ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಚಿ.ದತ್ತರಾಜು ವಿಧಿವಶರಾಗಿದ್ದಾರೆ. ಚಿ ದತ್ತರಾಜ್ ಕನ್ನಡ ಚಿತ್ರರಂಗದ ನಿರ್ದೇಶಕರಾಗಿದ್ದು, 90 ದಶಕದಲ್ಲಿ ಸಕ್ರಿಯವಾಗಿದ್ದ ಇವರು `ಮೃತ್ಯುಂಜಯ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಸಾಹಿತಿ ಚಿ.ಉದಯಶಂಕರ್ ಅವರ ಸಹೋದರ ನಿರ್ದೇಶಕ ಚಿ.ದತ್ತರಾಜ್ ಅವರು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಡಾ.ರಾಜಕುಮಾರ್ ಅಭಿನಯದ ಕೆರಳಿದ ಸಿಂಹ, ಅದೇ ಕಣ್ಣು, ಶೃತಿ ಸೇರಿದಾಗ , ಕಾಮನಬಿಲ್ಲು ಸೇರಿ ಹಲವು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು.