ಬೆಂಗಳೂರು || ಡಾ.ಬಿ.ಆರ್ ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ

ಬೆಂಗಳೂರು || ಡಾ.ಬಿ.ಆರ್ ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ

ಬೆಂಗಳೂರು : ಸರ್ಕಾರಿ ಸೌಮ್ಯತ ಕೆ.ಐ.ಎ.ಡಿ.ಬಿ ಇಲಾಖೆಯ ಮೂಲ ಸೌಲಭ್ಯಗಳ ಭಾಗವಾದ ವಿದ್ಯುತ್ ಇ ಪ್ರಕ್ಯೂರಿಮೆಂಟ್ ಟೆಂಡರ್‌ಗಳ ಕಾಮಗಾರಿಗಳಲ್ಲಿ ಮುಖ್ಯ ಅಭಿಯಂತರರು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಿರ್ಲಕ್ಷ ಹಾಗೂ ಅಧಿಕಾರದ ದುರುಪಯೋಗದಿಂದ ಬಹು ಕೋಟಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳ ಕಮಿಷನ್ ದುರಾಸೆಗೆ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣ ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದಾರೆ ಎಂದು ಅಧ್ಯಕ್ಷರಾದ  ಅರುಣ್ ಕುಮಾರ್ ತಿಳಿಸಿದರು.

ಈ ರಾಜ್ಯದ ಜನಸಾಮಾನ್ಯರಿಗೆ ಹಾಗೂ ಸರ್ಕಾರಕ್ಕೆ ಮಾಡಿರುವ ಬಹುದೊಡ್ಡದ್ರೋಹ ಮತ್ತು ಖಂಡನೀಯ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 2018-2019 ನೇ ಸಾಲಿನಲ್ಲಿ ಭ್ರಷ್ಟ ಗುತ್ತಿಗೆ ಅವರಿಗೆ ಅಕ್ರಮವಾಗಿ ಟೆಂಡರ್ ಹಂಚಿಕೆ ಮಾಡಿದ್ದು ಅಲ್ಲದೇ ಸದರಿ ಟೆಂಡರ್‌ಗಳನ್ನು ದುಪ್ಪಟ್ಟು ಅಂದಾಜು ಪಟ್ಟಿ ತಯಾರಿಸಿ ಅತಿ ಹೆಚ್ಚುವರಿ ದರಗಳಿಗೆ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕೆ.ಟಿ.ಟಿ.ಪಿ ಕಾಯ್ದೆ ಉಲ್ಲಂಘನೆಯಾಗಿರುತ್ತದೆ. ಸದರಿ ಎಲ್ಲಾ ಟೆಂಡರ್ ಕಾಮಗಾರಿಗಳನ್ನು ಹಾಗೂ ಕೆ.ಐ.ಎ.ಡಿ.ಬಿ ವತಿಯಿಂದ ನಿರ್ವಹಿಸಿರುವ 2018 2019 ರಿಂದ 2023 – 2024 ರವರೆಗಿನ ಅನೇಕ ಅಂದಾಜು ಸುಮಾರು 10 ಕೋಟಿಗೂ ಹೆಚ್ಚು ವಿದ್ಯುತ್ ಕಾಮಗಾರಿಗಳಲ್ಲಾದ ವ್ಯವಹಾರದ ಬಗ್ಗೆ ದಾಖಲೆಗಳಿದ್ದು ಗುಣಮಟ್ಟವಿಲ್ಲದ ಕಾಮಗಾರಿಗಳ ಛಾಯಾಚಿತ್ರಗಳಿದ್ದು ಸೃಷ್ಟಿ ಮಾಡಿಕೊಂಡಿರುವ ನಕಲಿ ದಾಖಲೆಗಳಿದ್ದು ಈ ಭ್ರಷ್ಟಾಚಾರ ತನಿಖೆಗೆ ಉನ್ನತ ಅಧಿಕಾರಿಗಳ ಸಹಯೋಗದಲ್ಲಿ ಸಮಗ್ರ ತನಿಖೆ ಮಾಡಲು ವಿಶೇಷ ತನಿಖಾ ಸಮಿತಿಯನ್ನು ರಚಿಸಬೇಕೆಂದು ಮತ್ತು ಎಲ್ಲಾ ಅನರ್ಹ ಗುತ್ತಿಗೆದಾರರ ಇ.ಎಂ.ಡಿ ಮತ್ತು ಎಫ್.ಡಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಹಾಗೂ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಮೇಲ್ಕಂಡ ಗುತ್ತಿಗೆದಾರರಿಗೆ ನೀಡಿರುವ ಟೆಂಡರ್‌ಗಳ ಆದೇಶವನ್ನು ರದ್ದುಪಡಿಸಬೇಕು ಪಾರದರ್ಶಕವಾದ ತನಿಖೆ ಮಾಡಲು ಮೇಲ್ಕಂಡ ಗುತ್ತಿಗೆದಾರರು ಮತ್ತು ಭ್ರಷ್ಟ ಅಧಿಕಾರಿಗಳ ಮೇಲೆ ಎಫ್ ಐ.ಆರ್ ದಾಖಲಾಗಬೇಕೆಂದು ಮತ್ತು ಅಧಿಕಾರಿಗಳನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಮಾಡಲು ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿಯೂ ಒತ್ತಾಯಿಸುತ್ತದೆ. ಗೌರವಾನ್ವಿತ ನಿವೃತ್ತಿ ನ್ಯಾಯಾಧೀಶರನ್ನ ಒಳಗೊಂಡ ಸಮಿತಿಯನ್ನ ರಚಿಸಿ ಪಾರದರ್ಶಕವಾದ ತನಿಖೆ ಮಾಡಲು ತಪ್ಪಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಚಳುವಳಿಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷರು ಅರುಣ್ ಕುಮಾರ್, ಮೋಹನ್ ರೆಡ್ಡಿ, ವಿಕಾಸ್ ರೆಡ್ಡಿ, ನಂದನ್, ಅರವಿಂದ, ಹರೀಶ್ ಉಪಸ್ಥಿತರು.

Leave a Reply

Your email address will not be published. Required fields are marked *