ಬೆಂಗಳೂರು: ಹೆಬ್ಬಾಳ ವಿಸ್ತರಿತ ಫ್ಲೈಓವರ್ ಆಗಸ್ಟ್ 18 ರಂದು ಲೋಕಾರ್ಪಣೆಯಾಯಿತು. ಅಲ್ಲದೆ, ಮುಂದಿನ ಮೂರು ತಿಂಗಳ ಒಳಗಾಗಿ ಮತ್ತೊಂದು ಲೂಪ್ ಕೂಡ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದರು. ಹೆಬ್ಬಾಳ ವಿಸ್ತರಿತ ಫ್ಲೈಓವರ್ ಉದ್ಘಾಟನೆಯೊಂದಿಗೆ ಆ ಭಾಗದಲ್ಲಿ ಸಂಚಾರ ದಟ್ಟಣೆಗೆ, ಟ್ರಾಫಿಕ್ ಜಾಮ್ಗೆ ಮುಕ್ತಿ ಸಿಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಮೇಲ್ಸೇತುವೆಯ ಹೊಸ ಲೂಪ್ ಸಂಚಾರಕ್ಕೆ ಮುಕ್ತವಾದರೂ ಹೆಬ್ಬಾಳ ಜಂಕ್ಷನ್ನಲ್ಲಿ ಪೀಕ್ ಅವರ್ನಲ್ಲಿ ವಾಹನಗಳು ತೆವಳುತ್ತಾ ಸಾಗುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಬೆಂಗಳೂರಿನ ಏರಿಯಲ್ ಕಂಟೆಂಟ್ ಕ್ರಿಯೇಟರ್, ಡ್ರೋನ್ ಪೈಲಟ್ ಶ್ರೀಹರಿ ಕಾರಂತ್ ಎಂಬವರು ಹೆಬ್ಬಾಳ ಜಂಕ್ಷನ್ ಪ್ರದೇಶದ ಸಂಚಾರ ದಟ್ಟಣೆಯ ಡ್ರೋನ್ ವಿಡಿಯೋ ಮಾಡಿ ಎಕ್ಸ್ ತಾಣದಲ್ಲಿ ಅಪ್ಲೋಡ್ ಮಾಡಿದ್ದು, ಈಗ ವೈರಲ್ ಆಗುತ್ತಿದೆ.
For More Updates Join our WhatsApp Group :