಖರ್ಗೆ ಮನೆಗೆ ಮುತ್ತಿಗೆ

ಪ್ರಿಯಾಂಕ್ ಖರ್ಗೆ ಮನೆಗೆ ಪೋಸ್ಟರ್ ಅಂಟಿಸುವ ದೃಷ್ಟಿಯಿಂದ ಪ್ರಿಯಾಂಕ್ ಖರ್ಗೆ ಮನೆ ಮುಂದೆ ಪೋಲಿಸ್ ಬಿಗಿ ಭದ್ರತೆ ಮಾಡಲಾಗಿದೆ. ಸದಾಶಿವನಗರ ನಿವಾಸದಲ್ಲಿ ಪೋಲಿಸ್ ಬಿಗಿ ಭದ್ರತೆ ಮಾಡಲಾಗಿದೆ ಎಂದು ಹೇಳಿದರು.

ದರ್ಶನ್ ಪ್ರಕರಣದಲ್ಲಿ ಮೇಲ್ಮನವಿ

ನಿನ್ನೆ ಮೇಲ್ಮನವಿ ಸಲ್ಲಿಕೆಗೆ ಸರ್ಕಾರದಿಂದ ಆದೇಶ ಆಗಿದೆ. ಪೊಲೀಸರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಕೆಲಸ ಮಾಡ್ತಾರೆ ಎಂದು ತಿಳಿಸಿದರು.

ಸಚಿನ್ ಆತ್ಮಹತ್ಯೆ ಪ್ರಕರಣ

ಈಗಾಗಲೇ ಪ್ರಿಯಾಂಕ್ ಖರ್ಗೆ ತಮ್ಮ ಪಾತ್ರ ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಡೆತ್ನೋಟ್ನಲ್ಲೂ ಪ್ರಿಯಾಂಕ್ ಖರ್ಗೆ ಹೆಸರಿಲ್ಲ ಅಂದಿದ್ದಾರೆ. ಆದರೂ ಅವರನ್ನು ಸಿಕ್ಕಿಸಲು ಬಿಜೆಪಿ ಪ್ರಯತ್ನ ಪಡ್ತಿದೆ. ಆಧಾರ ರಹಿತ ಆರೋಪ ಮಾಡ್ತಿದೆ. ಯಾವುದಾದರೂ ಆಧಾರ ಇರಬೇಕಲ್ಲ ಸುಮ್ಮನೆ ದೂಷಣೆ ಸರಿಯಲ್ಲ. ಬಿಜೆಪಿ ಈ ಮಟ್ಟಕ್ಕೆ ಇಳಿಯಬಾರದು. ಬಿಜೆಪಿ ಅನಾವಶ್ಯಕ ಪ್ರಿಯಾಂಕ್ ಖರ್ಗೆ ಮೇಲೆ ಆಪಾದನೆ ಮಾಡ್ತಿದೆ ಎಂದು ಉತ್ತರಿಸಿದರು.

ರಾಜು ಕಪನೂರು ಬಂಧನ ಆಗಿಲ್ಲ

ಅನಾವಶ್ಯಕವಾಗಿ ಆರೋಪ ಮಾಡೋದು ಸರಿಯಲ್ಲ. ಸಿಒಡಿಗೆ ಪ್ರಕರಣ ವಹಿಸಲಾಗಿದೆ, ತನಿಖೆ ವರದಿ ಬರಲಿ ಹಣದ ವಿಚಾರ ನಾನು ಈಗ ಮಾತಾಡಲ್ಲ. ತನಿಖೆಯಲ್ಲಿ ಏನು ಬರುತ್ತೋ ನೋಡೋಣ. ಅನೇಕ ವಿಚಾರಗಳನ್ನು ಪ್ರಿಯಾಂಕ್ ಖರ್ಗೆ ಬಿಜೆಪಿ, ಜೆಡಿಎಸ್ ತಪ್ಪುಗಳನ್ನು ಹೇಳಿದ್ದಾರೆ. ಇದು ಬಿಜೆಪಿ, ಜೆಡಿಎಸ್ ಗೆ ಸ್ವಾಭಾವಿಕವಾಗಿ ಹಿಡಿಸಿಲ್ಲ ಹೀಗಾಗಿ ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಮಾಡಿ ಮಾದಾಡ್ತಿದ್ದಾರೆ ಎಂದರು.

ಡ್ರಗ್ಸ್ ನಿಯಂತ್ರಣಕ್ಕೆ ಕ್ರಮ

ಕಳೆದೊಂದೂವರೆ ತಿಂಗಳಿಂದ ಕಾರ್ಯಾಚರಣೆ ಚುರುಕು ಮಾಡಿದ್ದೇವೆ. ಹೊಸ ವರ್ಷ, ಕ್ರಿಸ್ಮಸ್ ಅಂತ ಡ್ರಗ್ಸ್ ಪೂರೈಕೆ ಹೆಚ್ಚಾ ಇರುತ್ತೆ. ಹೀಗಾಗಿ ನಾವು ಕಟ್ಟೆಚ್ಚರ ವಹಿಸಿದ್ದೇವೆ. ಕಳೆದೊಂದು ತಿಂಗಳಿಂದ ನಾವು ಡ್ರೈವ್ ಮಾಡಿ ನಿಯಂತ್ರಣ ಮಾಡ್ತಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *