ರಾಜ್ಯದ ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ Chaluvarayaswamy

ರಾಜ್ಯದ ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ Chaluvarayaswamy

ಬೆಂಗಳೂರು : ಮಾವು ಬೆಳೆಗಾರರ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ ಎಂದು ರೈತ ಸಮಸ್ಯೆಗಳ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಮಾವಿಗೆ ಬೆಲೆ ಕುಸಿತವಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಕುರಿತು ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅನೇಕ ಸಚಿವರು ಸಿಎಂ ಮೇಲೆ ಒತ್ತಡ ಹೇರಿದ್ದರು. ಕೇಂದ್ರ ಸರ್ಕಾರದ ಸಹಕಾರಕ್ಕಾಗಿ ಸಚಿವ ಚೆಲುವರಾಯಸ್ವಾಮಿ ಅವರು ಪತ್ರ ಬರೆದಿದ್ದು, ಫೋನ್ ಮೂಲಕ ಹಾಗೂ ವಿಡಿಯೋ ಸಂವಾದದ ಮೂಲಕ ಸಮಸ್ಯೆ ತಿಳಿಸಿದ್ದರು.

ಮಾವು ಖರೀದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ₹2 ಸೇರಿಸಿ ಒಟ್ಟು ₹4 ಪ್ರತಿ ಕೆಜಿ ಬೆಂಬಲ ಬೆಲೆ ನಿಗದಿಪಡಿಸಿದೆ. 100 ಕ್ವಿಂಟಲ್ ಲಿಮಿಟ್ ನಿಗದಿಯಾಗಿದೆ. ಮಾರುಕಟ್ಟೆ ಬೆಲೆ ಪ್ರತಿ ಕ್ವಿಂಟಲ್ಗೆ ₹1616 ಆಗಿರಲಿದೆ. ಆಂದ್ರ ಪ್ರದೇಶದಲ್ಲಿ ಬಂದ್ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ನಾವು 21ನೇ ತಾರಿಖಿನಲ್ಲೇ ಪತ್ರ ಬರೆದಿದ್ದೆವು ವೀಡಿಯೋ ಸಂವಾದ ನಡೆಸಿದ್ದೆವು. ಕುಮಾರಸ್ವಾಮಿ 23ರಂದು ಪತ್ರ ಬರೆದಿದ್ದಾರೆ. ರಾಜ್ಯದ ಎಲ್ಲಾ ಸಮಸ್ಯೆಗಳಿಗೆ ಇಂತಹ ಸ್ಪಂದನೆ ನೀಡಲಿ.

Leave a Reply

Your email address will not be published. Required fields are marked *