ಸರ್ ದರ್ಶನ್ ಮತ್ತು ಯಶ್ ಕೆಸಿಸಿ ಸೀಸನ್ 3 ಗೆ ಬರುತ್ತಾರ..?

ಸಿನಿಮಾ : ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಎರಡು ಕೆಸಿಸಿ ಲೀಗ್ ಗಳನ್ನು ಮುಗಿಸಿ, ಇದೀಗ ಮೂರನೇ ಲೀಗ್ ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು ಈ ಬಗ್ಗೆ ಮಾಧ್ಯಮಗಳಿಗೆ ನಟ ಸುದೀಪ್ ಮಾಹಿತಿ ನೀಡಿದ್ದಾರೆ.

ಕನ್ನಡ ಚಲನಚಿತ್ರ ಕಪ್ ಸೀಸನ್ 3 ಗೆ ಎಲ್ಲಾ ನಟರಿಗೂ ಕೂಡ ಆಹ್ವಾನವನ್ನು ನೀಡಲಾಗಿದೆ. ಅವರಿಗೆ ಹೇಳಿಲ್ಲ, ಇವರಿಗೆ ಹೇಳಿಲ್ಲ ಎನ್ನುವ ಮಾತೇ ಇಲ್ಲ. ಇದು ಕನ್ನಡ ಚಲನಚಿತ್ರ ಕಪ್, ಕನ್ನಡ ಸಿನಿಮಾ ರಂಗ ಯಾರೊಬ್ಬರ ಸ್ವತ್ತು ಅಲ್ಲ ಎಂದು ತಿಳಿಸಿದರು.

ಮಾಧ್ಯಮದವರು ಪ್ರಶ್ನೆ ಕೇಳುವ ಮುನ್ನವೇ ಇದಕ್ಕೆಲ್ಲ ಉತ್ತರ ನೀಡಿದ ಸುದೀಪ್, ಸರ್ ಅವರು ಬರುತ್ತಾರ..? ಸರ್ ಇವರು ಬರುತ್ತಾರ..? ಅಂತ ಕೇಳಬೇಡಿ. ಎಲ್ಲರಿಗೂ ಕೂಡ ಆಹ್ವಾನ ಇದೆ. ಅವರ ಕೆಲಸದ ಜೊತೆಗೆ ಕೆಸಿಸಿ ಕ್ರಿಕೆಟ್ ಮ್ಯಾಚ್ ನಲ್ಲಿ ಭಾಗವಹಿಸಬೇಕು ಎಂದುಕೊಂಡರೆ ಖಂಡಿತವಾಗಿ ಎಲ್ಲರು ಬರುತ್ತಾರೆ ಎಂದು ಸ್ಪಷ್ಟತೆಯನ್ನು ನೀಡಿದರು.

Pragati TV Social Connect for more latest u

Leave a Reply

Your email address will not be published. Required fields are marked *