ಬೆಂಗಳೂರು : ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾ*ರ ಘಟನೆ ನೆಡೆದಿದೆ. ಬೆಂಗಳೂರಿನ ಕೆ ಆರ್ ಪುರ ರೈಲು ನಿಲ್ದಾಣ ಸಮೀಪ ನಡೆದಿರುವ ಘಟನೆ. ಬಿಹಾರ ಮೂಲದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾ*ರ ನೆಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಅಕ್ಕ ಭಾವನ ಜೊತೆಗೆ ಕೆಲಸಕ್ಕೆಂದು ಕೇರಳಕ್ಕೆ ಹೋಗಿದ್ದ ಯುವತಿ, ನಂತರ ಕೆಲಸ ಬಿಟ್ಟು ಊರಿಗೆ ವಾಪಸ್ ಹೊರಟಿದ್ದ ಯುವತಿ ಮೇಲೆ ಕೃತ್ಯ ನೆಡೆಸಲಾಗಿದೆ. ಎರ್ನಾಕುಲಂನಿOದ ಬೆಂಗಳೂರಿಗೆ ಬಂದು ಊರಿಗೆ ಹೋಗುತ್ತಿದ್ದ ಬಿಹಾರ ಮೂಲದ ಯುವತಿ ಬೆಂಗಳೂರಿನ ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ ನಗರಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಳು. ಈ ವೇಳೆ ಕೆ ಆರ್ ಪುರ ರೈಲು ನಿಲ್ದಾಣದಲ್ಲಿ ಇಳಿಯಲು ದೊಡ್ಡಮ್ಮನ ಮಗ ಹೇಳಿದ್ದ.
ಏಪ್ರಿಲ್ 2 ರಂದು ರಾತ್ರಿ 1.13 ರಲ್ಲಿ ಕೆ ಆರ್ ಪುರದಲ್ಲಿ ರೈಲು ಇಳಿದಿದ್ದ ಯುವತಿ, ನಂತರ ಊಟ ಮಾಡಲು ಮಹದೇವಪುರ ಕಡೆಗೆ ಹೋಗುತ್ತಿದ್ದರು. ಈ ವೇಳೆ ದಿಢೀರನೆ ಎಂಟ್ರಿಯಾದ ಇಬ್ಬರು ಅಪರಿಚಿತ ಯುವಕರು ಈ ಕೃತ್ಯ ಎಸಗಿದ್ದಾರೆ. ಯುವತಿ ಅಣ್ಣನ ಮೇಲೆ ಹಲ್ಲೆ ನಡೆಸಿ ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡ ಓರ್ವ ಆಸಾಮಿ, ಮತ್ತೋರ್ವ ಯುವಕನಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.
ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾ*ರ ಪ್ರಯತ್ನ ನೆಡೆಸಲಾಗಿದೆ, ಯುವತಿ ಕಿರುಚಾಟ ಕಂಡು ಸ್ಥಳಕ್ಕೆ ಜನರು ಬಂದಿದ್ದು, ಪೋಲಿಸರಿಗೆ ತಕ್ಷಣ ಕರೆ ಮಾಡಿದ್ದಾರೆ. ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮಹದೇವಪುರ ಪೊಲೀಸರು ಆಶಿಫ್ ಹಾಗೂ ಮತ್ತೋರ್ವನ ಬಂಧಿಸಿದ್ದಾರೆ.