ಬಳ್ಳಾರಿ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿನಾಯಕ ನಗರ ಬಡಾವಣೆಯ ಒಂದೇ ವಾರದಲ್ಲಿ ಒಂದೇ ಪ್ರದೇಶದಲ್ಲಿ ಸಿನಿಮೀಯ ರೀತಿಯಲ್ಲಿ ಮನೆ ಬೀಗ ಮುರಿದು ಬೆಳ್ಳಿ, ಚಿನ್ನ ದೋಚಿ ಪರರಿಯಾಗುತ್ತಿರುವ ಖದೀಮರು ಹಾವಳಿ ಜಾಸ್ತಿಯಾಗಿದೆ. ಭಾನುವಾರ ರಾತ್ರಿ, ನಿವೃತ್ತ ಅಧಿಕಾರಿ ಭೂಜ್ಜಪ್ಪ ನಾಯಕ್ ಎನ್ನುವರ ಮನೆಗೆ ನುಗ್ಗಿದ ಖದೀಮರು ಮನೆ ಬೀಗ ಮುರಿದು ಸುಮಾರು 5 ತೊಲೆ ಚಿನ್ನಾಭರಣಗಳು ಹಾಗೂ ಬೆಳ್ಳಿ ಸಾಮಗ್ರಿಗಳು ಹಾಗೂ 15 ಸಾವಿರ ನಗದು ಹಣ ದೋಚಿ ಪರಾರಿಯಾಗಿದ್ದಾರೆ.
ಈ ಘಟನೆ ನಡೆದು 2 ದಿನದಲ್ಲೇ ಇದೆ ಏರಿಯಾದ ಮತ್ತೊಬ್ಬ ಕೂಲಿ ಕಾರ್ಮಿಕ ಆದಿನಾರಾಯಣ ಗಂಡ ನಿರ್ಮಲ ಎನ್ನುವ ಮನೆಯಲ್ಲೂ ಇದೆ ರೀತಿ ಕಳ್ಳತನ ನಡೆದಿದೆ. ಇವರ ಮನೆಯಲ್ಲಿ 3 ಜೊತೆ ಕಾಲು ಚೈನಾ, ಮಹಿಳೆಯರಿಗೆ ಸೇರಿದ ಚಿನ್ನಾಭರಣಗಳು, ಬೆಳ್ಳಿ ಸಾಮಗ್ರಿಗಳು ಕಳ್ಳತನವಾಗಿದೆ. ನಿರ್ಮಲ ಗಂಡ ಬೇರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಂದ್ರಕ್ಕೆ ತೆರಳಿದ್ದು, ಅವರ ಅಕ್ಕನ ಮನೆಯಲ್ಲಿ ನಿರ್ಮಲಾ ಅವರು ವಾಸವಿದ್ದು, ರಾತ್ರಿ ವೇಳೆ, ಮನೆಗೆ ನುಗ್ಗಿದ ಕಳ್ಳರು, ಚಿನ್ನ ಬೆಳ್ಳಿ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಘಟನೆ ನಡೆದು 2 ದಿನದಲ್ಲೇ ಅಂದರೆ ಶುಕ್ರವಾರ ರಾತ್ರಿ ವೇಳೆ, ಕುಮ್ಮಾರಿ ಶ್ರೀರಾಮುಲು ಎನ್ನುವವರ ಮನೆ ಬೀಗ ಮುರಿದು ಬೀರ್ವಾ ಬೀಗ ಮುರಿದು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಗಳನ್ನೂ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಶ್ರೀರಾಮುಲು ಅವರ ಕುಟುಂಬ, ತೆಲಂಗಾಣ ರಾಜ್ಯದ ಹೈದ್ರಾಬಾದ್ ಗೆ ಕೆಲಸಕ್ಕೆ ತೆರಳಿದ್ದರು, ತಿಂಗಳಿಗೊಮ್ಮೆ ಇಲ್ಲಿಗೆ ಬಂದು ಹೋಗುತ್ತಿದ್ದು, ಇದನ್ನು ಗಮನಿಸಿದ ಕಳ್ಳರು ಕಳ್ಳತನ ಮಾಡಿದ್ದಾರೆ.
ಈ ಕಳ್ಳರ ಟಾರ್ಗೆಟ್ ಯಾರು ಇಲ್ಲದ ಮನೆಗಳನ್ನು ಗುರುತಿಸಿ, ಅದೇ ಮನೆಗಳನ್ನು ಬೀಗ ಮುರಿದು ಕಳ್ಳತನ ಮಾಡುತ್ತಿದ್ದು, ಕಳೆದ 15 ದಿನಗಳ ಅಂತರದಲ್ಲಿ ವಿನಾಯಕ ನಗರದಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ವಿನಾಯಕ ನಗರದ ನಿವಾಸಿಗಳು ಭಯದಲ್ಲೇ ವಾತವರಣದಲ್ಲಿ ಕಾಲ ಕಳೆಯುವಂತಾಗಿದೆ. ಮಹಿಳೆಯರು, ಯುವತಿಯರು, ವಿನಾಯಕ ನಗರದಲ್ಲಿ ತಿರುಗಾಡುವುದೇ ಕಷ್ಟಕರವಾಗಿದೆ. ಕಳ್ಳರು ಯಾವ ಸಂದರ್ಭದಲ್ಲಿ ಏನು ಮಾಡುತ್ತಾರೋ ಎನ್ನುವ ಭಯದಲ್ಲಿದ್ದಾರೆ.
ಈ ಘಟನೆ ಕುರಿತು ಗ್ರಾಮಿಣ ಠಾಣೆ ಸಿಬ್ಬಂದಿಗಳಿಗೆ ಸಾರ್ವಜನಿಕರು ದೂರು ನೀಡಿದರೂ ಘಟನೆ ಸ್ಥಳಕ್ಕೆ ಪೋಲೀಸ್ ಸಿಬ್ಬಂದಿಗಳು ಕಾಟಾಚಾರಕ್ಕೆ ಎನ್ನುವಂತೆ ಬಂದು ಹೋಗುತ್ತಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಎರಡು ದಿನಕ್ಕೊಮ್ಮೆ ಕಳ್ಳರು ವಿನಾಯಕ ನಗರದಲ್ಲಿ ತಮ್ಮ ಕೃತ್ಯವನ್ನು ಮುಂದುವರೆಸಿದ್ದಾರೆ ಎಂದು ನಾಗರಿಕರಿಂದ ದೂರುಗಳು ಕೇಳಿಬಂದಿವೆ.
ಈ ಘಟನೆ ಬಗ್ಗೆ ಗ್ರಾಮೀಣ ಠಾಣೆಯ ಸಿಪಿಐ ಸತೀಶ್ ಅವರಿಗೆ ತಿಳಿಸಿದರೆ, ವ್ಯಾಪ್ತಿಗೆ ಬರುವ ಬಿಟ್ ಪೋಲೀಸ್ ರನ್ನು ನೇಮಕ ಮಾಡಿಲ್ಲ, ಕೂಡಲೇ ನೇಮಕ ಮಾಡಲಾಗುವುದು. ಕಳ್ಳರು ಯಾರು ಎಂಬುದನ್ನು ಕಂಡು ಹಿಡಿದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.