“ನಮಗೆ DKS ಸಿಗ್ತಿಲ್ಲ” ಎಂಬ ಆರೋಪಕ್ಕೆ ತಿರುಗೇಟು ಕೊಟ್ಟ DCM DK Shivakumar

“ನಮಗೆ DKS ಸಿಗ್ತಿಲ್ಲ" ಎಂಬ ಆರೋಪಕ್ಕೆ ತಿರುಗೇಟು ಕೊಟ್ಟ DCM DK Shivakumar

ಬೆಂಗಳೂರು : ರಾಜು ಕಾಗೆ ಸೇರಿದಂತೆ ಕೆಲವು ಶಾಸಕರು ನಮಗೆ ಡಿಕೆಶಿ ಸಿಗ್ತಿಲ್ಲ ಎಂಬ ಹೇಳಿಕೆ ಕೊಟ್ಟಿದ್ದರು. ಈ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಕೇಳಿದದ್ದೆಲ್ಲವನ್ನೂ ನಾವು ಮಾಡಿದ್ದೇವೆ. ಯಾವ ಅಸಮಾಧಾನವಿದೆ ಎಂದು ನೋಡೋಣ. ದಿನ ಬೆಳಿಗ್ಗೆ ನನ್ನ ಮನೆಗೆ ಬನ್ನಿ ಮಾತನಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶಾಸಕರು CLP (Congress Legislature Party) ಸಭೆ ಕರೆಯುವಂತೆ ಒತ್ತಾಯಿಸಿರುವ ವಿಚಾರಕ್ಕೂ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. ಅಧಿವೇಶನ ಬಂದ ಮೇಲೆ CLP ಸಭೆ ಕರೆಯುತ್ತೇವೆ. ಯಾವುದೇ ಅಸಮಾಧಾನವಿದ್ದರೂ ಅದರ ಬಗ್ಗೆ ಚರ್ಚೆಗೆ ಸದಾ ಸಿದ್ಧ ಎಂದಿದ್ದಾರೆ.

ಆಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದೇ ವಿದ್ಯುತ್, ನೀರು ಸಂಪರ್ಕ ನೀಡುವ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರ ಬಗ್ಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ಪ್ರಕಾರ ಆಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದೇ ವಿದ್ಯುತ್ ಹಾಗೂ ನೀರು ಸಂಪರ್ಕ ನೀಡಬಾರದು ಎಂದಿದೆ. ಇದರ ಪರಿಣಾಮವಾಗಿ 2.5 ಲಕ್ಷಕ್ಕೂ ಹೆಚ್ಚು ಜನರು ತೊಂದರೆಯಲ್ಲಿದ್ದಾರೆ ಎಂದರು.

ಕಾನೂನು ತಜ್ಞರಿಂದ ಅಭಿಪ್ರಾಯ ಕೇಳಿದ್ದೇನೆ ಜನರಿಗೆ ಸಹಾಯ ಮಾಡುವ ದಾರಿಗಳನ್ನು ಹುಡುಕುತ್ತಿದ್ದೇನೆ. ಪ್ಲ್ಯಾನ್ ಸ್ಯಾಂಕ್ಷನ್ ಇಲ್ಲದೇ ಕಟ್ಟಡ ಹಾಕಬಾರದು. ಇದು ಇಡೀ ದೇಶಕ್ಕೆ ಅನುಭವವಾಗುವ ತೀರ್ಪು. ನಾವು ಸಭೆ ನಡೆಸಿ ಮುಂದೇನು ಮಾಡಬಹುದು ಎಂಬ ಸಲಹೆ ಪಡೆಯುತ್ತೇವೆ. ಕಾನೂನು ಬಾಹಿರವಾಗಿ ಕಟ್ಟಡ ಕಟ್ಟಬೇಡಿ. ಸುಪ್ರೀಂ ಕೋರ್ಟ್ ತೀರ್ಪು ಇದನ್ನು ನಿಷೇಧಿಸುತ್ತದೆ ಎಂದರು.

ಇಡೀ ದೇಶದಲ್ಲಿ ಅಕ್ರಮ ಸಕ್ರಮ ಮಾಡೋದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೀಗಾಗಿ ಯಾರೂ ದುಸ್ಸಾಹಸಕ್ಕೆ ಹೋಗಬಾರದು. ಎಲ್ಲರೂ ಸಹಕಾರ ನೀಡಬೇಕು. 110 ಹಳ್ಳಿಗಳಿಗೂ BWSSB ಸೇವೆಯಲ್ಲಿ ತೊಂದರೆ ಆಗುತ್ತಿದೆ. ಅಧಿಕಾರಿಗಳು ಯಾವಾಗಲೂ ನನ್ನ ವಿರುದ್ಧ ಎಣ್ಣೆ ಹಾಕಿಕೊಂಡಿರುವಂತೆ ವರ್ತಿಸುತ್ತಿದ್ದಾರೆ ಎಂಬ ಭಾವನೆ ಇದೆ ಎಂದರು.

Leave a Reply

Your email address will not be published. Required fields are marked *