ಬೆಂಗಳೂರು: ರಾಜಭವನದಲ್ಲಿ ಮಾನ್ಯ ರಾಜ್ಯಪಾಲರಿಗೆ ಬಿಬಿಎಂಪಿಯಲ್ಲಿ ಕೆಟಿಪಿಪಿ ಕಾಯಿದೆ ಉಲ್ಲಂಘನೆ ಮಾಡಿ, ಟೆಂಡರ್ ಮಾಡದೇ ಕೊಟ್ಯಂತರ ರೂಪಾಯಿ ಬಿಲ್ಲು ಪಾವತಿ ಮಾಡಿರುವ ಕಾಮಗಾರಿಗಳ ಕುರಿತು ತನಿಖೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಚಳುವಳಿ ಕೆ.ಅಯ್ಯಪ್ಪರವರು , ಜಿಲ್ಲಾಧ್ಯಕ್ಷರಾದ ಎನ್.ಪ್ರಸಾದ್ ದೂರು ನೀಡಿದರು.

ರಾಜ್ಯಾಧ್ಯಕ್ಷರಾದ ಚಳುವಳಿ ಕೆ.ಅಯ್ಯಪ್ಪರವರು ಮಾತನಾಡಿ ಸ್ಥಳೀಯ ಜನಪ್ರತಿನಿಧಿಗಳು ಇಲ್ಲ, ಅಧಿಕಾರಿಗಳ ಅಂಧ ದರ್ಭಾರ್ ನಿಂದ ಕಾನೂನಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಬಿಲ್ಲುಗಳನ್ನು ಪಾವತಿ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆರ್ಥಿಕ ನಷ್ಟವುಂಟು ಮಾಡಿರುತ್ತಾರೆ ದಿನಾಂಕ 01.05.2025 ರಂದು ಬೆಂಗಳೂರು ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭನಡೆಸಲು ಮೆ: ಫೆಬ್ರಿಕಾನ ಸಂಸ್ಥೆಯವರ ಖಾತೆಗೆ ರೂ.1,12,49,837-00 (ಒಂದು ಕೋಟಿ ಹನ್ನೆರಡು ಲಕ್ಷದ ನಲವತ್ತೊಂಬತ್ತು ಸಾವಿರದ ಎಂಟು ನೂರು ಮೂವತ್ತೇಳು ರೂ ಮಾತ್ರ) ಗಳನ್ನು ನಿಯಮವನ್ನು ಉಲ್ಲಂಘನೆ ಮಾಡಿ ಪಾವತಿ ಮಾಡಲು ಶಿಫಾರಸ್ಸು ಮಾಡಿರುತ್ತಾರೆ. ಮುಂದುವರಿದು ಮೇಲ್ಕಂಡ ಮೊತ್ತವನ್ನು ಪಾವತಿ ಮಾಡಲು ರೂ.2,87,50,419-00 ಗಳನ್ನು ಪಾವತಿ ಮಾಡಲು ವಿಷಯವು ಸಂಖ್ಯೆ 81/2025-26 ವಲಯ ಆಯುಕ್ತರು (ಪಶ್ಚಿಮ) ರವರು ಮಂಡಿಸಿರುವ ಸಂಖ್ಯೆ ವ.ಆ(ಪ)/ಪಿಆರ್/987/2025-26 ದಿನಾಂಕ 29.04.2025 ರಂತೆ ಟಿಪ್ಪಣಿ ಒಪ್ಪಿಗೆ ಪತ್ರದಂತೆ ಆಡಳಿತಗಾರರ ಅನುಮೋದನೆ ಪಡೆದು ವಲಯ ಆಯುಕ್ತರು ಪಶ್ಚಿಮ, ಜಂಟಿ ಆಯುಕ್ತರು (ಪಶ್ಚಿಮ) ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು (ಕೇಂದ್ರ) ರವರು ಕೆಟಿಪಿಪಿ ಕಾಯಿದೆ ಗಳನ್ನು ಪರಿಶೀಲಿಸದೆ ನಿಯಮಗಳನ್ನು ಪಾಲನೆ ಮಾಡದೆ ಸಂಬಂಧಪಟ್ಟ ಸಂಸ್ಥೆಯವರೊಂದಿಗೆ ಶಾಮೀಲಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ಪಾವತಿ ಮಾಡಲು ಶಿಫಾರಸ್ಸು ಮಾಡಿರುತ್ತಾರೆ ಹಾಗೂ ಬಿಬಿಎಂಪಿಗೆ ಆರ್ಥಿಕ ನಷ್ಟ ಉಂಟುಮಾಡಿರುತ್ತಾರೆ.
ಆದ್ದರಿಂದ ಈ ಕೂಡಲೇ ಇದರ ಬಗ್ಗೆ ತನಿಖೆ ಮಾಡಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲಾಧ್ಯಕ್ಷರಾದ ಎನ್.ಪ್ರಸಾದ್ ರವರು ಮಾತನಾಡಿ 2ಕೋಟಿಗಿಂತ ಅನುದಾನವನ್ನು ಯಾವುದೇ ನಿಯಮಗಳನ್ನು ಪಾಲಿಸದೇ ನೇರವಾಗಿ ಗುತ್ತಿಗೆ ನೀಡಿ, ಹಣ ಬಿಡುಗಡೆ ಮಾಡಲು ಕ್ರಮವಹಿಸಿರುತ್ತಾರೆ.
ಬಿಬಿಎಂಪಿ ಎಲ್ಲ ವಲಯಗಳಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಕೆಟಿಪಿಪಿ ಕಾಯಿದೆ ಉಲ್ಲಂಘನೆಯಾಗಿದೆ ಪೌರ ಕಾರ್ಮಿಕರ ದಿನಾಚರಣೆ ಹೆಸರಿನಲ್ಲಿ ಕೊಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಇದರ ವಿರುದ್ದ ಬೃಹತ್ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.