ಕಬ್ಬಿಣದ ಸಲಾಕೆಯಿಂದ ಮನೆ ಬಾಗಿಲು ಮೀಟಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.

ರಾಮನಗರ || ಸರ್ಕಾರದ e-asset ಸಾಫ್ಟ್ವೇರ್ ಹ್ಯಾಕ್, ದಾಖಲೆಗಳ ತಿದ್ದುಪಡಿಸಿದ್ದ ಮೂವರ ಬಂಧನ

ಬೆಂಗಳೂರು:  ಕೆ ಆರ್ ಪುರಂ ಪೊಲೀಸರ ಕಾರ್ಯಾಚರಣೆಯಿಂದ ಕುಖ್ಯಾತ ಮನೆಗಳ್ಳನನ್ನು ಬಂದಿಸಲಾಗಿದೆ. ಕೆಜಿಎಫ್ ನ ಕುಖ್ಯಾತ ಮನೆಗಳ್ಳ ಅಜ್ಜು ಅಲಿಯಾಸ್ ಜ್ಞಾನ ಪ್ರಕಾಶ್ ಬಂದಿತ ವ್ಯಕ್ತಿ. ಕೆಜಿಎಫ್ ನ ಸುಸೇನ್ ಪಾಳ್ಯ ದ ಅಜ್ಜೂ ಅಲಿಯಾಸ್ ಜ್ಞಾನಪ್ರಕಾಶ ಕಬ್ಬಿಣದ ಸಲಾಕೆಯಿಂದ ಮನೆ ಬಾಗಿಲು ಮೀಟಿ ಕಳ್ಳತನ ಮಾಡುತ್ತಿದ್ದ ಆರೋಪಿ, ಅಜ್ಜು ಕುಟುಂಬದ ಅಷ್ಟು ಮಂದಿಯದ್ದು ಕೂಡ ಕಳ್ಳತನವೇ ವೃತ್ತಿಯಾಗಿತ್ತು.

ಅಜ್ಜು ಜೊತೆಗೆ ಮತ್ತೊಬ್ಬ ಕೆಜಿಎಫ್ ನ ಕುಖ್ಯಾತ ಮನೆಕಳ್ಳ ನರಸಿಂಹಲು ಎಂಬಾತನ್ನು ಸಹ ಬಂದಿಸಲಾಗಿದೆ. ಸಿಸಿಟಿವಿಯನ್ನು ಆದರಿಸಿ ಆರೋಪಿಗಳನ್ನ ಬಂಧಿಸಿದ್ದಾರೆ ಕೆ ಆರ್ ಪುರಂ ಪೊಲೀಸರು ಹಾಗೂ ಬಂಧಿತರಿOದ ೪೦ ಲಕ್ಷ ಮೌಲ್ಯದ ೪೦೦ ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *