ಬಿಜೆಪಿಯವರಗೆ ಶಾಂತಿ ಸುವ್ಯವಸ್ಥೆ ಬೇಡವಾಗಿದೆ- ಅಬ್ಬಯ್ಯಾ ಪ್ರಸಾದ್

ಬಿಜೆಪಿಯವರಗೆ ಶಾಂತಿ ಸುವ್ಯವಸ್ಥೆ ಬೇಡವಾಗಿದೆ- ಅಬ್ಬಯ್ಯಾ ಪ್ರಸಾದ್

ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಭಾರತೀಯ ಜನತಾ ಪಕ್ಷದವರೆಗೆ ಬೇಕಾಗಿದ್ದ ಕೇವಲ ಶಾಂತಿ ಕದಡುವುದೇ ಆಗಿದೆ ಎಂದು ಶಾಸಕ ಹಾಗೂ ಕರ್ನಾಟಕ ಒಳಚರಂಡಿ ಮಂಡಳಿ ರಾಜ್ಯಾಧ್ಯಕ್ಷ ಅಬ್ಬಯ್ಯಾ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದ್ದು ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಧಕ್ಕೆ ಬಂದಿಲ್ಲ ಬಿಜೆಪಿ ಅವರಿಗೆ ಯಾವುದೇ ಅಭಿವೃದ್ಧಿ ಕೆಲಸ ಬೇಡವಾಗಿದೆ ಯಾವುದೇ ಶಾಂತಿ ಸುವ್ಯವಸ್ಥೆ ಬೇಡವಾಗಿದೆ ಎಂದ ಅವರು ಸಣ್ಣ ಪುಟ್ಟ ಗಲಿಭೆಯನ್ನ ದೊಡ್ಡದಾಗಿ ಮಾಡತಾ ಇದ್ದಾರೆ ಎಂದರು. ಇನ್ನು ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಮುಣಿರತ್ನ ಎಚ್ ಐ ವಿ ಸೋಂಕಿತರಿಂದ ಹನಿಟ್ರಾಪ್ ಮಾಡುವ ವಿಚಾರವಾಗಿ ಮಾತನಾಡಿದ ಅವರು ಮುಣಿರತ್ನ ತಮಗೆ ಕೆಟ್ಟ ಹೆಸರು ತರಿಸುವ ನಿಟ್ಟಿನಲ್ಲಿ ಈ ರೀತಿಯ ಮಾಡತಾ ಇದ್ದಾರೆಇದು ಅವರಿಗೆ ಶೋಭೆ ತರುವ ವಿಚಾರ ಅಲ್ಲ ಮುಣಿರತ್ನ ಮಾಡುವುದು ಅಕ್ಷರಶಃ ತಪ್ಪು  ಎಂದರು. ಇನ್ನು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ಏಕವಚನದಲ್ಲಿ ಸಂಬೋಧನೆ ವಿಚಾರ ತಾವು ಯಾವುದೇ ರೀತಿಯ ಕ್ಷೇಮೆ ಕೇಳಲ್ಲ ಎಂದ ಅವರು ಪ್ರಮೋದ್ ಮುತಾಲಿಕ್ ನನಗೆ ಕ್ಷಮೆ ಕೇಳಬೇಕುಮಂಟೂರು ರಸ್ತೆಯಲ್ಲಿನ ಸ್ಮಶಾನ ಭೂಮಿ ನಿರ್ಮಾಣ ಯಾವುದೇ ಕಾರಣಕ್ಕೋ ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದರು

Leave a Reply

Your email address will not be published. Required fields are marked *