ಬೆಂಗಳೂರು: ವಿಧಾನ ಸೌಧ ಆವರಣದಲ್ಲಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಸ ವಿಲೇವಾರಿಗೆ ಮರು ಟೆಂಡರ್ ಆಹ್ವಾನಿಸಿರುವುದರ ವಿರುದ್ಧ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದಕ್ಕೆ ಪ್ರತಿಕ್ರಿಯಿಸುತ್ತಾ, ನಗರದಲ್ಲಿ ಕಸದ ವಿಲೇವಾರಿ ಆಗದಿದ್ದರೆ ಬಹಳ ಕಷ್ಟವಾಗುತ್ತದೆ,

ಉಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಕಾಮೆಂಟ್ ಮಾಡಲ್ಲ, ಆದರೆ ಕಸ ವಿಲೇವಾರಿ ಮಾಡುವ ಒಂದು ಗುಂಪು ಕಾರ್ಟೆಲ್ ಮಾಡಿಕೊಂಡು ಬಿಬಿಎಂಪಿಯನ್ನು ಓವರ್ ಮಾಡಬಹುದು ಅಂದುಕೊಂಡಿದೆ, ವಸ್ತುಸ್ಥಿತಿಯನ್ನು ಕೋರ್ಟ್ಗೆ ಅರ್ಥ ಮಾಡಿಸುತ್ತೇವೆ ಎಂದರು.