ಕರ್ನಾಟಕ ಸರ್ಕಾರವು 2021 ರಿಂದ ನವೆಂಬರ್ 11 ರಂದು ಒನಕೆ ಓಬವ್ವ ಜಯಂತಿಯನ್ನು ಆಚರಿಸಲು ಉಪಕ್ರಮವನ್ನು ಕೈಗೊಂಡಿದೆ. ಅಂತೆಯೇ ಇಂದು ಒನಕೆ ಓಬವ್ವ ಜಯಂತಿಯನ್ನು ಆಚರಿಸಲಾಗುತ್ತದೆ.
ನಾವು ಹಿಂದಿನ ವರ್ಷಗಳ ಸಾಮ್ರಾಜ್ಯಗಳ ಬಗ್ಗೆ ಯೋಚಿಸಿದಾಗ, ಮನಸ್ಸಿಗೆ ಬರುವ ಮೊದಲ ಆಲೋಚನೆಯು ಯೋಧರು, ಕುದುರೆಗಳ ಮೇಲೆ ಕಾದಾಳಿಗಳು ಮತ್ತು ಆ ಮಹಾನ್ ಯುದ್ಧಗಳು. ರಾಣಿ ಲಕ್ಷ್ಮೀಬಾಯಿ, ಟಿಪ್ಪು ಸುಲ್ತಾನ್ ಮುಂತಾದ ಅನೇಕ ಮಹಾನ್ ಹೋರಾಟಗಾರರು ನಮ್ಮ ಇತಿಹಾಸ ಪುಸ್ತಕಗಳಲ್ಲಿ ಇದ್ದಾರೆ ಮತ್ತು ನಮ್ಮ ಮನಸ್ಸಿನಲ್ಲಿಯೂ ಸ್ಥಾನ ಪಡೆದಿದ್ದಾರೆ. ಅಂತಹ ಒಂದು ಉದಾಹರಣೆಯೆಂದರೆ ಒನಕೆ ಓಬವ್ವ ತೋರಿದ ಧೈರ್ಯ ಮತ್ತು ಶೌರ್ಯ.
ಹೈದರಾಲಿಯ ಸೈನ್ಯದ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಒನಕೆ ಓಬವ್ವ ಸಾಹಸಗಾಥೆ ಅಜರಾಮರ. ಚಿತ್ರದುರ್ಗ ನೆನಪಾದಾಗ ಓಬವ್ವ ನೆನಪಿಗೆ ಬಂದೇ ಬರುತ್ತಾರೆ. 18ನೇ ಶತಮಾನದಲ್ಲಿ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ರಹನುಮಪ್ಪನ ಪತ್ನಿ ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಒನಕೆಯನ್ನು ಅಸ್ತ್ರವನ್ನಾಗಿಸಿಕೊಂಡ ಓಬವ್ವ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರುಗಳನ್ನು ಅದರಿಂದಲೇ ಹೋಡಿದು ಕೊಂದಿದ್ದಳು. ಕೊನೆಗೆ ಬೆನ್ನಹಿಂದೆಯಿಂದ ದಾಳಿ ಮಾಡಿದ ಸೈನಿಕನಿಂದ ವೀರ ಮರಣ ಅಪ್ಪಿದ್ದಳು.