ಬೆಂಗಳೂರು : ಕೃಷ್ಣ ಭೈರೇಗೌಡ ನೇರ ನುಡಿಯ ದಕ್ಷ ಕಂದಾಯ ಸಚಿವ ಎಂದು ಹೆಸರಾಗಿದ್ದಾರೆ. ಅದರೆ ರಾಜ್ಯದಲ್ಲಿ ಕಂದಾಯ ಇಲಾಖೆಯ ಕಚೇರಿಗಳು ಅದೆಷ್ಟು ಕುಲಗೆಟ್ಟು ಹೋಗಿವೆ ಎಂದರೆ ಅವುಗಳನ್ನು ಸರಿಮಾಡುವುದು ಕಷ್ಟದ ಕೆಲಸ.

ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವ ಕಡತಗಳನ್ನು ದುಡ್ಡಿನಾಸೆಗಾಗಿ ಅವುಗಳನ್ನು ಮುಂದೆ ಸಾಗಿಸದೆ ತಮ್ಮ ಮುಂದೆ ಇಟ್ಟುಕೊಂಡಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಬ್ಬ ಸಿಬ್ಬಂದಿಗೆ ಸಚಿವರು, ನೀವು ದೊಡ್ಡ ಸಾಹೇಬರು, ನಿಮಗೆ ಸಲಾಂ ಹೊಡೆದು ಪಾಪದಪೂಜೆ ಏನಾದರೂ ಮಾಡಬೇಕಾ? ಎಂದು ಕೇಳುತ್ತಾರೆ.