ಸರ್ವೆ ವೇಳೆ BBMP ಸಿಬ್ಬಂದಿ ಗೂಂಡಾಗಿರಿ: ಮನೆ ಮಾಲೀಕನ ಮೇಲೆ ಹಲ್ಲೆಗೆ ಯತ್ನ..!

ಸರ್ವೆ ವೇಳೆ BBMP ಸಿಬ್ಬಂದಿ ಗೂಂಡಾಗಿರಿ: ಮನೆ ಮಾಲೀಕನ ಮೇಲೆ ಹಲ್ಲೆಗೆ ಯತ್ನ..!

ಬೆಂಗಳೂರು: ಕಾಟಾಚಾರಕ್ಕೆ ಬಿಬಿಎಂಪಿ ಜಾತಿ ಸಮೀಕ್ಷೆ ನಡೆಸಿರುವುದು ಬಟಾಬಯಲಾಗಿದೆ. ಮನೆ ಬಳಿ ಬರುವ ಸಿಬ್ಬಂದಿ ಮಾಹಿತಿ ಪಡೆಯದೇ ಸೈಲೆಂಟ್ ಆಗಿ ಸ್ಟಿಕ್ಕರ್ ಅಂಟಿಸಿ ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬಿಬಿಎಂಪಿ ಕೂಡ ಸ್ಪಷ್ಟನೆ ನೀಡಿದೆ. ಈ ಮಧ್ಯೆ ಸರ್ವೆ ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕನಿಗೆ ಬಿಬಿಎಂಪಿ ಸಿಬ್ಬಂದಿ ಹಲ್ಲೆ ಮಾಡಲು ಯತ್ನಿಸಿರುವಂತಹ ಘಟನೆ ಬೆಂಗಳೂರಿನ ಸಾರ್ವಭೌಮನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ನಂದೀಶ್ ಎಂಬುವವರ ಮೇಲೆ ಪಾಲಿಕೆ ಸಿಬ್ಬಂದಿ ಹಲ್ಲೆಗೆ ಮುಂದಾಗಿದ್ದಾರೆ. ಪಾಲಿಕೆ ಸಿಬ್ಬಂದಿಯ ಗೂಂಡಾವರ್ತನೆ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

Leave a Reply

Your email address will not be published. Required fields are marked *