ರಾಯಚೂರು: ದೇವದುರ್ಗದಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಮಾಜಿ ಪ್ರಧಾನಿಗಳ ಹಾಗೂ ಅಭಿನಂದನಾ ಸಮಾರಂಭದಲ್ಲಿಕ್ಕೆ ಚಾಲನೆ ನೀಡಿ ಮಾತನಾಡಿದರು.ಕೃಷ್ಣಾ ಬಚಾವತ್ ತೀರ್ಪೀನಂತೆ ಕರ್ನಾಟಕದ ಪಾಲಿಗೆ ನೀರು ಸಿಕ್ಕಿಲ್ಲ. ನೀರನ್ನು ಪಡೆಯಲು ಹಾಗೂ ರಾಜ್ಯವನ್ನು ಹಸಿರನ್ನಾಗಿ ಮಾಡಲು ರಾಜ್ಯದ ಜನತೆ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೇಳೆಯುವ ಅಗತ್ಯ ಇದೆ ಎಂದು ಹೇಳಿದರು.

ನನ್ನ ಜೀವ ಇರುವವರೆಗೂ ರೈತಪರ ಹೋರಾಟ ಮಾಡುತ್ತೇನೆ ನಾನು ರಾಜಕೀಯಕ್ಕೆ ಪ್ರವೇಶ ಮಾಡಿದಾಗಿನಿಂದಲ್ಲೂ ರೈತರು ಹಾಗೂ ಜನಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನ ಜೀವನ ಇರವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇನೆ. ಇದರ ಬಗ್ಗೆ ಎರಡು ಮಾತಿಲ್ಲ ಎಂದು ಹೇಳಿದರು.ನಮ್ಮದು ಕುಟುಂಬ ರಾಜಕಾರಣ ಎಂದು ಹೇಳುತ್ತಿದ್ದಾರೆ.
ನನಗೀಗ 93 ವರ್ಷ ಆದರೆ ಇನ್ನೂ ಎಷ್ಡು ಕಾಲ ಇರಬಹುದು ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ ಆದಾಗ 30 ಟಿಎಂಸಿ ನೀರನ್ನು ಹಿಡಿದಿದ್ರು. ನಮ್ಮ ನೀರು 129 ಟಿಎಂಸಿ. ಇಂದಿರಾ ಗಾಂಧಿ ಅವರು ಆಗ ತಮಿಳುನಾಡಿಗೆ ಕುಡಿಯಲು ನೀರಿಲ್ಲ ಅಂತ 5 ಟಿಎಂಸಿ ಬಿಡಿಸಿದ್ರು ಎಂದು ವಾಗ್ದಾಳಿ ನಡೆಸಿದರು.