ಬೆಂಗಳೂರು: ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿರುವ ಜಿಯೋಮೆಟ್ರಿ ಬ್ರೇವರೀ ಪಬ್ಗೆ ನುಗ್ಗಿದ ಕಳ್ಳ ಅಂದಾಜು 50ರಿಂದ 60 ಸಾವಿರ ರೂಪಾಯಿ ನಗದು ದೋಚಿದ್ದಾನೆ ಎಂದು ಪಬ್ನ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಳಗ್ಗಿನ ಜಾವ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದ ಪಬ್ನ ಸೆಕ್ಯೂರಿಟಿ ಗಾರ್ಡ್, 4 ಗಂಟೆಯ ಸುಮಾರಿಗೆ ಪಬ್ನ ಹಿಂಬದಿ ಬಾಗಿಲು ಮುರಿದು ಕಳ್ಳನೋರ್ವ ಪಿಸ್ತೂಲ್ ಹಿಡಿದು 3ನೇ ಮಹಡಿಯಲ್ಲಿರುವ ಪಬ್ನ ಕಚೇರಿ ಪ್ರವೇಶಿಸಿದ್ದಾನೆ. ಬಳಿಕ ಪಬ್ನ ಬಾಗಿಲುಗಳನ್ನು ಮುಚ್ಚಿ ಹೊರಬಂದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಆಧರಿಸಿ ತಕ್ಷಣ ಸ್ಥಳಕ್ಕೆ ತೆರಳಿದ್ದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಮತ್ತು ಕ್ವಿಕ್ ರೆಸ್ಪಾನ್ಸ್ ಟೀಂ (ಕ್ಯೂಆರ್ಟಿ) ಪಬ್ ಸುತ್ತುವರೆದಿದ್ದಾರೆ. ಸಂಪೂರ್ಣ ಪಬ್ ತಪಾಸಣೆಗೊಳಪಡಿಸಿದಾಗ ಸ್ಥಳದಲ್ಲಿ ಯಾರೂ ಸಹ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಹೇಳಿಕೆ: ಪಬ್ನ ಹಿಂಬಾಗಿಲಿನಿಂದ ಬಂದ ವ್ಯಕ್ತಿಯೋರ್ವ ಶಸ್ತ್ರ ತೋರಿಸಿ ಹೆದರಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಡ್ರಾಯರ್ನಲ್ಲಿದ್ದ 50 ಸಾವಿರ ರೂ ಕಳುವಾಗಿದೆ ಎಂದು ಮ್ಯಾನೇಜರ್ ಹೇಳಿಕೆ ನೀಡಿದ್ದಾರೆ. ಸಿಸಿ ಕ್ಯಾಮರಾಗಳನ್ನು ಬ್ಲಾಕ್ ಮಾಡಲಾಗಿದೆ. ದೂರು ಪಡೆದು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಮಾಹಿತಿ ನೀಡಿದರು.