ಚಿರತೆದಾಳಿ : ಹಸು – ವ್ಯಕ್ತಿಗೆ ಗಾಯ, ಗ್ರಾಮಸ್ಥರಲ್ಲಿ ಆತಂಕ.

ಚಿರತೆದಾಳಿ : ಹಸು - ವ್ಯಕ್ತಿಗೆ ಗಾಯ, ಗ್ರಾಮಸ್ಥರಲ್ಲಿ ಆತಂಕ.

ಚಳ್ಳಕೆರೆ-23 ನಗರಕ್ಕೆ ಹೊಂದಿಕೊAಡಿರುವ ನನ್ನಿವಾಳ ಗ್ರಾಮಪಂಚಾಯಿತಿಯ ಬಂಡೆಹಟ್ಟಿ ಗ್ರಾಮದ ಸುತ್ತಮುತ್ತ ಕಳೆದ ಒಂದು ವಾರದಿಂದ ಚಿರತೆಯೊಂದು ರಾತ್ರಿ ವೇಳೆ ನಾಯಿ ಹಾಗೂ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಘಟನೆ ನಡೆದಿದೆ.

ಬಂಡೆಹಟ್ಟಿಯ ರಘು ಎಂಬ ವ್ಯಕ್ತಿ ಭಾನುವಾರ ಸಂಜೆ ದನಮೇಯಿಸುವ ಸಂದರ್ಭದಲ್ಲಿ ಏಕಾಏಕಿ ಬಂದ ಚಿರತೆ ಹಸುವಿನ ಮೇಲೆ ಎರಗಿ ಮೈ ಪರಚಿ, ಕಾಲಿಗೂ ಸಹ ಗಾಯಗೊಳಿಸಿದೆ. ಅದೇ ಸಂದರ್ಭದಲ್ಲಿ ಹಸುವನ್ನು ರಕ್ಷಿಸಲು ಮುಂದಾದ ರಘುವಿನ ಮೇಲೆ ಚಿರತೆ ಎಗರಿದ್ದು ರಘುವಿನ ಬಟ್ಟೆಗೆ ಮಾತ್ರ ಚಿರತೆ ಉಗುರು ತಾಗಿ ಬಟ್ಟೆ ಹರಿದಿದೆ. ಅದೇ ಸಂದರ್ಭದಲ್ಲಿ ಬಂದ ಟ್ರಾö್ಯಕ್ಟರ್‌ನಲ್ಲಿದ್ದ ಜನ ಕೂಗು ಹಾಕಿದಾಗ ಚಿರತೆ ಓಡಿಹೋಗಿದೆ. ಗಾಯಗೊಂಡ ಹಸುವಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆ ಹಿಡಿದು ಸಾರ್ವಜನಿಕರು ಹಾಗೂ ಪ್ರಾಣಿಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *