ಶಿವಮೊಗ್ಗ,: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಜೈಲಿನಲ್ಲಿದ್ದರೂ ಅವರ ಫ್ಯಾನ್ ಫೋಲೋವಿಂಗ್ಗೆ ಕಡಿವಾಣವೇ ಇಲ್ಲ. ಶಿವಮೊಗ್ಗದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ‘ಬಾಸ್ ಬಾಸ್ ಡಿ ಬಾಸ್’ ಜೈಕಾರ ಮುಗಿಲು ಮುಟ್ಟಿದ್ದು, ಆಕರ್ಷಣೆಯ ಕೇಂದ್ರಬಿಂದುವಾಯಿತು.
ಫೋಟೋ ಹಿಡಿದು ಜೈಕಾರ ಕೂಗಿದ ಫ್ಯಾನ್ಸ್
ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭ, ದರ್ಶನ್ ಅವರ ಭವ್ಯ ಫೋಟೋ ಹಿಡಿದಿದ್ದ ಹಲವರು, “ಬಾಸ್ ಬಾಸ್ ಡಿ ಬಾಸ್” ಎಂದು ಘೋಷಣೆ ಕೂಗಿ, ಮೆರವಣಿಗೆಯಲ್ಲಿ ಚುರುಕುಪಾಲ್ಗೊಂಡರು. ಮೆರವಣಿಗೆಯಾದರೂ, ಘಟನೆಯ ದೃಷ್ಠಿಯಿಂದ ಇದು ಫ್ಯಾನ್ಗಳ ಭಾವನಾತ್ಮಕ ಅಭಿವ್ಯಕ್ತಿ ಎಂದು ಹೇಳಬಹುದು.
ಜೈಲಿನಲ್ಲಿರುವುದರಿಂದಲೂ ಅಭಿಮಾನ ಕಡಿಮೆಯಾಗಿಲ್ಲ
ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ಪ್ರಕರಣ ಗಂಭೀರವಾದರೂ, ಅವರ ಪರಪಕ್ಷದ ಅಭಿಮಾನಿಗಳು ಎಲ್ಲೆಡೆ ತಮ್ಮ ಬೆಂಬಲ ತೋರಿಸುತ್ತಿದ್ದಾರೆ. ಈ ಘಟನೆಯು ಮತ್ತೆ ಅದಕ್ಕೆ ನಿದರ್ಶನವಾಗಿದೆ.
ಸಮಾಜಿಕ ಪ್ರತಿಕ್ರಿಯೆ ಮಿಶ್ರ:
ಘಟನೆ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
- ಕೆಲವರು: “ಅವರ ಮೇಲಿನ ಕ್ರಿಮಿನಲ್ ಆರೋಪ ಮರೆತು ಪ್ಯಾಂಟ್ಫಾಲೋವಿಂಗ್ ಏನು ಸರಿ ಅಲ್ಲ” ಎಂದು ಅಭಿಪ್ರಾಯಪಟ್ಟರೆ,
- ಮತ್ತಷ್ಟು ಮಂದಿ: “ಅಪರಾಧ ಸಾಬೀತಾಗದ ತನಕ ಎಲ್ಲರೂ ನಿರ್ದೋಷಿ” ಎಂಬ ಅಭಿಪ್ರಾಯದಲ್ಲಿದ್ದಾರೆ.
For More Updates Join our WhatsApp Group :




