ಶಿವಮೊಗ್ಗ: ಮಳೆಗೆ ಮನೆ ಗೋಡೆ ಕುಸಿದು ದಂಪತಿ, ಮಕ್ಕಳಿಗೆ ಗಾಯ

ಶಿವಮೊಗ್ಗ: ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿದು ನಾಲ್ವರು ಗಾಯಗೊಂಡಿರುವ ಘಟನೆ ಶಿಕಾರಿಪುರ ತಾಲೂಕು ಕಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಮೂರ್ತಿ ಎಂಬವರಿಗೆ ಸೇರಿದ ಮನೆ ಶೇ.80ರಷ್ಟು ಕುಸಿದಿದೆ. ಶಿವಮೂರ್ತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಶಿವಮೂರ್ತಿ ಕೈಗೆ ಗಾಯವಾಗಿದ್ದರೆ, ಪತ್ನಿಯ ಮುಖದ ಮೇಲೆ ಗೋಡೆ ಬಿದ್ದು ಮೂಗಿಗೆ ಗಾಯವಾಗಿದೆ. ಇಬ್ಬರು ಮಕ್ಕಳು ಕೂಡ ಗಾಯಗೊಂಡಿದ್ದು, ನಾಲ್ವರನ್ನೂ ಗ್ರಾಮಸ್ಥರು ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *