ಬೇಲ್ ಸಿಗುತ್ತೆ ಹೆದರಬೇಡಿ..! ಪತ್ನಿ ವಿಜಯಲಕ್ಷ್ಮಿ

ವಿಜಯಲಕ್ಷ್ಮೀ ಪೋಸ್ಟ್ ದರ್ಶನ್ ಬಿಡುಗಡೆಯ ಸೂಚನೆ ನೀಡ್ತಿದೆ, ಫುಲ್ ಖುಷ್ ಆದ ಡಿ ಬಾಸ್ ಫ್ಯಾನ್ಸ್.!

ಬಳ್ಳಾರಿ : ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಇಂದು ಭೇಟಿ ಮಾಡಿ ಧೈರ್ಯ ಹೇಳಿದರು.

ಡ್ರೈ ಪ್ರೂಟ್ಸ್ ಜೊತೆಗೆ ದರ್ಶನ್ ಭೇಟಿ ಮಾಡಲು ಬಂದ ವಿಜಯಲಕ್ಷ್ಮಿ ಒಂದಷ್ಟು ಹೊತ್ತು ಮಾತುಕತೆ ನಡೆಸಿ ಪತಿಗೆ ಧೈರ್ಯ ತುಂಬಿದರು.

ನೀವೇನೂ ಯೋಚನೆ ಮಾಡಬೇಡಿ, ದಸರಾ ಮುಗಿಯುವುದರೊಳಗೆ ಬೇಲ್ ಸಿಗುತ್ತದೆ.

ಆ ಚಾಮುಂಡೇಶ್ವರಿ ಆಶೀರ್ವಾದ ನಿಮಗಿದೆ. ಎಲ್ಲವೂ ಒಳ್ಳೆಯದೇ ಆಗುತ್ತದೆ. ಬೇಲ್ ಸಿಕ್ಕೇ ಸಿಗುತ್ತದೆ ಎಂದು ದರ್ಶನ್ ಗೆ ಆತ್ಮವಿಶ್ವಾಸ ತುಂಬಿದ್ದಾರೆ.

Leave a Reply

Your email address will not be published. Required fields are marked *