ಕೋಲಾರ : ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ಬುಧವಾರ ತಲೆಮಾರಿಗೊಮ್ಮೆ ನಡೆಯುವ ಬಂಡಿ ದ್ಯಾವರ ಉತ್ಸವ ನಡೆಯಿತು. ಶತಮಾನಕ್ಕೊಮ್ಮೆ ಬಂಡಿದ್ಯಾವರ ಹಾಗೂ ದೀಪ ಕೊಡುವ, ಹೂ ಮುಡಿಸುವ ವಿಶಿಷ್ಠ ಆಚರಣೆ ನಡೆಯುತ್ತದೆ. ಅದರಂತೆ ಕಳೆದ 43 ವರ್ಷಗಳ ಹಿಂದೆ ನಡೆದಿದ್ದ ಉತ್ಸವವನ್ನು ನೆಡೆಸಲಾಗಿದೆ.

ಐದು ದಿನಗಳ ಕಾಲ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವರುಗಳಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆದೆ. ಅದರಲ್ಲೂ ಗ್ರಾಮದವರೆಲ್ಲ ಸೇರಿ ಎಲ್ಲಾ ಶಕ್ತಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಇದರ ಉದ್ದೇಶ. ಅಲ್ಲದೆ ಮುಂದಿನ ತಲೆಮಾರಿನ ನವ ಜೋಡಿಗೆ ದೀಪ ಕೊಡುವುದು, ಅವರಿಗೆ ಮಕ್ಕಾಳಾಗಿದಿದ್ದರೆ, ಅವರಿಗೆ ಕಿವಿ ಚುಚ್ಚುವುದು, ಹೊಸದಾಗಿ ಮದುವೆಯಾಗಿದ್ದರೆ ಹೂ ಮುಡಿಸುವ ಸಂಪ್ರದಾಯ ಇದಾಗಿದೆ. ಅಂದರೆ, ಶತಮಾನದ ಜವಾಬ್ದಾರಿಗಳನ್ನು ಮತ್ತೊಂದು ತಲೆ ಮಾರಿನವರಿಗೆ ಹಸ್ತಾಂತರ ಮಾಡುವುದು ಈ ಬಂಡಿ ದ್ಯಾವರ ಉದ್ದೇಶವಾಗಿದೆ. ಅದರಂತೆ ತಮ್ಮ ಹಳೆಯ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಈ ಬಂಡಿ ದ್ಯಾವರ ಆಚರಣೆ ಮಾಡಲಾಗುತ್ತಿದೆ ಗ್ರಾಮದಲ್ಲಿರುವ ದೇವಾಲಯಗಳಿಗೆ ಸುಣ್ಣಬಣ್ಣ ಬಳಿದು ಸಿದ್ದ ಮಾಡಿಕೊಂಡು ಗ್ರಾಮದ ಜನರೆಲ್ಲರೂ ಕೂಡಾ ತಮ್ಮ ತಮ್ಮ ಮನೆಗಳಿಗೆ ಸುಣ್ಣಬಣ್ಣ ಬಳಿದು ಹಬ್ಬಕ್ಕೆ ತಯಾರಿ ಮಾಡಿಕೊಂಡು ಈ ಆರು ದಿನಗಳ ಕಾಲ ಊರಿನ ಹೊರಗಿನವರು, ಕುಲಕ್ಕೆ ಸಂಬOಧಪಟ್ಟವರು ಎಲ್ಲರೂ ಕೂಡಾ ಗ್ರಾಮಕ್ಕೆ ಬಂದು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.