ನಂದಿ ಬೆಟ್ಟಕ್ಕೆ ಪ್ರವಾಸಿಗರ ಕೊರತೆ! ಕಳೆದೊಂದು ತಿಂಗಳಿಂದ ಭೇಟಿ ನೀಡುವವರ ಸಂಖ್ಯೆ ಕುಸಿತ; ಕಾರಣವೇನು?

ಚಿಕ್ಕಬಳ್ಳಾಪುರ || ಇಂದಿನಿಂದ three daysಗಳ ಕಾಲ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿಒಂದಾದ ನಂದಿಬೆಟ್ಟಕ್ಕೆ ಪ್ರವಾಸಿಗರ ಕೊರತೆ ಕಾಡುತ್ತಿದೆ. ದಸರಾ ಸಂದರ್ಭದಲ್ಲಿ ಪ್ರವಾಸಿಗರಿಂದ ತುಂಬಿದ್ದ ನಂದಿ ಗಿರಿಧಾಮ ದೀಪಾವಳಿ ವೇಳೆಗೆ ಪ್ರವಾಸಿಗರ ಕೊರತೆ ಎದುರಿಸುವಂತಾಗಿತ್ತು. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿಪ್ರ ವಾಸಿಗರು ಗಿರಿಧಾಮಕ್ಕೆ ಲಗ್ಗೆ ಇಡುತ್ತಾರೆ. ಆದರೆ, ದಸರಾ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮವು ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದಿಗೂ ಗಡಿ ಹಂಚಿಕೊಂಡಿದೆ. ನಂದಿ ಪ್ರವಾಸಿಗರನ್ನು ನೆಚ್ಚಿಕೊಂಡು ದೊಡ್ಡಬಳ್ಳಾಪುರದ ನಂದಿ ಕ್ರಾಸ್‌, ಹೆಗ್ಗಡಿಹಳ್ಳಿ ಗ್ರಾಮ, ದೇವನಹಳ್ಳಿಯ ಕಾರಹಳ್ಳಿ ಸೇರಿದಂತೆ ನಾನಾ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು, ರೆಸಾರ್ಟ್‌, ಹೋಟೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸಾಮಾನ್ಯವಾಗಿ ಅಕ್ಟೋಬರ್‌ ತಿಂಗಳಲ್ಲಿ ದೀಪಾವಳಿ ಹಬ್ಬ ಹಾಗೂ ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ರಾಜ್ಯದ ನಾನಾ ಜಿಲ್ಲೆಗಳಿಂದ ಗಿರಧಾಮಕ್ಕೆ ಬರುವುದನ್ನು ಕಾಣುತ್ತೇವೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿಇಳಿಕೆ ಕಂಡುಬಂದಿದೆ.

ಅ.31 ಗುರುವಾರದಿಂದ ಆರಂಭವಾದ ದೀಪಾವಳಿ ಹಬ್ಬದ ವಾರಾಂತ್ಯದ ರಜೆಗಳು ಒಟ್ಟು 4 ದಿನಗಳ ಕಾಲ ಮುಂದುವರಿದಿದ್ದರೂ ಕೂಡ ನಂದಿಗೆ ಪ್ರವಾಸಿಗರನ್ನು ಕರೆತರುವಲ್ಲಿ ರಜಾ ದಿನಗಳು ನೆರವಾಗಿಲ್ಲ. ಇನ್ನೊಂದೆಡೆ ಬೆಟ್ಟದಲ್ಲಿ ಮಂಜು ಆವೃತ್ತವಾಗುವ ಪ್ರಮಾಣದಲ್ಲಿ ಇನ್ನೂ ಏರಿಕೆ ಕಾಣದ ಹಿನ್ನೆಲೆ ಪ್ರವಾಸಿಗರನ್ನು ಸೆಳೆಯುವಲ್ಲಿ ಹಿನ್ನಡೆಗೆ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿಮಂಜು ಬೆಟ್ಟವನ್ನು ಆವರಿಸಿದರೆ ಆದೃಶ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿಪ್ರವಾಸಿಗರು ಬೆಟ್ಟದೆಡೆ ಬರುವ ಸಾಧ್ಯತೆ ಹೆಚ್ಚು.

Leave a Reply

Your email address will not be published. Required fields are marked *