ದಾವಣಗೆರೆ || ದಾವಣಗೆರೆಯಲ್ಲಿ 1.13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ದಾವಣಗೆರೆ || ದಾವಣಗೆರೆಯಲ್ಲಿ 1.13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ದಾವಣಗೆರೆ : ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇದೀಗ ಖತರ್ನಾಕ್ ಬುರ್ಖಾ ಗ್ಯಾಂಗೊಂದು ಜ್ಯೂವೆಲರಿ ಅಂಗಡಿ ಸಿಬ್ಬಂದಿಯನ್ನೇ ಯಾಮಾರಿಸಿ ಚಿನ್ನಾಭರಣ ಎಗರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯಲ್ಲಿ ರವಿ ಜ್ಯುವೆಲರಿ ಅಂಗಡಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.

ಬುರ್ಖಾ ಧರಿಸಿದ ಐವರು ಮಹಿಳೆಯರು ಹಾಗೂ ಟೋಪಿ ಧರಿಸಿದ ಒಬ್ಬ ಪುರುಷ ಈ ಕೃತ್ಯವನ್ನು ನಡೆಸಿದ್ದಾರೆ. ಜ್ಯುವೆಲರಿ ಅಂಗಡಿ ಸಿಬ್ಬಂದಿ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿದ್ದಾರೆ. ಈ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.ದಾವಣಗೆರೆ ಮಂಡಿಪೇಟೆಯ ರವಿ ಜ್ಯುವೆಲರಿ ಶಾಪ್ನಲ್ಲಿ ಈ ಘಟನೆ ನಡೆದಿದೆ.

ಚಿನ್ನಾಭರಣ ಖರೀದಿಯ ನೆಪದಲ್ಲಿ ಶಾಪ್ಗೆ ಎಂಟ್ರಿ ಕೊಟ್ಟ ಖತರ್ನಾಕ್ ಗ್ಯಾಂಗ್, ಅಲ್ಲಿನ ಸಿಬ್ಬಂದಿಯನ್ನು ಗಮನ ಬೇರೆಡೆ ಸೆಳೆದು 1.13 ಕೋಟಿ ರೂಪಾಯಿ ಮೌಲ್ಯದ 1 ಕೆ.ಜಿ 400 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಚಿನ್ನಾಭರಣ ಅಂಗಡಿಗೆ ಬುರ್ಖಾ ಧರಿಸಿದ ಐವರು ಮಹಿಳೆಯರು ಹಾಗೂ ಟೋಪಿ ಧರಿಸಿದ ವ್ಯಕ್ತಿಯೊಬ್ಬ ಮಾರ್ಚ್ 26ರಂದು ಮಧ್ಯಾಹ್ನ 1ಕ್ಕೆ ಬಂದಿದ್ದಾರೆ.

ಅಂಗಡಿಯಲ್ಲಿದ್ದ 50 ಸಿಬ್ಬಂದಿಯಲ್ಲಿ ಮೂವರು ಊಟಕ್ಕೆ ತೆರಳಿದ್ದರು. ಬೆಳ್ಳಿ ಲೋಟ, ಆಭರಣ ಖರೀದಿಗೆ ಬಂದಿರುವುದಾಗಿ ಹೇಳಿಕೊಂಡು ಕೆಲ ಹೊತ್ತು ಕಾಲಾಹರಣ ಮಾಡಿ, ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ. ತೋರಿಸಿದ ಆಭರಣವನ್ನು ಒಪ್ಪದೆ ಬೇರೆ ಅಭರಣ ತರುವಂತೆ ಹೇಳಿದ್ದಾರೆ. ಆಗ ಮಹಿಳೆಯೊಬ್ಬರು ಚಿನ್ನಾಭರಣದ ಪೆಟ್ಟಿಗೆಯೊಂದನ್ನು ಎತ್ತಿಕೊಂಡು ಬುರ್ಖಾದಲ್ಲಿ ಇಟ್ಟುಕೊಂಡು ಹೊರನಡೆದ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ವಾರಕ್ಕೊಮ್ಮೆ ಚಿನ್ನಾಭರಣಗಳ ಲೆಕ್ಕ ಪಡೆಯುತ್ತೇವೆ. ಈ ವೇಳೆ ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣ ಕಡಿಮೆ ಬಂದಿದೆ. ಆಗ ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆ ಕಳವು ಮಾಡಿದ್ದು ಪತ್ತೆಯಾಗಿದೆ ಎಂದು ದೂರಿನಲ್ಲಿ ಅಂಗಡಿಯ ಮಾಲಕಿ ರೇಖಾ ರವಿಕುಮಾರ್ ಉಲ್ಲೇಖಿಸಿದ್ದಾರೆ. ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *