ಎರೆಹುಳು ಗೊಬ್ಬರದಿಂದ ಲಕ್ಷಾಂತರ ರೂಪಾಯಿ ಗಳಿಕೆ!

ಎರೆಹುಳು ಗೊಬ್ಬರದಿಂದ ಲಕ್ಷಾಂತರ ರೂಪಾಯಿ ಗಳಿಕೆ!

ಎರೆಹುಳು ಗೊಬ್ಬರ, ಕೀಟನಾಶಕ ಹೀಗೆ ಅನೇಕ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಸಾವಯವ ಉತ್ಪನ್ನಗಳನ್ನು ಪರಿಚಯಿಸಿರುವ ಕೆಲವೊಂದು ರೈತರು ಗೊಬ್ಬರ, ಕೀಟನಾಶಕ ತಯಾರಿಕೆ ಬಗ್ಗೆ ಇಂದಿಲ್ಲಿ ಸಲಹೆ ನೀಡಿದ್ದಾರೆ. ವರ್ಮಿಕಾಂಪೋಸ್ಟ್ ವ್ಯವಹಾರದಿಂದ ಇವರು ಲಕ್ಷಗಟ್ಟಲೆ ಹಣ ಮಾಡುತ್ತಿದ್ದು, ವ್ಯವಹಾರ ಆರಂಭಿಸುವವರು ಈ ಸಲಹೆಗಳನ್ನು ಪಾಲಿಸಬಹುದು.

ಎರೆಹುಳು ಗೊಬ್ಬರ, ಕೀಟನಾಶಕ ಹೀಗೆ ಅನೇಕ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಸಾವಯವ ಉತ್ಪನ್ನಗಳನ್ನು ಪರಿಚಯಿಸಿರುವ ಕೆಲವೊಂದು ರೈತರು ಗೊಬ್ಬರ, ಕೀಟನಾಶಕ ತಯಾರಿಕೆ ಬಗ್ಗೆ ಇಂದಿಲ್ಲಿ ಸಲಹೆ ನೀಡಿದ್ದಾರೆ.

ಅಸ್ಸಾಂ ಮೂಲದ ಕನಿಕಾ ತಾಲ್ಲೂಕುದಾರ್ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ. ಅಡುಗೆಮನೆಯ ತ್ಯಾಜ್ಯಗಳು, ಭತ್ತದ ಅವಶೇಷಗಳು ಇದನ್ನು ಬಳಸಿಕೊಂಡು ಕಾಂಪೋಸ್ಟ್ ಹಾಸಿಗೆಗಳನ್ನು ತಯಾರಿಸಿದ್ದಾರೆ. ಇದರಿಂದ ಬೆಳೆಯಲ್ಲಿ ಕೂಡ ಉತ್ತಮ ಫಸಲನ್ನು ಪಡೆದುಕೊಂಡರು. ಇನ್ನು ಸೇಬು, ವಾಲ್ನಟ್, ಭತ್ತ ಮತ್ತು ಪೀಚ್ ತೋಟಗಳ ಉತ್ಪಾದನೆ ದುಪ್ಪಟ್ಟಾಯಿತು. ಇಂದು ವರ್ಮಿಕಾಂಪೋಸ್ಟ್ ೧೦೦೦ ಹಾಸಿಗೆಗಳು ದಿನಕ್ಕೆ ೫೦,೦೦೦ ರೂಪಾಯಿಗಳನ್ನು ಗಳಿಸಲು ಅನುವು ಮಾಡಿಕೊಡುತ್ತಿದೆ.

ಪರಿಸರ ವ್ಯವಸ್ಥೆಯನ್ನು ಪೋಷಿಸುವುದು: ಕಚ್ಚಾ ವಸ್ತುಗಳಿಂದ ಸಿದ್ಧ ಗೊಬ್ಬರದವರೆಗೆ ವರ್ಮಿಕಾಂಪೋಸ್ಟ್ ಗೊಬ್ಬರದಲ್ಲಿ ಆರೋಗ್ಯಕರ ಹುಳುಗಳನ್ನು ಆರಿಸುವುದು ಅತಿ ಮುಖ್ಯ ಎಂದು ತಮಿಳುನಾಡಿನ ಅಜಕು ಧೀರನ್ ಸಲಹೆ ನೀಡುತ್ತಾರೆ. ಗೊಬ್ಬರಕ್ಕೆ ಕೋಳಿ ಹಾಗೂ ನಾಯಿಗಳು ದಾಳಿ ಮಾಡದಂತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇನ್ನು ಅನುಭವಿ ರೈತರು ಹಾಗೂ ತಜ್ಞರ ಸಲಹೆ ಪಡೆಯುವುದು ಮುಖ್ಯ ಎಂದಿದ್ದಾರೆ.

ಸೂಕ್ತವಾದ ತೇವಾಂಶ ಮತ್ತು ತಾಪಮಾನದ ಮಟ್ಟವನ್ನು ಕಾಪಾಡಿಕೊಳ್ಳುವುದು ಮಾರುಕಟ್ಟೆಯಲ್ಲಿರುವ ಇತರ ಎರೆಹುಳು ಗೊಬ್ಬರಗಳಿಂದ ಗುಣಮಟ್ಟದ ಎರೆಹುಳು ಗೊಬ್ಬರವನ್ನು ಪ್ರತ್ಯೇಕಿಸುವ ಬಗ್ಗೆ ಕನಿಕಾ ಸಲಹೆ ನೀಡುತ್ತಾರೆ. “ಎಲ್ಲಾ ಕಚ್ಚಾವಸ್ತುಗಳನ್ನು ಸೇರಿಸಿ ಗೊಬ್ಬರಕ್ಕೆ ೨೦ ದಿನಗಳವರೆಗೆ ನೀರು ಹಾಕಬೇಕು. ಇದರಿಂದ ಕಚ್ಚಾವಸ್ತು ನೆನೆದು ಎರೆಹುಳುಗಳಿಗೆ ಆಹಾರ ಅಗೆಯಲು ಹಾಗೂ ವಿಸರ್ಜಿಸಲು ಅನುಕೂಲವಾಗುತ್ತದೆ” ಎನುತ್ತಾರೆ. ನಿಯಮಿತವಾಗಿ ನೀರು ಹಾಕುವುದರಿಂದ, ಕಚ್ಚಾವಸ್ತುಗಳು ಅಮೂಲ್ಯವಾದ ವರ್ಮಿಕಾಂಪೋಸ್ಟ್ ಆಗಿ ರೂಪಾಂತರಗೊಳ್ಳಲು ಸುಮಾರು ೩೫ ದಿನಗಳು ಬೇಕಾಗುತ್ತದೆ. “೨೫?೨೭ ಡಿಗ್ರಿ ತಾಪಮಾನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಹಾಗೂ ಹುಳುಗಳನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ಅವುಗಳನ್ನು ಮುಚ್ಚುವುದು ಅಥವಾ ನೆರಳಿನಲ್ಲಿ ಇಡುವುದು ಯಾವಾಗಲೂ ಉತ್ತಮ” ಎಂದು ಅಜಕು ಸಲಹೆ ನೀಡುತ್ತಾರೆ.

ಎರೆಹುಳುಗಳಿಂದ ಬೇರೆ ಬೇರೆ ಉತ್ಪನ್ನಗಳು

ಗೊಬ್ಬರವಲ್ಲದೆ ಎರೆಹುಳುಗಳಿಂದ ತಯಾರಿಸಿದ ಜೈವಿಕ ಕೀಟನಾಶಕ ವರ್ಮಿವಾಶ್ ಅನ್ನು ಕನಿಕಾ ಸೇರಿದಂತೆ ಇನ್ನಿತರ ರೈತರು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಕೀಟನಾಶಕವನ್ನು ಹೆಚ್ಚಿನ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ಬಳಸಿ ತಯಾರಿಸಲಾಗಿದೆ. “ವರ್ಮಿವಾಶ್ ಅನ್ನು ಜೈವಿಕ ಕೀಟನಾಶಕವಾಗಿ ಬಳಸಿದರೆ, ಎರೆಹುಳುಗಳು ಮತ್ತು ಟ್ರೆöÊಕೊಗ್ರಾಮಾದಂತಹ ಸೂಕ್ಷ÷್ಮಜೀವಿಗಳ ಜಂಟಿ ಕ್ರಿಯೆಯಿಂದ ತಯಾರಿಸಲಾದ ಪುಷ್ಟೀಕರಿಸಿದ ವರ್ಮಿಕಾಂಪೋಸ್ಟ್ ಅನ್ನು ರೋಗಗಳ ಬೆಳವಣಿಗೆಯನ್ನು ನಿಲ್ಲಿಸಲು ಮತ್ತು ಸಸ್ಯಗಳ ಆರೋಗ್ಯವನ್ನು ಸುಧಾರಿಸಲು ಬಳಸಲಾಗುತ್ತದೆ.

ಉತ್ಪನ್ನ ಬೇಡಿಕೆ ಪಡೆಯಲು ಏನು ಮಾಡಬೇಕು?

ವರ್ಮಿಕಾಂಪೋಸ್ಟ್ ವ್ಯವಹಾರದಲ್ಲಿ ಯಶಸ್ಸು ದೊರೆಯಬೇಕೆಂದರೆ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಬಾರದು ಎಂದು ಕನಿಕಾ ಹೇಳುತ್ತಾರೆ. “ಮಾರುಕಟ್ಟೆಯಲ್ಲಿನ ಆದಾಯವು ನೀವು ಉತ್ಪಾದಿಸುವ ವರ್ಮಿಕಾಂಪೋಸ್ಟ್ನ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಗ್ರಾಹಕರು ಮಣ್ಣಿನ ಫಲವತ್ತತೆ ಮತ್ತು ಸಸ್ಯ ಆರೋಗ್ಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವ ಉತ್ಪನ್ನವನ್ನು ನಿರೀಕ್ಷಿಸುತ್ತಾರೆ, ಉತ್ಪಾದನಾ ವಿಧಾನಗಳಲ್ಲಿ ಸ್ಥಿರವಾದ ಶ್ರದ್ಧೆಯ ಅಗತ್ಯವಿರುತ್ತದೆ.

Leave a Reply

Your email address will not be published. Required fields are marked *